ನಾಯಿ ಮಲ ಹೆಕ್ಕಲೂ ಬಂತು ರೊಬೋಟ್‌! ಮಲ ಎಲ್ಲಿದೆ ಎಂದು ಹುಡುಕಿ, ಹೆಕ್ಕುತ್ತದೆ!


Team Udayavani, Dec 15, 2019, 8:40 PM IST

dog-robot

ವಾಷಿಂಗ್ಟನ್‌: ನಾಯಿಗಳು ಹೋದ ಕಡೆಗಳಲ್ಲಿ ಕೆಲವೊಮ್ಮೆ ಛೀ.. ಥೂ..! ಮಾಡಿ ಬಿಡುತ್ತವೆ. ಎಲ್ಲರೂ ಸಂಚರಿಸುವ ಪ್ರದೇಶಗಳಲ್ಲಿ ಅದನ್ನು ತೆಗೆಯುವುದೂ ಕಷ್ಟವೇ.

ಇಂತಹ ಸಮಸ್ಯೆ ವಿದೇಶೀಯರಿಗೂ ಇದೆ. ಇದಕ್ಕಾಗಿ ಅವರೀಗ ಪರಿಹಾರವನ್ನೂ ಕಂಡುಹುಡುಕಿದ್ದಾರೆ.

ಇನ್ನು ಅಮೆರಿಕದಲ್ಲಿ ನಾಯಿ ಮಲ ಹಾಕಿದರೆ ಚಿಂತೆ ಇಲ್ಲ. ಅದಕ್ಕಾಗಿ ಅವರು ರೊಬೋಟ್‌ ಒಂದನ್ನು ಆವಿಷ್ಕರಿಸಿದ್ದು, ಅದುವೇ ನಾಯಿ ಮಲ ಎಲ್ಲಿದೆ ಎಂದು ಹುಡುಕಾಡಿ ಅದನ್ನು ತೆಗೆದು ಶುಚಿಗೊಳಿಸಲಿದೆ.

ಬೀಟ್ಲೆ ಎಂಬ ಹೆಸರಿನ ಈ ರೊಬೋಟ್‌ ಕಂಪ್ಯೂಟರ್‌ ಕಣ್ಣುಗಳನ್ನು ಹೊಂದಿದ್ದು, ನಾಯಿ ಮಲ ಎಲ್ಲಿದೆ ಎಂದು ಹುಡುಕಾಡುತ್ತದೆ. ನಾಯಿ ಮಲ ಕಂಡ ತಕ್ಷಣ ಅದರ ಮೇಲೆ ಹೋಗಿ ತನ್ನ ಕೆಳಭಾಗದಲ್ಲಿರುವ ಮೆಕ್ಯಾನಿಕಲ್‌ ಕೈಯಿಂದ ಮಲವನ್ನು ಹೆಕ್ಕುತ್ತದೆ. ಬಳಿಕ ಅದನ್ನು ಸೀಲ್‌ ಆಗಿರುವ ಕಂಟೈನರ್‌ಗೆ ಹಾಕಿ ಬೇರೆ ಕಡೆಯಲ್ಲಿ ವಿಲೇವಾರಿ ಮಾಡುತ್ತದೆ.

ನಿರ್ದಿಷ್ಟ ಪ್ರದೇಶದ ಒಳಗೆ ಅದು ನಾಯಿ ಮಲವನ್ನು ಗುರುತಿಸುತ್ತದೆ. ಇದಕ್ಕಾಗಿ ಮನೆಯ ಅಂಗಳ ಎಷ್ಟು ದೊಡ್ಡದಿದೆ? ಎಲ್ಲಿ ಮಲ ಹುಡುಕಾಡಬೇಕು ಎಂದು ಮೊದಲು ಮಾಹಿತಿಯನ್ನು ರೊಬೋಟ್‌ಗೆ ನೀಡಬೇಕಿದೆ.

ಕೃತಕ ಬುದ್ಧಿಮತ್ತೆ ಅನ್ವಯ ರೊಬೋಟ್‌ ಈ ಕೆಲಸ ಮಾಡುತ್ತದೆ. ಸದ್ಯ ರೊಬೋಟ್‌ ಪ್ರಾಯೋಗಿಕ ಹಂತದಲ್ಲಿದ್ದು, ಶೀಘ್ರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ನಾಯಿ ಅಲ್ಲದೆ ಇತರ ಸಾಕು ಪ್ರಾಣಿಗಳ ಮಲವನ್ನೂ ಪತ್ತೆ ಮಾಡುವಂತೆ ರೊಬೋಟ್‌ ಅನ್ನು ಸುಧಾರಿಸುವ ಉದ್ದೇಶವನ್ನು ಕಂಪೆನಿ ಹೊಂದಿದೆ.

ಮುಂಭಾಗ ಎರಡು ದೊಡ್ಡದಾದ ಮತ್ತು ಹಿಂಭಾಗ ಎರಡು ಸಣ್ಣ ಚಕ್ರಗಳನ್ನು ಹೊಂದಿದೆ. ಕಂಪ್ಯೂಟರೀಕೃತ ವ್ಯವಸ್ಥೆ, ಮಲ ಶೇಖರಣೆ ಮಾಡುವ ವ್ಯಸ್ಥೆಯನ್ನು ಹೊಂದಿದೆ.

ಜಿಪಿಎಸ್‌ ಮುಖಾಂತರ ಇದು ಮನೆಯ ಅಂಗಳ, ಬೀದಿ, ಪಾರ್ಕ್‌ನ ಹುಲ್ಲುಹಾಸನ್ನು ಗುರುತಿಸುತ್ತದೆ.

ವಿದೇಶಗಳಲ್ಲಿ ನಾಯಿಗಳು ಕಂಡ ಕಂಡಲ್ಲಿ ಮಲ ಹಾಕುವಂತಿಲ್ಲ. ಹಾಗೊಂದು ವೇಳೆ ಹಾಕಿದರೆ ಅದಕ್ಕೆ ಮಾಲಕನೇ ಜವಾಬ್ದಾರಿ. ಇದರೊಂದಿಗೆ ಮಲವನ್ನು ತೆಗೆಯಲು ಸುಲಭವಾಗುವಂತೆ ಈ ರೊಬೋಟ್‌ ಇರಲಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.