ಮಲ್ಯ ಹರಕೆಯ ಕುರಿಯಾಗಲ್ಲ: ಜಡ್ಜ್
Team Udayavani, Apr 12, 2019, 6:00 AM IST
ಲಂಡನ್: ಉದ್ಯಮಿ ವಿಜಯ್ ಮಲ್ಯ ಗಡಿಪಾರು ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿ ಯನ್ನು ಸಮ್ಮತಿಸಲು ನಿರಾಕರಿಸಿದ್ದ ಲಂಡನ್ ಕೋರ್ಟ್ ಜಡ್ಜ್ ವಿಲಿಯಮ್ ಡೇವಿಸ್, ಭಾರತಕ್ಕೆ ಮಲ್ಯರನ್ನು ಗಡಿಪಾರು ಮಾಡಿದರೆ ಹರಕೆಯ ಕುರಿಯಾಗುತ್ತಾರೆ ಎಂಬ ವಾದ ಹುಸಿ ಎಂದಿ ದ್ದಾರೆ. ಏಪ್ರಿಲ್ 5 ರಂದು ಆದೇಶ ಹೊರಡಿ ಸಿರುವ ಜಡ್ಜ್, ಗಡಿಪಾರು ಆದೇಶದ ವಿರುದ್ಧ ಪುನಃ ವಿಚಾರಣೆ ನಡೆಸಲು ನಿರಾಕರಿಸಿ, ಅರ್ಜಿ ತಳ್ಳಿಹಾಕಿದ್ದರು. ಸದ್ಯ ಮಲ್ಯಗೆ ಶುಕ್ರ ವಾರದ ವರೆಗೆ ಮೌಖೀಕ ವಿಚಾರಣೆ ನಡೆಸುವಂತೆ ಕೋರುವ ಅವಕಾಶವಿದೆ. ಒಂದೊಮ್ಮೆ ಮೌಖೀಕ ವಿಚಾರಣೆ ನಡೆಸಲೂ ಕೋರ್ಟ್ ಅವಕಾಶ ನೀಡದಿದ್ದರೆ, ಮಲ್ಯ ಎದುರು ಬೇರೆ ಯಾವುದೇ ಕಾನೂನು ದಾರಿ ಇರು ವುದಿಲ್ಲ. ಆಗ ಗಡಿಪಾರು ಮಾಡುವು ದೊಂದೇ ಅವರಿಗೆ ಇರುವ ಆಯ್ಕೆಯಾಗಿರುತ್ತದೆ.
ಇಂಗ್ಲೆಂಡ್- ಭಾರತದ ಗಡಿಪಾರು ಒಪ್ಪಂದಕ್ಕೆ ಅನುಗುಣ ವಾಗಿ ಎರಡೂ ದೇಶಗಳು ನಡೆದು ಕೊಳ್ಳಬೇಕು. ಆದರೆ ಹಾಗೆ ನಡೆದುಕೊಳ್ಳುತ್ತಿ ವೆಯೇ ಎಂದು ವಿಚಾರಿಸಲು ಅವಕಾಶವಿಲ್ಲ. ಭಾರತ ಸರಕಾರ ಒಪ್ಪಂದಕ್ಕೆ ಬದ್ಧವಾಗಿರುವುದಿಲ್ಲ ಎಂದು ಸಾಬೀತುಪಡಿಸಲು ಸೂಕ್ತ ಆಧಾರಗಳಿಲ್ಲ ಎಂದು ಕೋರ್ಟ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ