ಭಾರತದ ವಕೀಲರ ನೇಮಕಕ್ಕೆ ಅಸ್ತು
Team Udayavani, Aug 4, 2020, 6:13 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ಮಾಜಿ ಸಿಬಂದಿ ಕುಲಭೂಷಣ್ ಜಾಧವ್ ಅವರ ಪರವಾಗಿ ವಾದ ಮಂಡಿಸಲು ಭಾರತದ ವಕೀಲರನ್ನು ನೇಮಿಸಲು ಅನುವು ಮಾಡಿಕೊಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಪಾಕ್ ಸರಕಾರಕ್ಕೆ ಸೂಚಿಸಿದೆ.
ಜಾಧವ್ ಪರವಾಗಿ ವಾದ ಮಾಡಲು ಇತ್ತೀಚೆಗೆ ಪಾಕ್ ಸರಕಾರ ತನ್ನದೇ ವಕೀಲರನ್ನು ನೇಮಿಸಿತ್ತು.
ತನ್ನ ಒಪ್ಪಿಗೆ ಪಡೆಯದೆ ಕೈಗೊಳ್ಳಲಾಗಿದ್ದ ಈ ಕ್ರಮವನ್ನು ಭಾರತ ಆಕ್ಷೇಪಿಸಿತ್ತು.
ಸದ್ಯ ಜಾಧವ್ ಪ್ರಕರಣದ ವಿಚಾರಣೆ ಸೆಪ್ಟಂಬರ್ವರೆಗೆ ಮುಂದೂಡಲ್ಪಟ್ಟಿದೆ. ಅಷ್ಟರಲ್ಲಿ ಅವರ ಪರವಾಗಿ ವಾದ ಮಂಡಿಸಲು ಭಾರತೀಯ ನ್ಯಾಯವಾದಿ ಅಥವಾ ಕಾನೂನು ಸಲಹೆಗಾರರ ತಂಡವನ್ನು ನೇಮಿಸಬೇಕಿದ್ದು, ಅದಕ್ಕೆ ಪಾಕ್ ಅನುಮತಿ ಬೇಕಿದೆ.
ಅದನ್ನು ನೀಡಲು ಮೀನ ಮೇಷ ಎಣಿಸುತ್ತಿದ್ದುದರಿಂದ ಇಸ್ಲಾಮಾಬಾದ್ ಹೈಕೋರ್ಟ್ ಈ ಸೂಚನೆ ನೀಡಿದೆ.
ನ್ಯಾಯಾಲಯದ ಆದೇಶ ಹೊರಬಿದ್ದ 60 ದಿನಗಳ ಒಳಗಾಗಿ ಜಾಧವ್ ಅವರು ಭಾರತದಿಂದ ನೇಮಿಸಲ್ಪಡುವ ವಕೀಲರ ಮೂಲಕ ಪಾಕ್ ಸೇನಾ ನ್ಯಾಯಾಲಯ ತನ್ನ ವಿರುದ್ಧ ನೀಡಿರುವ ಶಿಕ್ಷೆಯ ಮರುಪರಿಶೀಲನ ಅರ್ಜಿಯನ್ನು ದಾಖಲಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್