ಮಲ್ಯ ಮೇಲ್ಮನವಿ ತಿರಸ್ಕೃತ
Team Udayavani, Apr 9, 2019, 6:30 AM IST
ಲಂಡನ್: ಗಡೀಪಾರು ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಉದ್ಯಮಿ ವಿಜಯ್ ಮಲ್ಯ ಅರ್ಜಿಯನ್ನು ಇಂಗ್ಲೆಂಡ್ ಕೋರ್ಟ್ ತಳ್ಳಿ ಹಾಕಿದ್ದು, ಮಲ್ಯಗೆ ಭಾರೀ ಹಿನ್ನಡೆ ಉಂಟಾದಂತಾಗಿದೆ.
9 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೆ ವಿದೇಶಕ್ಕೆ ತೆರಳಿರುವ ಮಲ್ಯ ಗಡೀಪಾರಿಗೆ ಕಳೆದ ಡಿಸೆಂಬರ್ನಲ್ಲಿ ಕೋರ್ಟ್ ಆದೇಶಿ ಸಿತ್ತು. ಅಲ್ಲದೆ ಫೆಬ್ರವರಿ ಯಲ್ಲಿ ಕೋರ್ಟ್ ಆದೇಶಕ್ಕೆ ಇಂಗ್ಲೆಂಡ್ ಗೃಹ ಸಚಿವ ಸಾಜಿದ್ ಜಾವೇದ್ ಕೂಡ ಸಹಿ ಹಾಕಿ ದ್ದರು. ಸದ್ಯ ಇಂಗ್ಲೆಂಡ್ ಹೈಕೋರ್ಟ್ ನ್ಯಾಯಾಧೀಶ ವಿಲಿಯಮ್ ಡೇವಿಸ್ ಅರ್ಜಿ ತಳ್ಳಿ ಹಾಕಿ ದರೂ ಮಲ್ಯ ಗಡೀಪಾರು ಇನ್ನೂ ವಿಳಂಬವಾಗಲಿದೆ. ಯಾಕೆಂದರೆ ತನ್ನ ಅರ್ಜಿಯ ಮೌಖೀಕ ವಿಚಾರಣೆಗೆ ಅವಕಾಶ ಕೋರಲು ಐದು ದಿನ ಗಳ ಕಾಲಾವಕಾಶ ಮಲ್ಯಗೆ ಇರಲಿದೆ. ಅಂದರೆ ಶುಕ್ರವಾರ ದೊಳಗೆ ಮಲ್ಯ ಈ ಸಂಬಂಧ ವಿನಂತಿ ಮಾಡ ಬಹುದು. ಈ ಅರ್ಜಿ ಆಧರಿಸಿ ಕೋರ್ಟ್ ಮೌಖೀಕ ವಿಚಾರಣೆ ನಡೆಸಲಿದ್ದು, ಪ್ರಕರಣದ ಸಂಪೂರ್ಣ ವಿಚಾ ರಣೆ ನಡೆಸಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ