ಇಂಡೋನೇಶ್ಯ ಪ್ರಜೆಗಳಿಗೆ 30 ದಿನಗಳ ಉಚಿತ ವೀಸಾ: ಮೋದಿ ಕೊಡುಗೆ
Team Udayavani, May 30, 2018, 5:14 PM IST
ಜಕಾರ್ತಾ : ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಶ್ಯ ಪ್ರಜೆಗಳಿಗೆ 30 ದಿನಗಳ ಉಚಿತ ವೀಸಾ ಕೊಡುಗೆಯನ್ನು ನೀಡಿದ್ದಾರೆ. ಈ ಕೊಡುಗೆಯನ್ನು ಬಳಸಿಕೊಂಡು ಭಾರತೀಯ ಮೂಲದ ಇಂಡೋನೇಶ್ಯ ಪ್ರಜೆಗಳು “ನವ ಭಾರತ’ವನ್ನು ಕಾಣಲು ತಮ್ಮ ಮೂಲ ದೇಶಕ್ಕೆ ಭೇಟಿ ನೀಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಇಂಡೋನೇಶ್ಯದ ರಾಜಧಾನಿಯಾಗಿರುವ ಜಕಾರ್ತಾದಲ್ಲಿನ ಕನ್ವೆನ್ಶನ್ ಸೆಂಟರ್ನಲ್ಲಿ ಭಾರತೀಯ ಬಾಹುಳ್ಯವನ್ನು ಉದ್ದೇಶಿಸಿ ಮಾತನಾಡುತ್ತಾ “ನಮ್ಮ ದೇಶಗಳ ಹೆಸರಿನಲ್ಲಿ ಸಾಮ್ಯತೆ ಇರುವುದು ಮಾತ್ರವಲ್ಲದೆ ಉಭಯ ದೇಶಗಳ ಮಿತೃತ್ವ ಕೂಡ ವಿಶಿಷ್ಟವೂ ಅನನ್ಯವೂ ಆಗಿ ಧ್ವನಿಸುತ್ತದೆ’ ಎಂದು ಹೇಳಿದರು.
“ನಿಮ್ಮಲ್ಲಿ ಅನೇಕರು ಇದುವರೆಗೂ ಭಾರತಕ್ಕೆ ಭೇಟಿ ಕೊಟ್ಟಿಲ್ಲ. ಮುಂದಿನ ವರ್ಷ ಪ್ರಯಾಗ್ನಲ್ಲಿ ನಡೆಯುವ ಕುಂಭ ಮೇಳಕ್ಕೆ ನೀವೆಲ್ಲರೂ ಬರಬೇಕೆಂದು ನಾನು ಅಹ್ವಾನಿಸುತ್ತಿದ್ದೇನೆ. ಇಂಡೋನೇಶ್ಯದ ಪ್ರಜೆಗಳಿಗಾಗಿ ನಾವು 30 ದಿನಗಳ ಉಚಿತ ವೀಸಾ ಕೊಡುಗೆ ನೀಡುತ್ತಿದ್ದೇವೆ. ಇದನ್ನು ಬಳಸಿಕೊಂಡು ನೀವೆಲ್ಲ ಒಮ್ಮೆ ನಿಮ್ಮ ಮೂಲ ದೇಶವಾಗಿರುವ ಭಾರತಕ್ಕೆ ಭೇಟಿ ಕೊಡಿ’ ಎಂದು ಮೋದಿ ನೆರೆದ ಭಾರತೀಯ ಮೂಲದ ಜನರನ್ನು ಉದ್ದೇಶಿಸಿ ಹೇಳಿದರು.
ಈ ಭುವಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸಂಗಮಿಸುವ ಧಾರ್ಮಿಕ ಉತ್ಸವಗಳಲ್ಲಿ ಪ್ರಯಾಗದ ಕುಂಭ ಮೇಳವೂ ಒಂದೆನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು