ವುಹಾನ್ ನಿಂದ ತೆರಳುತ್ತಿರುವ ಭಾರತೀಯರನ್ನು ಕಂಡು ಅಳುತ್ತಿರುವ ಪಾಕಿಸ್ಥಾನಿ ವಿದ್ಯಾರ್ಥಿಗಳು
Team Udayavani, Feb 2, 2020, 11:42 AM IST
ವುಹಾನ್: ಮಾರಾಣಾಂತಿಕ ಕೊರೊನಾ ವೈರಸ್ ಗೆ ಚೀನಾ ಅಕ್ಷರಶಃ ನರಳಾಡುತ್ತಿದೆ. ಅದರಲ್ಲೂ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡ ಹುಬೈ ಪ್ರಾಂತ್ಯದ ವುಹಾನ್ ನಗರ ಖಾಲಿ ಖಾಲಿಯಾಗಿದೆ.
ವುಹಾನ್ ನಲ್ಲಿರುವ ಭಾರತೀಯರನ್ನು ವಿಶೇಷ ವಿಮಾನದ ಮೂಲಕ ವಾಪಾಸ್ಸು ಕರೆಸಲಾಗುತ್ತಿದೆ. ಏರ್ ಇಂಡಿಯಾ ಜಂಬೋ ವಿಮಾನದ ಮೂಲಕ ಸೂಕ್ತ ಪರೀಲನೆಯ ನಂತರ ಭಾರತೀಯರನ್ನು ಮರಳಿ ತವರು ನೆಲಕ್ಕೆ ಕರೆತರುವ ವ್ಯವಸ್ಥೆಯನ್ನು ಭಾರತ ಸರ್ಕಾರ ಮಾಡಿದೆ.
ತನ್ನ ಪ್ರಜೆಗಳನ್ನು ರಕ್ಷಿಸಲು ಭಾರತ ಸರ್ಕಾರ ಇಷ್ಟೆಲ್ಲಾ ವ್ಯವಸ್ಥೆ ಮಾಡುತ್ತಿದ್ದರೂ ಮತ್ತೊಂದು ಕಡೆ ಪಾಕಿಸ್ಥಾನ ತನ್ನ ಪ್ರಜೆಗಳನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಪಾಕಿಸ್ಥಾನ ಮತ್ತು ಚೀನಾದ ಒಗ್ಗಟ್ಟು ನಿರೂಪಿಸುವ ಸಲುವಾಗಿ ತಾನು ತನ್ನ ಪ್ರಜೆಗಳನ್ನು ಮರಳಿ ಕರೆತರುವುದಿಲ್ಲ ಎಂದು ಇಮ್ರಾನ್ ಖಾನ್ ಸರಕಾರ ಹೇಳಿದೆ.
ಸದ್ಯ ವುಹಾನ್ ನಲ್ಲಿರುವ ಪಾಕಿಸ್ಥಾನಿ ವಿದ್ಯಾರ್ಥಿಗಳು ಜೀವ ಭಯದಿಂದ ಇದ್ದಾರೆ. ಭಾರತೀಯ ವಿದ್ಯಾರ್ಥಿಗಳು ನಿರಾತಂಕವಾಗಿ ತವರಿಗೆ ಮರಳುವುದನ್ನು ಕಂಡು ತಮ್ಮನ್ನೂ ಕರೆಸಲು ವ್ಯವಸ್ಥೆ ಮಾಡುವಂತೆ ಪಾಕ್ ಸರ್ಕಾರಕ್ಕೆ ಕೋರುತ್ತಿದ್ದಾರೆ. ಸದ್ಯ ಅಂತಹ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ” ಬಾಂಗ್ಲಾದೇಶಿಗಳನ್ನೂ ಕರೆಸಲಾಗುತ್ತಿದೆ. ಆದರೆ ನಾವು ಸತ್ತರೂ ನಮ್ಮನ್ನು ಪಾಕಿಸ್ಥಾನಕ್ಕೆ ಕರೆತರಯವ ವ್ಯವಸ್ಥೆ ಮಾಡುವುದಿಲ್ಲ ಎಂದು ಪಾಕಿಸ್ಥಾನ ಸರಕಾರ ಹೇಳಿದೆ. ನಾಚಿಕೆಯಾಗಬೇಕು ನಿಮಗೆ” ಎಂದು ವಿದ್ಯಾರ್ಥಿಯೊಬ್ಬರು ಅಳುತ್ತಾ ಹೇಳಿದ್ದಾರೆ.
ಚೀನಾದಲ್ಲಿ ಈ ಮಾರಣಾಂತಿಕ ವೈರಸ್ ಗೆ ಇದುವರೆಗೆ 300ಕ್ಕೂ ಹಚ್ಚು ಜನರು ಅಸುನೀಗಿದ್ದಾರೆ.
Pakistani student in Wuhan shows how Indian students are being evacuated by their govt. While Pakistanis are left there to die by the govt of Pakistan: pic.twitter.com/86LthXG593
— Naila Inayat नायला इनायत (@nailainayat) February 1, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು