ಅನ್ಯಗ್ರಹ ಜೀವಿಗಳಿಂದ ಭೂಮಿ ಕಾಪಾಡಿ!
Team Udayavani, Aug 4, 2017, 9:10 AM IST
ಲಂಡನ್: ಅನ್ಯಗ್ರಹ ಜೀವಿಗಳಿಂದ ಭೂಮಿಯನ್ನು ರಕ್ಷಿಸಲು ‘ಗ್ರಹ ಸಂರಕ್ಷಣಾಧಿಕಾರಿ’ಗಳು ಬೇಕಾಗಿದ್ದಾರೆ. ಕೋಟಿ ರೂ.ಗೂ ಅಧಿಕ ಸಂಬಳದ ಜತೆಗೆ ಇತರ ಭತ್ತೆ. ಕನಿಷ್ಠ ಮೂರು ವರ್ಷ ಉದ್ಯೋಗ ಖಾತ್ರಿ. ಸಂಪರ್ಕಿಸಬೇಕಾದ ವಿಳಾಸ; ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’!
ಅನ್ಯಗ್ರಹ ಜೀವಿಗಳು (ಏಲಿಯನ್) ಎಂಬುದು ಬರೀ ಕಲ್ಪನೆಯೋ ಅಥವಾ ವಾಸ್ತವದಲ್ಲಿ ಏಲಿಯನ್ಗಳು ಅಸ್ತಿತ್ವದಲ್ಲಿವೆಯೋ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ. ಆದರೆ ನಾಸಾ ಮಾತ್ರ ಅನ್ಯ ಗ್ರಹ ಜೀವಿಗಳಿಂದ ಭೂಮಿಗಾಗುವ ಹಾನಿ ತಪ್ಪಿಸಲು ಮುಂದಾಗಿದೆ. ಇದಕ್ಕಾಗಿ ‘ಗ್ರಹ ಸಂರಕ್ಷಣಾಧಿಕಾರಿ’ (ಪ್ಲಾನೆಟರಿ ಪ್ರೊಟಕ್ಷನ್ ಆಫೀಸರ್) ಎಂಬ ಹುದ್ದೆಯೊಂದನ್ನು ಸೃಷ್ಟಿಸಿರುವ ನಾಸಾ, ಬಾಹ್ಯಾಕಾಶ ಜೀವಿಗಳು ಇತರ ಗ್ರಹಗಳು ಹಾಗೂ ಚಂದ್ರನಿಗೆ ಹಾನಿ ಮಾಡದಂತೆ, ಬಹುಮುಖ್ಯವಾಗಿ ಭೂಮಿ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದಂತೆ ತಡೆಯುವ ಹೊಣೆಯನ್ನು ಈ ಅಧಿಕಾರಿಗಳಿಗೆ ನೀಡುತ್ತಿದೆ. ಹುದ್ದೆಯ ಅವಧಿ 3 ವರ್ಷಗಳಾಗಿದ್ದು, ಐದು ವರ್ಷದ ವರೆಗೆ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಈ ಅವಧಿಯಲ್ಲಿ ಅಧಿಕಾರಿಗೆ ವಾರ್ಷಿಕ 1,87,000 ಡಾಲರ್ (1,19,12,367.50 ರೂ). ವೇತನ, ಇತರ ಭತ್ಯೆಗಳು ಸಿಗಲಿವೆ ಎಂದು ನಾಸಾ ತಿಳಿಸಿದೆ.
ಏಲಿಯನ್ಗಳಿಂದ ಮನುಕುಲದ ಮೇಲಾಗುವ ಜೈವಿಕ ಹಾನಿಗಳನ್ನು ತಪ್ಪಿಸುವುದು ಈ ಅಧಿಕಾರಿಗಳ ಪ್ರಮುಖ ಕೆಲಸವಾಗಿರುತ್ತದೆ. ಪ್ರಸ್ತುತ ಜಗತ್ತಿನಲ್ಲಿ ಇಂಥದ್ದೊಂದು ಖಾಯಂ ಹುದ್ದೆ ಇರುವುದು ಯುರೋಪ್ನ ಬಾಹ್ಯಾಕಾಶ ಸಂಸ್ಥೆಯಲ್ಲಿ ಮಾತ್ರ. ಅವರು, 2014ರಿಂದ ನಾಸಾದ ಏಕೈಕ ಗ್ರಹ ಸಂರಕ್ಷಣಾಧಿಕಾರಿಯಾಗಿರುವ ಕ್ಯಾಥರಿನ್ ಕೊನ್ಲà.
ಭೂ ಜೀವಿಗಳು, ಜೈವಿಕ ಘಟಕಗಳನ್ನು ಇತರ ಗ್ರಹ ಅಥವಾ ಸೌರ ವ್ಯವಸ್ಥೆಗೆ ಕೊಂಡೊಯ್ಯುವ ಯಾವುದೇ ಬಾಹ್ಯಾಕಾಶ ಯೋಜನೆ ಹಾಗೂ ಭೂಮಿಗೆ ಮರಳುವ ಉದ್ದೇಶದೊಂದಿಗೆ ಕಕ್ಷೆ ಸೇರುವ ಬಾಹ್ಯಾಕಾಶ ನೌಕೆಗಳ ಉಡ್ಡಯನ ಯೋಜನೆ ಗಳಿಗೆ ಸಂಬಂಧಿಸಿದ ನೀತಿಗಳನ್ನು ನಾಸಾ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಗ್ರಹಗಳ ಸಂರಕ್ಷಣೆಗೆ ಆದ್ಯತೆ ನೀಡಿದ್ದು, ಅದಕ್ಕಾಗಿ ಹೆಚ್ಚುವರಿ ‘ಸಂರಕ್ಷಕ’ರನ್ನು ನೇಮಿಸುತ್ತಿದೆ. ಭೂಮಿಯ ವಾತಾವರಣದಲ್ಲಾಗುವ ಅಪಾಯಕಾರಿ ಬದಲಾವಣೆಗಳಿಗೆ ಅನ್ಯಗ್ರಹ ಜೀವಿಗಳು ಕಾರಣ ಎನ್ನಲಾಗುತ್ತಿದ್ದು, ಇಂಥ ಹಾನಿಕಾರಕ ಚಟುವಟಿಕೆಗಳನ್ನು ನಿಯಂತ್ರಿಸುವುದು ನಾಸಾದ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ