ಕುಲಭೂಷಣ್ ಜಾಧವ್ ಕಸಬ್ಗಿಂತಲೂ ದೊಡ್ಡ ಉಗ್ರ : ಪರ್ವೇಜ್ ಮುಶರ್ರಫ್
Team Udayavani, May 20, 2017, 4:07 PM IST
ಲಂಡನ್ : ಪಾಕ್ ಮಿಲಿಟರಿ ಕೋರ್ಟ್ನಿಂದ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿರುವ ಕುಲಭೂಷಣ್ ಜಾಧವ್, 2008ರ ಮುಂಬಯಿ ಉಗ್ರ ದಾಳಿಕೋರರಲ್ಲಿ ಒಬ್ಬನಾಗಿದ್ದ ಅಜ್ಮಲ್ ಕಸಬ್ ಗಿಂತಲೂ ದೊಡ್ಡ ಭಯೋತ್ಪಾದಕ ಎಂದು ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರ್ರಫ್ ಹೇಳಿದ್ದಾರೆ.
ಪಾಕಿಸ್ಥಾನದ ಎಆರ್ವೈ ನ್ಯೂಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಶರ್ರಫ್, “150 ಜನರ ಸಾವಿಗೆ ಕಾರಣವಾದ ಮುಂಬಯಿ ಮೇಲಿನ ಉಗ್ರ ದಾಳಿಯ ಓರ್ವ ದಾಳಿಕೋರನಾಗಿದ್ದ ಅಜ್ಮಲ್ ಕಸಬ್ ತನ್ನ ನಿರ್ವಾಹಕರ ಕೈಯಲ್ಲಿ ಕೇವಲ ಒಂದು ದಾಳವಾಗಿದ್ದ; ಆದರೆ ಭಾರತದ “ರಾ’ ಏಜಂಟ್ ಆಗಿರುವ ಕುಲಭೂಷಣ್ ಜಾಧವ್ ಪಾಕಿಸ್ಥಾನದ ಬಲೂಚಿಸ್ಥಾನದಲ್ಲಿ ಅಶಾಂತಿಯನ್ನು ಹುಟ್ಟಿಸಿ ಅಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಭಾರೀ ಸಂಚಿನ ರೂವಾರಿಯಾಗಿದ್ದಾನೆ; ಆತ ಎಷ್ಟು ಪಾಕಿಸ್ಥಾನೀಯರ ಸಾವಿಗೆ ಕಾರಣನಾಗಿದ್ದಾನೆ ಎಂಬುದನ್ನು ನಾನು ಊಹಿಸಲಾರೆ; ಆದುದರಿಂದಲೇ ಆತ ಕಸಬ್ ಗಿಂತಲೂ ದೊಡ್ಡ ಉಗ್ರ’ ಎಂದು ಹೇಳಿದರು.
2008ರ ಮುಂಬಯಿ ಮೇಲಿನ ಉಗ್ರ ದಾಳಿಯಲ್ಲಿ ಮುಂಬಯಿ ಪೊಲೀಸರ ಕೈಗೆ ಜೀವಂತ ಸಿಕ್ಕಿಬಿದ್ದಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ನನ್ನು ಭಾರತದಲ್ಲಿ ನೇಣಿಗೆ ಹಾಕಲಾಗಿತ್ತು.
“ಕುಲಭೂಷಣ್ ಜಾಧವ್ ಕೇಸಿನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ವಿರುದ್ಧ ವಾದಿಸಲು ಪಾಕ್ ಸರಕಾರ ತನ್ನ ಕಾನೂನು ತಂಡವನ್ನು ಕಳುಹಿಸಲೇ ಬಾರದಿತ್ತು. ವಿಶ್ವ ಸಂಸ್ಥೆಗಾಗಲೀ ಐಸಿಜೆಗಾಗಲೀ ಯಾವುದೇ ಅಧಿಕಾರವಿಲ್ಲ; ಅವುಗಳು ಕೇವಲ ನಿರ್ದೇಶಗಳನ್ನು ಮಾತ್ರವೇ ನೀಡಬಹುದು. 1999ರಲ್ಲಿ ಇಬ್ಬರು ಜರ್ಮನ್ ಪ್ರಜೆಗಳನ್ನು ಗಲ್ಲಿಗೇರಿಸದಂತೆ ಐಸಿಜೆ ಹೇಳಿದ ಹೊರತಾಗಿಯೂ ಅಮೆರಿಕ ಯಾವುದೇ ಮುಲಾಜಿಲ್ಲದೆ ಆ ಇಬ್ಬರು ಜರ್ಮನ್ ಪ್ರಜೆಗಳನ್ನು ಗಲ್ಲಿಗೇರಿಸಿತ್ತು’ ಎಂದು ಮುಶರ್ರಫ್ ಹೇಳಿದರು.
ಬೇಹುಗಾರಿಕೆ ಹಾಗೂ ವಿಧ್ವಂಸಕ ಕೃತ್ಯಗಳ ಪ್ರಕರಣಗಳು ಪಾಕಿಸ್ಥಾನದ ಆಂತರಿಕ ವಿಷಯಗಳು; ಹಾಗಿರುವಾಗ ಪಾಕಿಸ್ಥಾನಕ್ಕೆ ಯಾವುದೇ ಸಲಹೆ ಸೂಚನೆ ನೀಡುವ ಅಧಿಕಾರ ಅನ್ಯ ದೇಶಗಳಿಗೆ ಇಲ್ಲ ಎಂದು ಮುಶರ್ರಫ್ ಹೇಳಿದರು.
ಪಾಕ್ನಲ್ಲಿ ಬೇಹುಗಾರಿಕೆ ನಡೆಸಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಕುಲಭೂಷಣ್ ಜಾಧವ್ ಎಷ್ಟು ಪಾಕಿಸ್ಥಾನೀಯರ ಸಾವಿಗೆ ಕಾರಣನಾಗಿದ್ದಾನೆಂಬುದು ತನಗೆ ಗೊತ್ತಿಲ್ಲ ಎಂದು ಮುಶರ್ರಫ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ