ನ.11ರಂದು ಕರ್ತಾಪುರ್ ಕಾರಿಡಾರ್ ಉದ್ಘಾಟನೆ;ಪಾಕ್ ವೀಡಿಯೋದಲ್ಲಿ ಭಿಂದ್ರನ್ ವಾಲೆ ಪೋಸ್ಟರ್!
Team Udayavani, Nov 6, 2019, 12:16 PM IST
ಇಸ್ಲಾಮಾಬಾದ್:ಪಾಕಿಸ್ತಾನದ ಕರ್ತಾಪುರ್ ಸಾಹಿಬ್ ಗುರುದ್ವಾರ ಸಂಪರ್ಕಿಸುವ ಕರ್ತಾಪುರ್ ಕಾರಿಡಾರ್ ಯೋಜನೆ ನವೆಂಬರ್ 11ರಂದು ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬಿಡುಗಡೆ ಮಾಡಿರುವ ವೀಡಿಯೋ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಪಾಕ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿನ ಪೋಸ್ಟರ್ ನಲ್ಲಿ ಖಾಲಿಸ್ತಾನಿ ಪ್ರತ್ಯೇಕತವಾದಿ ಮುಖಂಡ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ, ಮೇಜರ್ ಜನರಲ್ ಶಾಬೇಗ್ ಸಿಂಗ್ ಮತ್ತು ಅಮ್ರೀಕ್ ಸಿಂಗ್ ಖಾಲ್ಸಾ ಅವರ ಫೋಟೋ ಕಾಣಿಸಿರುವುದು ವಿವಾದಕ್ಕೆ ಕಾರಣವಾಗಿದೆ.
1984ರಲ್ಲಿ ಪಂಜಾಬ್ ನ ಅಮೃತ್ ಸರದ ಗೋಲ್ಡನ್ ಟೆಂಪಲ್ ಒಳಗೆ ಅವಿತಿದ್ದ ಭಿಂದ್ರನ್ ವಾಲೆ ಸೇರಿದಂತೆ ಮೂವರನ್ನು ಭಾರತೀಯ ಸೇನಾ ಪಡೆಯ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಹತ್ಯೆಗೈಯಲಾಗಿತ್ತು. ಈ ಮೂಲಕ ಖಾಲಿಸ್ತಾನ್ ಉಗ್ರರ ಹಿಡಿತಲ್ಲಿದ್ದ ಗೋಲ್ಡನ ಟೆಂಪಲ್ ಅನ್ನು ಮುಕ್ತಗೊಳಿಸಿತ್ತು.
ಸಿಖ್ಖ್ ರ ಧರ್ಮಗುರು ಗುರುನಾನಕ್ ಅವರ 550ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಕರ್ತಾಪುರ್ ಕಾರಿಡಾರ್ ಯೋಜನೆಗೆ ಭಾರತ ಮತ್ತು ಪಾಕಿಸ್ತಾನ ಸಹಿಹಾಕಿತ್ತು. ಈ ಕಾರಿಡಾರ್ ನಿಂದ ಗುರುದಾಸ್ ಪುರ್ ಡೇರಾ ಬಾಬಾ ನಾನಕ್ ಗುರುದ್ವಾರದಿಂದ ಕರ್ತಾಪುರದಲ್ಲಿರುವ ದರ್ಬಾರ್ ಸಾಹೀಬ್ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸಲಿದೆ. ಕರ್ತಾಪುರದಲ್ಲಿರುವ ಗುರುದ್ವಾರವನ್ನು ಗುರುನಾನಕ್ 1522ರಲ್ಲಿ ಸ್ಥಾಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ