ಜಲ ವಿದ್ಯುತ್ ಯೋಜನೆ ಕಾಮಗಾರಿ ಕೂಡಲೇ ನಿಲ್ಲಿಸಿ: ಭಾರತಕ್ಕೆ ಪಾಕ್
Team Udayavani, Jan 21, 2017, 12:35 PM IST
ಇಸ್ಲಾಮಾಬಾದ್ : ಜಮ್ಮು ಕಾಶ್ಮೀರದಲ್ಲಿನ ಎರಡು ಜಲ ವಿದ್ಯುತ್ ಯೋಜನೆಗಳ ಕಾಮಗಾರಿಯನ್ನು ಭಾರತ ಕೂಡಲೇ ನಿಲ್ಲಿಸಬೇಕು ಮತ್ತು ಉಭಯ ದೇಶಗಳ ನಡುವಿನ ಜಲ ವಿವಾದವನ್ನು ಬಗೆಹರಿಸಿಕೊಳ್ಳಲು ರಾಜಿ ಪಂಚಾಯ್ತಿಕೆ ನ್ಯಾಯಾಲಯದ ಸ್ಥಾಪನೆಗೆ ಒಪ್ಪಿಕೊಳ್ಳಬೇಕು ಎಂದು ಪಾಕಿಸ್ಥಾನದ ಎರಡು ಸಂಸದೀಯ ಸಮಿತಿಗಳು ಅತ್ಯಪರೂಪದ ಜಂಟಿ ಠರಾವೊಂದರಲ್ಲಿ ಭಾರತವನ್ನು ಆಗ್ರಹಿಸಿವೆ.
ವಿದೇಶ ವ್ಯವಹಾರಗಳು ಮತ್ತು ಜಲ ಹಾಗೂ ವಿದ್ಯುತ್ ಸಂಬಂಧಿತ ರಾಷ್ಟ್ರೀಯ ಅಸೆಂಬ್ಲಿಯ ಸಮಿತಿಗಳು ಇಸ್ಲಾಮಾಬಾದ್ನಲ್ಲಿ ನಿನ್ನೆ ಶುಕ್ರವಾರ ಜಂಟಿ ಬೈಠಕ್ ನಡೆಸಿ ಭಾರತದೊಂದಿಗಿನ ಜಲವಿವಾದದ ಕುರಿತ ಚರ್ಚೆ ನಡೆಸಿದವು.
ಚರ್ಚೆ ಫಲವಾಗಿ ಕೈಗೊಳ್ಳಲಾದ ಜಂಟಿ ಠರಾವಿನಲ್ಲಿ ಭಾರತ ಜಮ್ಮು ಕಾಶ್ಮೀರದಲ್ಲಿ ಕೈಗೊಂಡಿರುವ ಎರಡು ಜಲ ವಿದ್ಯುತ್ ಯೋಜನೆಗಳ ಕಾಮಗಾರಿಗಳನ್ನು ಈ ಕೂಡಲೇ ನಿಲ್ಲಿಸುವಂತೆ ಕೇಳಿಕೊಂಡಿರುವುದಾಗಿ “ಡಾನ್’ ವರದಿ ಮಾಡಿದೆ.
ಜಮ್ಮು ಕಾಶ್ಮೀರದ ಕಿಶನ್ಗಂಗಾ ಮತ್ತು ರತ್ಲೆà ಜಲ ವಿದ್ಯುತ್ ಯೋಜನೆಗಳ ಕುರಿತಾಗಿ ರಾಜಿ ಪಂಚಾಯ್ತಿಕೆಯ ನ್ಯಾಯಾಲಯವನ್ನು ಸ್ಥಾಪಿಸುವಂತೆ ವಿಶ್ವ ಬ್ಯಾಂಕನ್ನು ಈ ಠರಾವಿನಲ್ಲಿ ಕೋರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ