ತೈಲ ಬಿಕ್ಕಟ್ಟು: ಭಾರತ, ವಿಶ್ವ ಮಾರುಕಟ್ಟೆಗಳಲ್ಲಿ ತಲ್ಲಣ
Team Udayavani, Sep 17, 2019, 5:26 AM IST
ಮುಂಬೈ/ಬೀಜಿಂಗ್: ಸೌದಿ ಅರೇಬಿಯಾದ ಅರಾಮೊRà ಮೇಲೆ ಡ್ರೋನ್ ದಾಳಿ ನಡೆದ ಪ್ರತಿಫಲನದ ಹಿನ್ನೆಲೆಯಲ್ಲಿ ಬಾಂಬೆ ಷೇರು ಪೇಟೆ ಸೂಚ್ಯಂಕ 262 ಅಂಕಗಳಷ್ಟು ಕುಸಿತ ಕಂಡಿದೆ. ಇದರ ಜತೆಗೆ ನಿಫ್ಟಿ ಸೂಚ್ಯಂಕ ಕೂಡ 79.80 ಅಂಕಗಳಷ್ಟು ಇಳಿಕೆಯಾಗಿದೆ. ದಿನಾಂತ್ಯಕ್ಕೆ ಬಿಎಸ್ಇ 37, 123.31ರಲ್ಲಿ ಮುಕ್ತಾಯವಾಗಿದೆ. ಎಸ್ಬಿಐ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಎಚ್ಡಿಎಫ್ಸಿ ಷೇರುಗಳು ಪ್ರಮುಖವಾಗಿ ಕುಸಿತ ಕಂಡವು. ತೈಲ ಮತ್ತು ಅನಿಲ ಕಂಪನಿಗಳ ಷೇರುಗಳೂ ಕುಸಿತ ಕಂಡಿವೆ. ಅಮೆರಿಕದ ಡಾಲರ್ ಎದುರು ರೂಪಾಯಿ 68 ಪೈಸೆಯಷ್ಟು ಕುಸಿತಗೊಂಡು 71.60 ರೂ.ಗಳಿಗೆ ನಿಂತಿತು. ಹಾಂಕಾಂಗ್ ಷೇರುಪೇಟೆ 27,040.47ಕ್ಕೆ ಕುಸಿದಿದೆ. ನ್ಯೂಯಾರ್ಕ್ ಷೇರು ಮಾರುಕಟ್ಟೆಯಲ್ಲೂ ತಲ್ಲಣ ಉಂಟಾಗಿದ್ದು, ಡೌ ಜೋನ್ಸ್ ಹಾಗೂ ಬ್ರಾಡರ್ ಎಸ್ ಆ್ಯಂಡ್ ಪಿ 500 ಸೂಚ್ಯಂಕಗಳು 0.4ರಷ್ಟು ಇಳಿಕೆ ಕಂಡವು.
ತಂತ್ರಜ್ಞಾನದ ಷೇರು ಸೂಚ್ಯಂಕ (ನಾಸಾxಕ್) 0.5ರಷ್ಟು ಇಳಿಕೆ ದಾಖಲಿಸಿತು.
ಚಿನ್ನ ಏರಿಕೆ: ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನವದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 460 ರೂ. ಏರಿಕೆಯಾಗಿದೆ. ಹೀಗಾಗಿ 10 ಗ್ರಾಂ ಚಿನ್ನಕ್ಕೆ 38,400 ರೂ., ಆಗಿದ್ದರೆ. ಪ್ರತಿ ಕೆಜಿ ಬೆಳ್ಳಿಗೆ 1,096 ರೂ. ಏರಿಕೆಯಾಗಿ 47, 957 ರೂ.ಗೆ ತಲುಪಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ