ಆರ್ಥಿಕ ದೃಢತೆ ಮುಖ್ಯ; ಟ್ಯಾಂಕು, ಮಿಸೈಲು ದೇಶ ಉಳಿಸದು: ಪಾಕ್‌ ಸಚಿವ


Team Udayavani, May 22, 2018, 7:02 PM IST

pak-minister-iqbal-700.jpg

ಇಸ್ಲಾಮಾಬಾದ್‌ : ”ಟ್ಯಾಂಕುಗಳು, ಮಿಸೈಲ್‌ಗ‌ಳು ದೇಶವನ್ನು ಉಳಿಸಲಾರವು; ಆರ್ಥಿಕವಾಗಿ ದೇಶ ಬಲಿಷ್ಠವಾಗುವುದು ಮುಖ್ಯ; ಅದಕ್ಕಾಗಿ ದೇಶದಲ್ಲಿ ಶಾಂತಿ, ಸ್ಥಿರತೆ ನೆಲೆಸುವುದು ಇನ್ನೂ ಅಗತ್ಯ” ಎಂದು ಪಾಕಿಸ್ಥಾನದ ಒಳಾಡಳಿತ ಸಚಿವ ಎಹಸಾನ್‌ ಇಕ್ಬಾಲ್‌ ಹೇಳಿದ್ದಾರೆ. 

‘1990ರ ದಶಕದಲ್ಲಿ ಭಾರತದ ಆಗಿನ ಹಣಕಾಸು ಸಚಿವ ಡಾ. ಮನಮೋಹನ್‌ ಸಿಂಗ್‌ ಅವರು ಅಂದಿನ ಪಾಕ್‌ ಹಣಕಾಸು ಸಚಿವ ಸರ್ತಾಜ್‌ ಅಜೀಜ್‌ ಅವರಿಂದ ಆರ್ಥಿಕ ಸುಧಾರಣಾ ತಂತ್ರಗಾರಿಕೆಯ ಎರವಲು ಪಡೆದುಕೊಂಡು ಅದನ್ನು ಭಾರತದಲ್ಲಿ ಅನುಷ್ಠಾನಿಸಿ ಯಶಸ್ವಿಯಾದರು’ ಎಂದು ಪಾಕ್‌ ಸಚಿವ ಇಕ್ಬಾಲ್‌ ಹೇಳಿರುವುದನ್ನು “ದ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

‘ಬಾಂಗ್ಲಾದೇಶ ಕೂಡ ಸರ್ತಾಜ್‌ ಅವರ ಆರ್ಥಿಕ ಸುಧಾರಣಾ ತಂತ್ರಗಾರಿಕೆಯನ್ನು ಅನುಷ್ಠಾನಿಸಿ ಯಶಸ್ವಿಯಾಗಿದೆ. ದುರದೃಷ್ಟವಶಾತ್‌ ಪಾಕಿಸ್ಥಾನ ಮಾತ್ರ ತನ್ನದೇ ತಂತ್ರಗಾರಿಕೆಯನ್ನು ಅನುಷ್ಠಾನಿಸುವಲ್ಲಿ ವಿಫ‌ಲವಾಯಿತು;  ದೇಶದಲ್ಲಿನ ರಾಜಕೀಯ ಅಸ್ಥಿರತೆಯ ಫ‌ಲವಾಗಿ ಪಾಕಿಸ್ಥಾನಕ್ಕೆ ಇಡಿಯ ಒಂದು ದಶಕವೇ ನಷ್ಟವಾಗಿ ಹೋಯಿತು’ ಎಂದು ಸಚಿವ ಇಕ್ಬಾಲ್‌ ಹೇಳಿದರು. 

ಸಚಿವ ಇಕ್ಬಾಲ್‌ ಅವರು ಪಾಕಿಸ್ಥಾನದ ರಾಷ್ಟ್ರೀಯ ಸೈಬರ್‌ ಭದ್ರತಾ ಕೇಂದ್ರವನ್ನು ಉದ್ಘಾಟಿಸಿ ಈ ಮಾತುಗಳನ್ನು ಹೇಳಿದರು. 

”ಪಾಕಿಸ್ಥಾನಕ್ಕೆ ತನ್ನ ಆರ್ಥಿಕತೆಯನ್ನು ಟೇಕಾಫ್ ಮಾಡುವ ಮೊದಲ ಅವಕಾಶ 1960ರ ದಶಕದಲ್ಲಿ ಒದಗಿತ್ತು. ಅನಂತರ 90ರ ದಶಕದಲ್ಲಿ ಎರಡನೇ ಅವಕಾಶ ಪ್ರಾಪ್ತವಾಯಿತು. ಇದೀಗ ಮೂರನೇ ಅವಕಾಶ ಪಾಕ್‌ ಬಾಗಿಲನ್ನು ತಟ್ಟುತ್ತಿದೆ. ಪಾಕಿಸ್ಥಾನ ಈ ಹಿಂದೆ ರಾಜಕೀಯ ಅಸ್ಥಿರತೆಯಿಂದ ಮಾಡಿಕೊಂಡಂತೆ ಈ ಮೂರನೇ ಅವಕಾಶವನ್ನು ನಷ್ಟ ಮಾಡಿಕೊಳ್ಳಬಾರದು. ಆದದ್ದು ಆಗಿ ಹೋಗಿದೆ; ಇನ್ನು ಪುನಃ ಅದೇ ಆಗಬಾರದು” ಎಂದು ಸಚಿವ ಇಕ್ಬಾಲ್‌ ನುಡಿದರು. 

‘ಪಾಕಿಸ್ಥಾನದ ಆರ್ಥಿಕಾಭಿವೃದ್ಧಿಗೆ ಶಾಂತಿ, ಸ್ಥಿರತೆ ಮತ್ತು ನಿರಂತರತೆ ನೆಲೆಗೊಳ್ಳುವುದು ಬಹಳ ಮುಖ್ಯ’ ಎಂದು ಇಕ್ಬಾಲ್‌ ಹೇಳಿದರು. 

‘2013ರಲ್ಲಿ ಪಾಕಿಸ್ಥಾನ 2ಜಿ ವಯರ್‌ಲೆಸ್‌ ತಂತ್ರಜ್ಞಾನ ಬಳಸುತ್ತಿತ್ತು. ಆದರೆ ಈಗ 2018ರಲ್ಲಿ ಅದು 5ಜಿ ತಂತ್ರಜ್ಞಾನ ಉಪಯೋಗಿಸುವ ವಿಶ್ವದ ಮೊದಲ ಬಳಕೆದಾರರಲ್ಲಿ ಒಂದೆನಿಸಿದೆ’ ಎಂದು ಇಕ್ಬಾಲ್‌ ಹೇಳಿದರು. 

ಆದರೆ ಪಾಕ್‌ ಸಚಿವ ಎಹಸಾನ್‌ ಇಕ್ಬಾಲ್‌ ಆಶಯಕ್ಕೂ, ಅವರ ದೇಶದ ಸೇನೆ, ಐಎಸ್‌ಐ ಮತ್ತು ಉಗ್ರರ ಆಶಯಕ್ಕೂ ಯಾವುದೇ ತಾಳಮೇಳ ಇಲ್ಲದಿರುವುದು ಇಡಿಯ ಜಗತ್ತಿಗೇ ತಿಳಿದಿರುವ ಸತ್ಯ ಎನ್ನದೇ ವಿಧಿಯಿಲ್ಲ. 

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.