ಮಂಗಳನ ಅಂಗಳಕ್ಕೆ ರೋವರ್ ಇಳಿಸುವಲ್ಲಿ ಭಾರತ ಮೂಲದ ಸ್ವಾತಿ ಮೋಹನ್ ಯಶಸ್ವಿ..!

ಡಾ. ಸ್ವಾತಿ ಮೋಹನ್ ಯಾರು..?

Team Udayavani, Feb 19, 2021, 1:22 PM IST

Meet Dr Swati Mohan, the Indian-American scientist behind NASA’s rover landing on Mars

ವಾಷಿಂಗ್ಟನ್ :  ನಾಸಾದ ರೋವರ್ ಮಿಷನ್ ಮಂಗಳನ ಅಂಗಳಕ್ಕೆ ಯಶಸ್ವಿಯಾಗಿ ಇಳಿದಿದೆ. ಮಂಗಳ ಗ್ರಹದ ಮೇಲೆ ಏನ್ಶಿಯಂಟ್ ಜೀವಿಗಳ ವಾಸದ ಬಗ್ಗೆ ಹಾಗೂ ಅಲ್ಲಿ ಖಗೋಳ ವಿಜ್ಞಾನದ ಅನ್ವೇಷಣೆಗಾಗಿ ರೋವರನ್ನು ಕಳುಹಿಸಲಾಗಿತ್ತು.

ನಾಸಾದ ಮಹತ್ವಾಕಾಂಶೆಯ ಯೋಜನೆಯೆಂದು ಹೇಳಲಾಗುತ್ತಿದ್ದ ರೋವರ್ ಯಶಸ್ವಿಯಾಗಿ ಮಂಗಳನ ಅಂಗಳಕ್ಕೆ ತಲುಪಿರುವಲ್ಲಿ ಭಾರತ ಮೂಲದ ಮಹಿಳೆಯೋರ್ವರ ಪಾಲಿರುವುದು ಇಡೀ ಭಾರತೀಯರಿಗೆ ಹೆಮ್ಮೆ ತರುವಂತಹ ವಿಚಾರವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಹೌದು, ಈ ರೋವರ್ ನ ನಿಯಂತ್ರಣ ಹಾಗೂ ಪಥ ಮಾರ್ಗದರ್ಶನ ಇಂಜಿನಿಯರ್ ಆಗಿದ್ದವರು ಡಾ. ಸ್ವಾತಿ ಮೋಹನ್, ಭಾರತದ ಮೂಲದವರು.

ಓದಿ : 391ನೇ ಛತ್ರಪತಿ ಶಿವಾಜಿ ಜಯಂತಿ : ಪ್ರಧಾನಿ ಸೇರಿ ಹಲವು ಪ್ರಮುಖ ನಾಯಕರಿಂದ ಶುಭಾಶಯ

ಈ ಐತಿಹಾಸಿಕ ಯಶಸ್ವಿ ಕಾರ್ಯಕ್ಕೆ ಭಾರತ ಮೂಲದ ಮಹಿಳೆಯೋರ್ವರ ನಿರ್ದೇಶನ ಇತ್ತು ಎನ್ನುವುದೇ ಸಹಸ್ರ ಸಹಸ್ರ ಭಾರತೀಯರಿಗೆ ಸಂತೋಷದ ವಿಚಾರವಾಗಿದೆ. ಅದರಲ್ಲೂ ಕರ್ನಾಟಕದ ಹಿನ್ನಲೆಯವರು ಎನ್ನುವುದು ಇನ್ನೂ ದೊಡ್ಡ ಹೆಮ್ಮೆ.

ಡಾ. ಸ್ವಾತಿ ಮೋಹನ್ ಯಾರು..?

ಅಮೇರಿಕಾದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಕನ್ನಡಿಗರಾದ ಜ್ಯೋತಿ ಹಾಗೂ ಮೋಹನ್ ದಂಪತಿಗಳ ಪುತ್ರಿ, ಡಾ. ಸ್ವಾತಿ ಮೋಹನ್.

ಕ್ಯಾಲಿಫೋರ್ನಿಯಾದ ನಾಸಾದ ನಿಯಂತ್ರಣ ಕೊಠಡಿಯಲ್ಲಿ ಗೈಡೆನ್ಸ್ ಆ್ಯಂಡ್ ನೇವಿಗೇಶನ್ ಹಾಗೂ ಕಂಟ್ರೋಲ್ ಯೋಜನೆಯ ತಂಡದ ನಡುವೆ ಸ್ವಾತಿ ಯಶಸ್ವಿಯಾಗಿ ರೋವರ್ ನ್ನು ಮಂಗಳನ ಅಂಗಳಕ್ಕೆ ಇಳಿಸಿದ್ದಾರೆ.

ನಾಸಾ ವಿಜ್ಞಾನಿ ಡಾ ಮೋಹನ್ ಅವರು ಕೇವಲ ಒಂದು ವರ್ಷದವರಾಗಿದ್ದಾಗ ಭಾರತದಿಂದ ಅಮೆರಿಕಕ್ಕೆ ತಮ್ಮ ತಂದೆ ತಾಯಿಯವರೊಂದಿಗೆ ವಲಸೆ ಬಂದರು. ಸ್ವಾತಿ, ತಮ್ಮ ಬಾಲ್ಯದ ಬಹು ಭಾಗವನ್ನು ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ ಕಳೆದಿದ್ದಾರೆ. 9ನೇ ವಯಸ್ಸಿನಲ್ಲಿ, ಮೊದಲ ಬಾರಿಗೆ ವೀಕ್ಷಿಸಿದ ‘ಸ್ಟಾರ್ ಟ್ರೆಕ್'(ಅಮೇರಿಕನ್ ಟೆಲಿವಿಷನ್ ಸೀರೀಸ್) ಸ್ವಾತಿಯವರನ್ನು ಪ್ರಭಾವಿಸಿತು.

ಓದಿ : ಯಕ್ಷರಂಗದ ಸಿಡಿಲಮರಿ ಡಾ.ಶ್ರೀಧರ ಭಂಡಾರಿ ನಿಧನ: ಕೊಳ್ತಿಗೆ ನಾರಾಯಣ ಗೌಡರಿಂದ ನುಡಿ ನಮನ

ಸ್ವಾತಿ, ತನ್ನ 16 ವರ್ಷದ ತನಕ ಶಿಶು ವೈದ್ಯರಾಗಲು ಬಯಸಿದ್ದರು. ಆದಾಗ್ಯೂ, ಅವರ ಮೊದಲ ಭೌತಶಾಸ್ತ್ರ ತರಗತಿ ಮತ್ತು ಅವರಿಗಿದ್ದ ಉತ್ತಮ ಶಿಕ್ಷಕರ ಸಲಹೆಯ ಮೇರೆಗೆ, ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಆಸಕ್ತಿಯನ್ನು ಮುಂದುವರಿಸುವ ಉದ್ದೇಶದಿಂದ “ಎಂಜಿನಿಯರಿಂಗ್”  ಕ್ಷೇತ್ರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರು.

ಡಾ. ಸ್ವಾತಿ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್‌ ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದಿದ್ದಾರೆ ಮತ್ತು ಏರೋನಾಟಿಕ್ಸ್ ಎಂ ಐ ಟಿ ಯಿಂದ ಎಂ ಎಸ್ ಮತ್ತು ಪಿ ಎಚ್‌ ಡಿ ಪೂರ್ಣಗೊಳಿಸಿದ್ದಾರೆ.  ಸಿಎ ಪಾಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯಲ್ಲಿ ಮೊದಲಿನಿಂದಲೂ ಸ್ವಾತಿ ರೋವರ್ ಮಿಷನ್‌ ನ ವಿಜ್ಞಾನಿಗಳ ತಂಡದಲ್ಲಿದ್ದರು, ಡಾ.ಮೋಹನ್ ಅವರು ನಾಸಾದ ವಿವಿಧ ಪ್ರಮುಖ ಕಾರ್ಯಗಳಲ್ಲಿ ಪಾಲ್ಪಡೆದಿದ್ದಾರೆ. ಭಾರತೀಯ-ಅಮೇರಿಕನ್ ವಿಜ್ಞಾನಿ ಡಾ. ಸ್ವಾತಿ ಕ್ಯಾಸಿನಿ (ಶನಿಯ ಒಂದು ಮಿಷನ್) ಮತ್ತು ಗ್ರೇಲ್ (ಚಂದ್ರನಲ್ಲಿಗೆ ಒಂದು ಜೋಡಿ ರಚನೆಯ ಬಾಹ್ಯಾಕಾಶ ನೌಕೆಯ ಉಡಾವಣೆ) ಯೋಜನೆಗಳಲ್ಲಿ ಕೆಲಸ ಮಾಡಿದ್ದು, ನುರಿತ ವಿಜ್ಞಾನಿಯಾಗಿದ್ದಾರೆ.

ಇನ್ನು, ಬರೋಬ್ಬರಿ 203 ದಿನಗಳನ್ನು ತೆಗೆದುಕೊಂಡು ಈ ರೋವರ್ ಮಂಗಳನ ಅಂಗಳಕ್ಕಿಳಿದಿದೆ. ಸುಮಾರು 470 ರಿಂದ 472 ಮಿಲಿಯನ್ ಕಿಲೋಮೀಟರ್ ದೂರ ಈ ರೋವರ್ ತಲುಪಿದೆ. ಸದ್ಯಕ್ಕೆ ಪ್ರಾಥಮಿಕ ಹಂತದ ಯಶಸ್ವಿ ಕಂಡಿದ್ದು, ಮಂಗಳನ ಮೇಲ್ಮೈನಲ್ಲಿ ಏನ್ಶಿಯಂಟ್ ಸೂಕ್ಷ್ಮ ಜೀವಿಗಳ ವಾಸದ ವಿಚಾರವನ್ನೊಳಗೊಂಡು ಅಲ್ಲಿನ ಹಲವು ಮಾಹಿತಿಗಳನ್ನು ಭೂಮಿಗೆ ಕಳುಹಿಸಲಿದೆ.

ಓದಿ : ಮಾರುಕಟ್ಟೆಗೆ ಲಗ್ಗೆ ಇಡಲಿರುವ  Moto E7 Power… ವೈಶಿಷ್ಟ್ಯತೆಗಳೇನು?

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.