ಶಾರದಾ ಪೀಠ ಕಾರಿಡಾರ್ಗೆ ಪಾಕಿಸ್ಥಾನ ಸಮ್ಮತಿ
Team Udayavani, Mar 26, 2019, 6:00 AM IST
ಇಸ್ಲಾಮಾಬಾದ್: ಸಿಕ್ಖರ ಪವಿತ್ರ ಸ್ಥಳ ಕರ್ತಾರ್ಪುರಕ್ಕೆ ತೆರಳಲು ಪಾಕಿಸ್ಥಾನ ಪ್ರತ್ಯೇಕ ಕಾರಿಡಾರ್ ನಿರ್ಮಾಣಕ್ಕೆ ಒಪ್ಪಿದ ಬೆನ್ನಲ್ಲೇ, ಹಿಂದೂಗಳ ಪವಿತ್ರ ಸ್ಥಳ ಶಾರದಾ ಪೀಠಕ್ಕೆ ತೆರಳಲೂ ಕಾರಿಡಾರ್ ನಿರ್ಮಾಣ ಮಾಡಲು ಪಾಕಿಸ್ಥಾನ ಒಪ್ಪಿದೆ ಎಂದು ಹೇಳಲಾಗಿದೆ.
ಈಗಾಗಲೇ ಭಾರತ ಈ ಸಂಬಂಧ ಪ್ರಸ್ತಾವನೆಯನ್ನು ಪಾಕಿಸ್ಥಾನಕ್ಕೆ ಸಲ್ಲಿಸಿತ್ತು. ಪಾಕಿಸ್ಥಾನ ಸರಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಧಾನಿಗೆ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಸುಮಾರು 5 ಸಾವಿರ ವರ್ಷಗಳ ಹಿಂದೆ ರಾಜ ಅಶೋಕನ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಶಾರದಾ ಪೀಠ, ದೇಶ ವಿಭಜನೆಯ ಅನಂತರ ಪಾಕಿಸ್ಥಾನಕ್ಕೆ ಸೇರಿತ್ತು. ಅಂದಿ ನಿಂದಲೂ ಪೀಠ ಹಾಗೂ ಪಾಠಶಾಲೆ ಪಾಳುಬಿದ್ದಿದೆ. 6ನೇ ಶತಮಾನದಿಂದ ಮತ್ತು 12ನೇ ಶತಮಾನದ ವರೆಗೂ ಈ ಪೀಠ ಭಾರತ ಉಪಖಂಡದಲ್ಲಿ ಪ್ರಮುಖ ಅಧ್ಯಯನ ಕೇಂದ್ರಗಳಲ್ಲಿ ಒಂದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು