ಬ್ಯಾಂಕ್‌ ದರೋಡೆ ಮಾಡಲು ಉಬರ್‌ ಕ್ಯಾಬ್‌ ಬುಕ್: ಕಳ್ಳನಿಗಾಗಿ ಕಾದ ಅಮಾಯಕ ಚಾಲಕ…!


Team Udayavani, Nov 21, 2022, 5:29 PM IST

TDY-1

ವಾಷಿಂಗ್ಟನ್‌: ಎಲ್ಲಿಗಾದರೂ ಹೋಗಬೇಕಾದರೆ ಓಲಾ- ಉಬರ್‌ ಕ್ಯಾಬ್‌ ಬುಕ್‌ ಮಾಡುವುದು ಸಾಮಾನ್ಯ ಆದರೆ ಇಲ್ಲೊಬ್ಬ ವ್ಯಕ್ತಿ ಉಬರ್‌ ಕ್ಯಾಬನ್ನು ಅಪರಾಧ ಕೃತ್ಯಕ್ಕೆ ಬಳಸಿ ಜೈಲು ಸೇರಿದ್ದಾನೆ.

ಅಮೆರಿಕದ ಸೌತ್‌ಫೀಲ್ಡ್, ಮಿಚಿಗನ್ ಮೂಲದ 42 ವರ್ಷದ ಜೇಸನ್ ಕ್ರಿಸ್ಮಸ್ ಎಂಬ ವ್ಯಕ್ತಿ ಬುಧವಾರ ( ನ.16 ರಂದು) ಉಬರ್‌ ಬುಕ್‌ ಮಾಡಿದ್ದಾನೆ. ಉಬರ್‌ ಕ್ಯಾಬ್‌ ಬಂದ ಬಳಿಕ ಜೇಸನ್ ಕ್ರಿಸ್ಮಸ್ ಬ್ಯಾಂಕ್‌ ನತ್ತ ಹೋಗುವಂತೆ ನಿರ್ದೇಶನ ನೀಡಿದ್ದಾನೆ. ನಾನು ಬರುವವರೆಗೂ ಇಲ್ಲೇ ಇರು ಎಂದು ಚಾಲಕನಿಗೆ ಹೇಳಿದ್ದಾನೆ.

ಡೈಲಿ ಸ್ಟಾರ್‌ ವರದಿಯ ಪ್ರಕಾರ, ಕಾರಿನಿಂದ ಇಳಿದ ಬಳಿಕ ಜೇಸನ್ ಕ್ರಿಸ್ಮಸ್ ಮುಖಕ್ಕೆ ಮುಸುಕನ್ನು (ಮಾಸ್ಕ್‌) ಧರಿಸಿಕೊಂಡು ಬ್ಯಾಂಕ್‌ ನೊಳಗೆ ಹೋಗಿದ್ದಾನೆ. ಅಲ್ಲಿ ಗನ್‌ ತೋರಿಸಿ, ಬ್ಯಾಂಕ್‌ ಸಿಬ್ಬಂದಿಗಳಿಗೆ ಭಯ ಹುಟ್ಟಿಸಿ ದರೋಡೆ ಮಾಡಿದ್ದಾನೆ. ದರೋಡೆಗೈದು ಕಾರಿನ ಚಾಲಕನ ಬಳಿ ಮನೆಗೆ ಬಿಡುವಂತೆ  ಸೂಚನೆ ನೀಡಿದ್ದಾನೆ ಎಂದು ವರದಿ ತಿಳಿಸಿದೆ.

ಕೃತ್ಯ ನಡೆದ ಬಳಿಕ ಬ್ಯಾಂಕ್‌ ನ ಸೈರನ್‌ ಅಪಾಯದ ಘಂಟೆಯಾಗಿ ಹೊಡೆದಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು, ಸಿಸಿಟಿವಿಯನ್ನು ಪರಿಶೀಲಿಸಿ ಕಾರಿನ ನಂಬರ್‌ ಪ್ಲೇಟ್‌ ಪತ್ತೆ ಹಚ್ಚಿ ಚಾಲಕನನ್ನು ವಿಚಾರಿಸಿದ್ದಾರೆ. ಚಾಲಕನಿಗೆ ದರೋಡೆಯ ವಿಚಾರವೇ ತಿಳಿದಿಲ್ಲ. ಚಾಲಕ ಜೇಸನ್ ಕ್ರಿಸ್ಮಸ್ ವಿಳಾಸವನ್ನು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೌತ್‌ಫೀಲ್ಡ್ ಪೊಲೀಸರು ಜೇಸನ್ ಕ್ರಿಸ್ಮಸ್ ಅಪಾರ್ಟ್‌ ಮೆಂಟ್‌ ಗೆ ಬಂದು ಆತನನ್ನು ಸೆರೆ ಹಿಡಿದಿದ್ದಾರೆ. ಪೊಲೀಸರ ಕ್ಯಾಮೆರಾದಲ್ಲಿ ಆರೋಪಿ ದೃಶ್ಯ ಸೆರೆಯಾಗಿದೆ.

ಆರೋಪಿಯ ಕಿಸೆ ಹಾಗೂ ಬಟ್ಟೆಯಲ್ಲಿ ಕೆಂಪು ಬಣ್ಣದ ಕಲೆ ಇತ್ತು. ಇದನ್ನು ನೋಡಿದ ಪೊಲೀಸರು ಗಾಬರಿಗೊಂಡು ಆರೋಪಿಗೆ ಯಾರೋ ಶೂಟ್‌ ಮಾಡಿದ್ದಾರೆ ಅಥವಾ ಗಾಯವಾಗಿರಬಹುದು ಎಂದು ಶಂಕಿಸುತ್ತಾರೆ ಆದರೆ ಅದು ಬ್ಯಾಂಕ್‌ ನಲ್ಲಿದ್ದ ಕೆಂಪು ಬಣ್ಣದ ಪ್ಯಾಕೆಟ್‌ ಆಗಿತ್ತು. ಬ್ಯಾಂಕ್‌ ನಿಂದ ದರೋಡೆಗೈದ ಹಣವೂ ಕೆಂಪು ಬಣ್ಣದಲ್ಲಿ ನೆನೆದು ಹೋಗಿದೆ.

ಘಟನೆಯ ಬಗ್ಗೆ ಮಾತನಾಡಿದ ಪೊಲೀಸ್ ಮುಖ್ಯಸ್ಥ ಎಲ್ವಿನ್ ಬ್ಯಾರೆನ್ ಜೇಸನ್ ಕ್ರಿಸ್ಮಸ್ ಯಾಕೆ ಈ ಕೃತ್ಯ ಮಾಡಿದ್ದಾರೆ ಎನ್ನುವುದು ವಿಚಾರಣೆ ಬಳಿಕ ತಿಳಿಯಲಿದೆ. ರಜಾದಿನಗಳು ಬರುತ್ತಿದ್ದಂತೆ, ಕೆಲವೊಮ್ಮೆ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ ಎಂದು ಅವರು ಹೇಳಿದರು.

ಟಾಪ್ ನ್ಯೂಸ್

4-mangaluru

ಮಂಗಳೂರು: 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು

ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್

ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್

tdy-10

ಚನ್ನಪಟ್ಟಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಯಾರು?

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ODI World Cup 2023: Mumbai, Ahmedabad To Hosts Semis And Final

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?

ರಾಮನವಮಿ ಆಚರಣೆ ಮಾಡುವುದು ಹೇಗೆ? ರಾಮನವಮಿಯ ಮಹತ್ವ ಏನು…

ರಾಮನವಮಿ ಆಚರಣೆ ಮಾಡುವುದು ಹೇಗೆ? ರಾಮನವಮಿಯ ಮಹತ್ವ ಏನು…

3–sulya

ಕಾಣಿಯೂರು: ದೈವ ನರ್ತನದ ವೇಳೆ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ದೈವ ನರ್ತಕ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದಲ್ಲಿ ಪಾಕ್‌ ಸರ್ಕಾರದ ಟ್ವಿಟರ್‌ ಖಾತೆಗೆ ಮತ್ತೆ ತಡೆ

ಭಾರತದಲ್ಲಿ ಪಾಕ್‌ ಸರ್ಕಾರದ ಟ್ವಿಟರ್‌ ಖಾತೆಗೆ ಮತ್ತೆ ತಡೆ

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

ಪೋಪ್‌ ಫ್ರಾನ್ಸಿಸ್‌ ನೋಡಿ ಬೆರಗಾದ ಜನ! ಫೋಟೋ ವೈರಲ್‌

ಪೋಪ್‌ ಫ್ರಾನ್ಸಿಸ್‌ ನೋಡಿ ಬೆರಗಾದ ಜನ! ಫೋಟೋ ವೈರಲ್‌

“ಸುಡುವ ಕುಲುಮೆ’ ಈ ಗ್ರಹ! ಭೂಮಿಯನ್ನೇ ಹೋಲುವ ಗ್ರಹದ ನೈಜ ಮುಖ ದರ್ಶನ

“ಸುಡುವ ಕುಲುಮೆ’ ಈ ಗ್ರಹ! ಭೂಮಿಯನ್ನೇ ಹೋಲುವ ಗ್ರಹದ ನೈಜ ಮುಖ ದರ್ಶನ

ಮೆಕ್ಸಿಕೋ ಅಗ್ನಿ ದುರಂತ: 40 ಜನರ ದುರ್ಮರಣ

ಮೆಕ್ಸಿಕೋ ಅಗ್ನಿ ದುರಂತ: 40 ಜನರ ದುರ್ಮರಣ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

TDY-15

ರಾಹುಲ್‌ ಕೋಲಾರಕ್ಕೆ ಬಂದರೇನು ಬದಲಾವಣೆ ಆಗಲ್ಲ

tdy-14

ಅಧಿಕಾರಿ ಕಚೇರಿ ಆವರಣದಲ್ಲೇ ನೀತಿ ಸಂಹಿತೆ ಉಲ್ಲಂಘನೆ

tdy-13

ಶ್ರೀರಂಗಪಟ್ಟಣ ಕೈನಲ್ಲಿ ಭುಗಿಲೆದ್ದ ಭಿನ್ನಮತ

firing

ಕಚೇರಿಯಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ ; ಸಹೋದ್ಯೋಗಿಯ ಮೇಲೆ ಗುಂಡು!

tdy-12

ಎಚ್‌.ಡಿ.ಕೋಟೆಯಲ್ಲಿ ಜನ ಸಾಮಾನ್ಯರಿಗೆ ಸಿಗದ ಜನೌಷಧ