ಅಫ್ಘಾನಿಸ್ಥಾನದಲ್ಲಿ ಅಮೆರಿಕದ ಬೆನ್ನಿಗಿರಿದ ಪಾಕ್‌: ನಿವೃತ್ತ ಕರ್ನಲ್‌


Team Udayavani, Aug 24, 2018, 4:10 PM IST

us-army-700.jpg

ವಾಷಿಂಗ್ಟನ್‌ : ‘ಅಫ್ಘಾನಿಸ್ಥಾನದಲ್ಲಿ  ಪಾಕಿಸ್ಥಾನ ಅನೇಕ ವರ್ಷಗಳ ಕಾಲ ಅಮೆರಿಕದ ಬೆನ್ನಿಗೆ ಇರಿದು ನಿಧಾನ ರಕ್ತಸ್ರಾವದಿಂದ ಅದು (ಅಮೆರಿಕ) ಸಾಯುವಂತೆ ಮಾಡಿದೆ’ ಎಂದು ಅಮೆರಿಕದ ನಿವೃತ್ತ ಕರ್ನಲ್‌ ಹೇಳಿದ್ದಾರೆ. 

‘ಭಯೋತ್ಪಾದನೆಯನ್ನು ಮಟ್ಟ ಹಾಕುವುದಾಗಿ ನಂಬಿಸಿ ಪಾಕಿಸ್ಥಾನ ಕಳೆದ ಹದಿನೇಳು ವರ್ಷಗಳಿಂದ ಅಮೆರಿಕದಿಂದ ಬಿಲಿಯಗಟ್ಟಲೆ ಮಿಲಿಟರಿ ಮತ್ತು ಆರ್ಥಿಕ ನೆರವನ್ನು ಪಡೆದೂ ಅಮೆರಿಕವನ್ನು ತನ್ನ ಇಬ್ಬಗೆಯ ತಂತ್ರದಿಂದ ವಂಚಿಸಿದೆ; ಅಮೆರಿಕದ ಬೆನ್ನಿಗೆ ಇರಿದಿದೆ; ಮೋಸ ಮಾಡಿದೆ’ ಎಂದು ಅಮೆರಿಕದ ಹಿರಿಯ ಸೇನಾ ಕರ್ನಲ್‌ ಲಾರೆನ್ಸ್‌ ಸೆಲಿನ್‌ ಆರೋಪಿಸಿದ್ದಾರೆ. 

ಕರ್ನಲ್‌ ಸೆಲಿನ್‌ ಅಫ್ಘಾನಿಸ್ಥಾನ, ಉತ್ತರ ಇರಾಕ್‌ ಮತ್ತು ಪಶ್ಚಿಮ ಆಫ್ರಿಕದಲ್ಲಿ ಅಮೆರಿಕ ಸೇನೆಯ ಮಾನವೀಯ ನೆರವು ಅಭಿಯಾನದಲ್ಲಿ ದುಡಿದವರಾಗಿದ್ದಾರೆ. 

“ದ ಡೇಲಿ ಕಾಲರ್‌’ ಪತ್ರಿಕೆಯಲ್ಲಿ  ಬರೆದಿರುವ ಲೇಖನಲ್ಲಿ ಕರ್ನಲ್‌ ಸೆಲಿನ್‌ ಅವರು “ಪಾಕಿಸ್ಥಾನದ ಬೇಹು ಸಂಸ್ಥೆಯಾಗಿರುವ ಐಎಸ್‌ಐ 2001ರ ಅಕ್ಟೋಬರ್‌ನಲ್ಲಿ, ಅಮೆರಿಕ ಅಫ್ಘಾನ್‌ ಬಾಂಬಿಂಗ್‌ ಆರಂಭಿಸಿದ ತರುವಾಯದಲ್ಲಿ, ತಾಲಿಬಾನ್‌ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ” ಎಂದು ಹೇಳಿದ್ದಾರೆ.

‘ತಾಲಿಬಾನ್‌ ಮತ್ತು ಅಲ್‌ ಕಾಯಿದಾ ವಿರುದ್ಧದ ಅಮೆರಿಕ ಸಮರವನ್ನು ಪಾಕಿಸ್ಥಾನ ಎಷ್ಟು ಮಾತ್ರಕ್ಕೂ ಬೆಂಬಲಿಸಬಾರದು ಎಂದು ಅಂದಿನ ಪಾಕ್‌ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಶರ್ರಫ್ ಅವರು ಐಎಸ್‌ಐ ನಿರ್ದೇಶಕ ಲೆ| ಜ| ಮಹಮೂದ್‌ ಅಹ್ಮದ್‌ ಮತ್ತು ಇತರ ಸೇನಾ ಉನ್ನತಾಧಿಕಾರಿಗಳೊಂದಿಗಿನ ಸಭೆಯಲ್ಲಿ ಹೇಳಿದ್ದರು’ ಎಂದು ಕರ್ನಲ್‌ ಸೆಲಿನ್‌ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. 

ತಾಲಿಬಾನ್‌ ಮತ್ತು ಹಕ್ಕಾನಿ ಜಾಲದ ಉಗ್ರರನ್ನು ಮಟ್ಟ ಹಾಕುವುದಾಗಿ ಹೇಳಿ ಅಮೆರಿಕದಿಂದ ಬಿಲಿಯಗಟ್ಟಲೆ ಡಾಲರ್‌ ಸೇನಾ ಮತ್ತು ಆರ್ಥಿಕ ನೆರವನ್ನು ಪಡೆದ ಹೊರತಾಗಿಯೂ ಪಾಕ್‌ ಸರಕಾರ ಬೆನ್ನ ಹಿಂದೆ ಅವೇ ಉಗ್ರ ಸಂಘಟನೆಗಳಿಗೆ ಶಸ್ತ್ರಾಸ್ತ್ರ ನೆರವು ನೀಡಿ ಅಮೆರಿಕದ ವಿರುದ್ಧವೇ ಹೋರಾಡುವಂತೆ ಮಾಡುವ ಮೂಲಕ ಅಮೆರಿಕಕ್ಕೆ ಪಾಕಿಸ್ಥಾನ ದ್ರೋಹ ಬಗೆದಿದೆ; ಬೆನ್ನಿಗೆ ಇರಿದಿದೆ ಎಂದು ಕ| ಸೆಲಿನ್‌ ಬರೆದಿದ್ದಾರೆ. 

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.