ಮೋದಿ ಬೈಡನ್ ಚೊಚ್ಚಲ ಭೇಟಿ : ಇಬ್ಬರು ನಾಯಕರು ಹೇಳಿದ್ದೇನು ಗೊತ್ತಾ?
Team Udayavani, Sep 25, 2021, 7:20 AM IST
ವಾಷಿಂಗ್ಟನ್: ಅಮೆರಿಕ ಮತ್ತು ಭಾರತದ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಶುಕ್ರವಾರ ಶ್ವೇತಭವನದಲ್ಲಿ ಭೇಟಿಯಾಗಿ ಚರ್ಚಿಸಿದರು. ಕೊರೊನಾ, ಅಫ್ಘಾನಿಸ್ಥಾನ ಬೆಳವಣಿಗೆ, ಜಾಗತಿಕ ತಾಪಮಾನ ಬದಲಾವಣೆ ಮತ್ತು ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಚೀನದ ಹಾವಳಿ ಸಹಿತ ಜಗತ್ತು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಈ ಇಬ್ಬರು ನಾಯಕರು ಮಾತುಕತೆ ನಡೆಸಿದರು.
ಮೋದಿಯವರ ಅಮೆರಿಕ ಪ್ರವಾಸ ದಿಂದ ಭಾರತೀಯ ರಕ್ಷಣ ಕ್ಷೇತ್ರ ಬಲವರ್ಧನೆಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಗುರುವಾರ ವಿವಿಧ ಕಂಪೆನಿಗಳ ಸಿಇಒಗಳ ಜತೆ ಮಾತುಕತೆ ನಡೆಸಿದ್ದರು. ಬಳಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿದ್ದರು.
ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 8.30ರ ವೇಳೆಗೆ ಶ್ವೇತಭವನಕ್ಕೆ ಆಗಮಿಸಿದ ಮೋದಿ ಅವರಿಗೆ ಬೈಡೆನ್ ಆತ್ಮೀಯ ಸ್ವಾಗತ ಕೋರಿದರು. ಬಳಿಕ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿ, ಪತ್ರಿಕಾಗೋಷ್ಠಿ ನಡೆಸಿದರು.
ಅಮೆರಿಕದ ಅಧ್ಯಕ್ಷೀಯ ಕಟ್ಟಡ ಶ್ವೇತಭವನಕ್ಕೆ ಪ್ರಧಾನಿ ಮೋದಿಯವರದು ಇದು 7ನೇ ಭೇಟಿ. ಬೈಡೆನ್ ಅಧ್ಯಕ್ಷರಾದ ಬಳಿಕ ಇದೇ ಮೊದಲ ಭೇಟಿ.
ಬೈಡೆನ್ ಹೇಳಿದ್ದೇನು?:
- ಮುಂದಿನ ವಾರ ಗಾಂಧೀಜಿ ಜಯಂತಿಯನ್ನು ಆಚರಿಸಿ ಅವರ ಅಹಿಂಸೆಯ ಸಿದ್ಧಾಂತವನ್ನು ನೆನಪಿಸಿಕೊಳ್ಳಲಿದ್ದೇವೆ
- ಭಾರತ ಮತ್ತು ಅಮೆರಿಕದ ಸಂಬಂಧ ಮತ್ತಷ್ಟು ದೃಢವಾಗುತ್ತಿದೆ. ಅಮೆರಿಕವನ್ನು 40 ಲಕ್ಷ ಭಾರತೀಯ ಅಮೆರಿಕನ್ನರು ಬಲಪಡಿಸುತ್ತಿದ್ದಾರೆ.
- ಅಮೆರಿಕ-ಭಾರತ ದೃಢ ಸಂಬಂಧದಿಂದ ಜಗತ್ತು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ನಾನು ನಂಬಿದ್ದೇನೆ.
- ನಾನು ನಿಮ್ಮನ್ನು ಹಲವಾರು ವರ್ಷಗಳಿಂದ ಬಲ್ಲೆ. ಮತ್ತೆ ಶ್ವೇತಭವನಕ್ಕೆ ನಿಮ್ಮನ್ನು ಆಹ್ವಾನಿಸಲು ಖುಷಿ ಪಡುತ್ತೇನೆ. ಇತಿಹಾಸವೇ ಹೇಳುವಂತೆ ನಮ್ಮ ಸಂಬಂಧ ಅತ್ಯುತ್ತಮವಾಗಿದೆ.
ಮೋದಿ ಹೇಳಿದ್ದೇನು? :
- ಬೈಡೆನ್ ಅವರು ಗಾಂಧೀಜಿಯವರ ಬಗ್ಗೆ ಪ್ರಸ್ತಾವಿಸಿದ್ದಾರೆ. ಗಾಂಧೀಜಿ ಸದಾ ಸತ್ಯ ಮತ್ತು ವಿಶ್ವಾಸದ ಅಗತ್ಯದ ಬಗ್ಗೆ ಉಲ್ಲೇಖೀಸುತ್ತಿದ್ದರು. ಈಗ ಈ ವಿಶ್ವಾಸ ಜಾಗತಿಕವಾಗಿ ಮೂಡಬೇಕಿದೆ
- ಈ ದಶಕವನ್ನು ಕಟ್ಟುವಲ್ಲಿ ಬೈಡೆನ್ ಅವರ ನಾಯಕತ್ವ ಪ್ರಮುಖ ಪಾತ್ರ ವಹಿಸಲಿದೆ.
- ಎರಡು ದೇಶಗಳ ನಡುವೆ ಸ್ನೇಹ ವೃದ್ಧಿಗಾಗಿ ಈಗ ಬೀಜ ಬಿತ್ತಲಾಗಿದೆ. ಇದು ಹೆಮ್ಮರವಾಗಲಿದೆ.
- ಈ ದಶಕ ಪ್ರತಿಭಾನ್ವಿತರು ಮತ್ತು ಜನಸಂಪರ್ಕದಿಂದ ರೂಪುಗೊಳ್ಳುತ್ತಿದೆ. ಅಮೆರಿಕದ ಪ್ರಗತಿಯಲ್ಲಿ ಭಾರತೀಯರ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ