ಬೆಳಗ್ಗೆ ತಿಂಡಿ ತಿನ್ನದ ಮಕ್ಕಳಿಗೆ ಮಾರ್ಕ್ಸ್ ಕಡಿಮೆ!
Team Udayavani, Nov 24, 2019, 5:41 PM IST
ಲಂಡನ್: ಶಾಲೆಗೆ ಹೋಗುವ ಗಡಿಬಿಡಿ.. ಇನ್ನೂ ಬಟ್ಟೆ ಹಾಕ್ಕೊಂಡಿಲ್ಲ, ಮಧ್ಯಾಹ್ನ ಬುತ್ತಿಗೆ ಹಾಕಿಲ್ಲ.. ಅಯ್ಯೋ.. ಬಸ್ ಬಂತೂ.. ಅನ್ನುತ್ತಾ ಮಕ್ಕಳು ಗಡಿಬಿಡಿ ಮಾಡ್ಕೊಂಡು ಬೆಳಗ್ಗಿನ ಉಪಾಹಾರ ಬಿಟ್ಟು ಶಾಲೆಗೆ ಹೋಗುತ್ತಿದ್ದರೆ, ಹೆತ್ತವರೇ ಹುಷಾರು!
ಬೆಳಗ್ಗಿನ ಉಪಾಹಾರವನ್ನು ಬಿಡುವುದರಿಂದ ಅದರ ಪರಿಣಾಮ ಮಕ್ಕಳು ಗಳಿಸುವ ಅಂಕ ಅರ್ಥಾತ್ ಕಲಿಕೆಯ ಮೇಲಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
ಬೆಳಗ್ಗೆ ತಿಂಡಿ ತಿನ್ನುವುದು ಅತಿ ಅಗತ್ಯ. ಇದು ಮೆದುಳಿನ ಆಹಾರವಾಗಿದ್ದು, ಕಾರ್ಯಚಟುವಟಿಕೆ ಉತ್ತಮವಾಗಿರಲು ನೆರವು ನೀಡುತ್ತದೆ. ಉಪಾಹಾರ ತಿನ್ನದಿದ್ದರೆ, ಮಕ್ಕಳ ಓದುವಿಕೆ ಸಾಮರ್ಥ್ಯ, ನೆನಪಿನ ಶಕ್ತಿ ಕುಂಠಿತಗೊಳ್ಳುತ್ತದೆ ಎಂದು ಲೀಡ್ಸ್ ವಿವಿಯ ಸಂಶೋಧಕ ತಂಡ ಶೋಧನೆ ನಡೆಸಿ ಹೇಳಿದೆ. ಇದನ್ನು ಜರ್ನಲ್ ಫ್ರಾಂಟಿಯರ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಉಪಾಹಾರ ತ್ಯಜಿಸಿದ ಕೂಡಲೇ ಮಕ್ಕಳಿಗೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ ಎಂದು ತಿಳಿದು ಬಂದಿದೆ. ಸಂಶೋಧನೆಗೆ 294 ವಿದ್ಯಾರ್ಥಿಗಳನ್ನು ಪರಿಶೀಲಿಸಲಾಗಿದ್ದು, ಇವರಲ್ಲಿ ಶೇ.29ರಷ್ಟು ಮಂದಿ ಬೆಳಗ್ಗೆ ಉಪಾಹಾರ ಸೇವಿಸದವರಾಗಿದ್ದು ಶೇ.18ರಷ್ಟು ಮಂದಿ ಅಪರೂಪಕ್ಕೊಮ್ಮೆ, ಶೇ.53ರಷ್ಟು ಮಂದಿ ಯಾವತ್ತೂ ಉಪಾಹಾರ ಸೇವಿಸುವವರಾಗಿದ್ದಾರೆ. ಇವರನ್ನು ಸಂಶೋಧನೆಗೊಳಪಡಿಸಿದಾಗ ಗಳಿಸುವ ಅಂಕದಲ್ಲಿ ವ್ಯತ್ಯಾಸವಿರುವುದು ಗೋಚರವಾಗಿದೆ. ಗ್ರೇಡ್ಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
MUST WATCH
ಹೊಸ ಸೇರ್ಪಡೆ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ