ಅಫ್ಘಾನಿಸ್ತಾನದ ಬಹುಕೋಟಿ ಸಂಪತ್ತು ತಾಲಿಬಾನ್ ಉಗ್ರರ ಕೈಗೆ ಸಿಗದು!

ಅಫ್ಘಾನ್‌ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ.

Team Udayavani, Aug 19, 2021, 2:47 PM IST

ಅಫ್ಘಾನಿಸ್ತಾನದ ಬಹುಕೋಟಿ ಸಂಪತ್ತು ತಾಲಿಬಾನ್ ಉಗ್ರರ ಕೈಗೆ ಸಿಗದು!

ವಾಷಿಂಗ್ಟನ್‌: ದೇಶವನ್ನು ತಾಲಿಬಾನಿಗಳು  ವಶಪಡಿಸಿಕೊಂಡಿದ್ದರೂ, ಸರಕಾರದ ಸಂಪತ್ತು ಅವರಿಗೆ ಸಿಗುವುದಿಲ್ಲ ಎಂದು ಅಫ್ಘಾನಿಸ್ಥಾನ ಸೆಂಟ್ರಲ್‌ ಬ್ಯಾಂಕ್‌ನ ಅಧ್ಯಕ್ಷ ಅಜ್ಮಲ್‌ ಅಹ್ಮದಿ ಹೇಳಿದ್ದಾರೆ. “ದ ಅಫ್ಘಾನಿಸ್ಥಾನ್‌ ಬ್ಯಾಂಕ್‌ (ಡಿಎಬಿ) ಸುಮಾರು 9 ಬಿಲಿಯನ್‌ ಡಾಲರ್‌ (6.68 ಲಕ್ಷ ಕೋಟಿ ರೂ.) ಮೌಲ್ಯದ ಸಂಪತ್ತನ್ನು ನಿರ್ವಹಿಸುತ್ತಿತ್ತು.  ಅದರಲ್ಲಿ 7 ಬಿಲಿಯನ್‌ ಡಾಲರ್‌ (5.19 ಲಕ್ಷ ಕೋಟಿ ರೂ.) ಚಿನ್ನ, ಬಾಂಡ್‌ಗಳು, ನಗದು ಮತ್ತು ಅಮೆರಿಕದ ಫೆಡರಲ್‌ ರಿಸರ್ವ್‌ನಲ್ಲಿ ಹೂಡಿಕೆ ರೂಪದಲ್ಲಿದೆ. ಬಹುತೇಕ ಎಲ್ಲ ಸಂಪತ್ತು ಹೊರ ದೇಶಗಳಲ್ಲಿಯೇ ಇದೆ. ದೇಶದಲ್ಲಿ ಭದ್ರತಾ ಸಮಸ್ಯೆ ಉಂಟಾದಾಗಿನಿಂದ ದೇಶಕ್ಕೆ ಹಣವೂ ಬಂದಿಲ್ಲ. ಕೇವಲ ಶೇ. 0.2ರಷ್ಟು ಸಂಪತ್ತು ಮಾತ್ರವೇ ದೇಶದಲ್ಲಿದೆ. ಹಾಗಾಗಿ ತಾಲಿಬಾನಿಗಳಿಗೆ ದೇಶದ ಸಂಪತ್ತು ಸಿಗುವುದಿಲ್ಲ ಎಂದಿದ್ದಾರೆ.

ಇದೇ ವೇಳೆ, ಅಮೆರಿಕದಲ್ಲಿ ಸುಮಾರು 9.5 ಬಿಲಿಯನ್‌ ಡಾಲರ್‌ ಮೌಲ್ಯದ ಅಫ್ಘಾನ್‌ ಸಂಪತ್ತಿದೆ. ಇಲ್ಲಿನ ಅಫ್ಘಾನ್‌ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ. ಯಾವುದೇ ಕಾರಣಕ್ಕೂ ಸಂಪತ್ತು ತಾಲಿಬಾನಿಗಳ ಕೈಗೆ ಸೇರದಂತೆ ನೋಡಿಕೊಳ್ಳಲಾಗುವುದು ಎಂದು ಅಮೆರಿಕ ಹೇಳಿದೆ.

ಅಂಗೈಯಲ್ಲಿ ಜೀವ ಹಿಡಿದು ಹೊರಟರು! :

ತಾಲಿಬಾನಿಗಳು ಇಡೀ ಅಫ್ಘಾನಿಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ಇನ್ನೂ 2-3 ದಿನ ಬಾಕಿ ಇರುವಾಗಲೇ ಭಾರತ ಸರಕಾರ, ಆ ದೇಶದಲ್ಲಿರುವ ತನ್ನ ರಾಯಭಾರಿ ಕಚೇರಿಯ ಸಿಬಂದಿಯನ್ನು, ಭಾರತೀಯರನ್ನು ಕರೆಯಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಸುಗಮ ಸಾರಿಗೆ ಅವಕಾಶ ಕಲ್ಪಿಸುವಂತೆ ರಾಯಭಾರಿ ಕಚೇರಿಯೂ ತಾಲಿಬಾನಿ ನಾಯಕರಿಗೆ ಮನವಿ ಮಾಡಿತ್ತು. ಆದರೂ, ಅಫ್ಘಾನ್‌ ನೆಲದಿಂದ ವಿಮಾನದಲ್ಲಿ ಗಗನಕ್ಕೆ ಹಾರುವವರೆಗೆ ಭಾರತೀಯರು ಅಂಗೈಯ್ಯಲ್ಲಿ ಜೀವ ಹಿಡಿದುಕೊಂಡೇ ಇದ್ದರು!

ರಾಯಭಾರ ಕಚೇರಿ ತೆರವು ಮಾಡುವ ದಿನದಂದು, ಕಚೇರಿಯ ಅವರಣದಲ್ಲಿ ಸುಮಾರು 150 ಭಾರತೀಯ ರಾಜತಂತ್ರಜ್ಞರು, ಹಲವಾರು ನಾಗರಿಕರು, ಶೀಘ್ರವೇ ಹೊರಡುವ ತರಾತುರಿಯಲ್ಲಿದ್ದರು. ಆದರೆ ಕಾಂಪೌಂಡಿನ ಗೇಟಿನಲ್ಲಿ ಬಂದೂಕು ಕೈಯ್ಯಲ್ಲಿ ಹಿಡಿದು ಕಾಯುತ್ತಿದ್ದ ತಾಲಿಬಾನಿಗಳ ಗುಂಪನ್ನು ನೋಡಿದಾಗಲೆಲ್ಲ ಜೀವ ನಡುಗುತ್ತಿತ್ತು.

ಇದೇ ಆತಂಕದಲ್ಲಿಯೇ ಅಧಿಕಾರಿಗಳು, ಭಾರತೀಯರು, ರಾಯಭಾರಿ ಕಚೇರಿಯ ಕಾಂಪೌಂಡಿನಲ್ಲಿ ಸಾಲಾಗಿ ನಿಂತಿದ್ದ ವಾಹನಗಳಲ್ಲಿ ಕುಳಿತು, ಪಯಣ ಶುರು ಮಾಡಿದರು. ರಾಯಭಾರಿ ಕಚೇರಿಯ ಗೇಟುಗಳು ತೆರೆಯಲ್ಪಟ್ಟು, ಕಾರುಗಳು ರಸ್ತೆಗಿಳಿದವು.

ಯಾರಿಂದ ಗುಂಡಿನ ದಾಳಿಯ ಭೀತಿ ಆವರಿಸಿತ್ತೋ ಅವರೇ (ತಾಲಿಬಾನಿಗಳು), ಸಣ್ಣನೆಯ ನಸುನಗು ನಕ್ಕು, ಟಾಟಾ ಮಾಡಿ, ವಾಹನಗಳಿಗೆ ರಸ್ತೆ ಬಿಟ್ಟುಕೊಟ್ಟರು!  ವಾಹನಗಳಲ್ಲಿದ್ದವರಿಗೆ ಅಚ್ಚರಿಯೋ ಅಚ್ಚರಿ. ದಾರಿಯ ಇಕ್ಕೆಲಗಳಲ್ಲಿಯೂ ಹಾಜರಿದ್ದ ಆ ಉಗ್ರರ ಗುಂಪುನಲ್ಲಿ ಕೆಲವರು ವಿಮಾನ ನಿಲ್ದಾಣಕ್ಕೆ ಹೋಗುವ ದಾರಿ ತೋರಿಸಿದರು. ಸದ್ಯ ಅವರ ಬಂದೂಕುಗಳು ಆ ಹೊತ್ತಿಗೆ ವಿಶ್ರಾಂತಿ ಪಡೆಯುತ್ತಿದ್ದವು. ವಾಹನಗಳಲ್ಲಿ ಹೋಗುತ್ತಿದ್ದವರಿಗೆ “ಬದುಕಿದೆಯಾ ಬಡಜೀವವೇ’ ಎಂಬ ಭಾವ. ಇದು ನಿಜಕ್ಕೂ ಗಂಡಾಂತರವೊಂದನ್ನು ಗೆದ್ದುಬಂದ ಹಾಗೆ ಎನ್ನುತ್ತಾರೆ ಭಾರತಕ್ಕೆ ಬಂದಿಳಿದಿರುವ ಅಧಿಕಾರಿಗಳು.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.