“ಚಂದ್ರ ಧೂಳು’ ಖರೀದಿಗೆ ನಾಸಾ ಸಹಿ

4 ಖಾಸಗಿ ಕಂಪೆನಿಗಳಿಗೆ ಗುತ್ತಿಗೆ, 18 ಲಕ್ಷ ರೂ. ಒಪ್ಪಂದ

Team Udayavani, Dec 5, 2020, 7:41 AM IST

“ಚಂದ್ರ ಧೂಳು’ ಖರೀದಿಗೆ ನಾಸಾ ಸಹಿ

ನ್ಯೂಯಾರ್ಕ್‌: ಜಗತ್ತಿನ 4 ಬಾಹ್ಯಾಕಾಶ ಸಂಸ್ಥೆಗಳಿಂದ ಚಂದ್ರನ ಮೇಲ್ಪದರದ ಧೂಳನ್ನು 18.43 ಲಕ್ಷ ರೂ.ಗಳಿಗೆ ಖರೀದಿಸಲು ಅಮೆರಿಕದ ನಾಸಾ ಮುಂದಾಗಿದೆ. ಕೊಲೊರಾಡೋದ ಲೂನಾರ್‌ ಔಟ್‌ಪೋಸ್ಟ್‌ ಆಫ್ ಗೋಲ್ಡನ್‌, ಟೋಕಿಯೊದ ಐಸ್ಪೇಸ್‌ ಜಪಾನ್‌, ಲಕ್ಸಂಬರ್ಗ್‌ನ ಐಸ್ಪೇಸ್‌ ಯುರೋಪ್‌ ಹಾಗೂ ಕ್ಯಾಲಿಫೊರ್ನಿಯಾದ ಮಾಸ್ಟೆನ್‌ ಸ್ಪೇಸ್‌ ಸಿಸ್ಟಮ್ಸ್‌ ಆಫ್ ಮೊಜೇವ್‌- ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ನಾಸಾ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಿದೆ.

ಈ ನಾಲ್ಕು ಖಾಸಗಿ ಸಂಸ್ಥೆಗಳು 2022 ಮತ್ತು 2023ರಲ್ಲಿ ಚಂದ್ರನ ಅಂಗಳದಲ್ಲಿ ಮಾನವರಹಿತ ಬಾಹ್ಯಾಕಾಶ ನೌಕೆಗಳನ್ನು ಇಳಿಸಿ, ಮೇಲ್ಪದರ ಮಣ್ಣಿನ ಮಾದರಿ ಕಲೆ ಹಾಕಲಿವೆ. ನಾಸಾಕ್ಕೆ ಕಡಿಮೆ ಖರ್ಚಿನಲ್ಲಿ ಚಂದ್ರನ ಮಣ್ಣು ದಕ್ಕಲಿದ್ದು, ಇದನ್ನು “ಆರ್ಟೆಮಿಸ್‌ ಪ್ರೋಗ್ರಾಮ್‌’ಗೆ ಬಳಸಿಕೊಳ್ಳಲು ನಿರ್ಧರಿಸಿದೆ. 2024ರಲ್ಲಿ ಒಬ್ಬ ಪುರುಷ, ಒಬ್ಬ ಮಹಿಳೆಯನ್ನು ಚಂದ್ರನಲ್ಲಿಗೆ ಕಳಿಸುವ ಯೋಜನೆಯಲ್ಲಿರುವ ನಾಸಾ, “ಆರ್ಟೆಮಿಸ್‌ ಪ್ರೋಗ್ರಾಮ್‌’ ಅಡಿಯಲ್ಲಿ ಲೂನಾರ್‌ನ ವಾತಾವರಣದ ಅಧ್ಯಯನ ನಡೆಸುತ್ತಿದೆ.

ಬಾಹ್ಯಾಕಾಶದಲ್ಲೂ ಮೂಲಂಗಿ!
ಭೂಮಿ ಮೇಲಷ್ಟೇ ಅಲ್ಲ, ಬಾಹ್ಯಾಕಾಶದಲ್ಲೂ ಮೂಲಂಗಿ ಬೆಳೆಯುತ್ತೆ! ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್‌) ಮೂಲಂಗಿ ಬೆಳೆಯುವ ಮೂಲಕ ನಾಸಾ ಗಗನಯಾತ್ರಿಗಳು ಚರಿತ್ರೆ ನಿರ್ಮಿಸಿದ್ದಾರೆ. ಐಎಸ್‌ಎಸ್‌ನ ಸೂಕ್ಷ್ಮ ಗುರುತ್ವ ಚೇಂಬರ್‌ನಲ್ಲಿ ಗಗನಯಾತ್ರಿ ಕೇಟ್‌ ರುಬಿನ್ಸ್‌ ಅತ್ಯಾಧುನಿಕ ಕೃಷಿ ವಿಧಾನ ಅನುಸರಿಸಿ, ನವೆಂಬರ್‌ ತಿಂಗಳಿನಲ್ಲಿ 20 ಮೂಲಂಗಿ ಗಿಡಗಳನ್ನು ನೆಟ್ಟಿದ್ದರು. ಅವುಗಳಿಗೀಗ ಕಟಾವಿಗೆ ಸಿದ್ಧವಾಗಿದ್ದು, ಗಿಡಗಳ ಚಿತ್ರಗಳನ್ನು ಐಎಸ್‌ಎಸ್‌ ಸಂಶೋಧಕರ ತಂಡ ಟ್ವಿಟರಿನಲ್ಲಿ ಹಂಚಿಕೊಂಡಿದೆ. ಸೂಕ್ಷ್ಮಗುರುತ್ವದಲ್ಲಿ ಬೆಳೆದ ಮೂಲಂಗಿಗಳು ಶೀಘ್ರವೇ ಭೂಮಿ ತಲುಪಲಿದ್ದು, ತಜ್ಞರು ಪೌಷ್ಟಿಕ ಪರೀಕ್ಷೆ ನಡೆಸಲಿದ್ದಾರೆ. ಈ ಫ‌ಲಿತಾಂಶದ ಅನಂತರವಷ್ಟೇ ಐಎಸ್‌ಎಸ್‌ನಲ್ಲಿ ಬೆಳೆಯುವ ಮೂಲಂಗಿಯನ್ನು ಗಗನಯಾತ್ರಿಗಳಿಗೆ ಆಹಾರವಾಗಿ ಬಳಸಲು ನಾಸಾ ನಿರ್ಧರಿಸಲಿದೆ.

ಟಾಪ್ ನ್ಯೂಸ್

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.