ಬಡತನವನ್ನು ಪುಸ್ತಕದಿಂದ ಕಲಿತಿಲ್ಲ: ಪ್ರಧಾನಿ ಮೋದಿ
Team Udayavani, Oct 31, 2019, 6:30 AM IST
ರಿಯಾದ್: “ನಾನು ಬಡತನ ವನ್ನು ಪುಸ್ತಕ ಓದಿ ತಿಳಿದುಕೊಂಡಿದ್ದಲ್ಲ. ಬಡತನದಿಂದಲೇ ಬೆಳೆದುಬಂದವನು. ರೈಲು ನಿಲ್ದಾಣದಲ್ಲಿ ಟೀ ಮಾರಿ ಬದುಕಿ ದವನು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಡೆದ ಫ್ಯೂಚರ್ ಇನ್ವೆಸ್ಟ್ ಮೆಂಟ್ ಇನೀಷಿಯೇಟಿವ್ (ಎಫ್ಐಐ) ಕಾರ್ಯಕ್ರಮದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ದೊಡ್ಡ ರಾಜಕೀಯ ಕುಟುಂಬದ ಹಿನ್ನೆಲೆ ಯವನಲ್ಲ. ಬಡತನದ ಬಗ್ಗೆ ಪುಸ್ತಕ ಗಳಿಂದ ತಿಳಿದುಕೊಂಡವನಲ್ಲ. ಬಡತನ ದಲ್ಲೇ ಬದುಕಿದವನು. ಚಹಾ ಮಾರಿ ಈಗ ಇಲ್ಲಿಯವರೆಗೆ ತಲುಪಿದ್ದೇನೆ ಎಂದಿದ್ದಾರೆ.
ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಬಡತನ ನಿರ್ಮೂಲನೆಯಲ್ಲಿ ಯಶಸ್ವಿಯಾಗುತ್ತದೆ. ನಾವು ಬಡವರ ಸಬಲೀಕರಣ ಮಾಡುವ ಮೂಲಕ ಬಡತನದ ವಿರುದ್ಧ ಹೋರಾಡುತ್ತಿದ್ದೇವೆ. ಬಡವರಿಗೂ ಘನತೆ ಎಂಬುದಿರುತ್ತದೆ. ನಾನೇ ಸ್ವತಃ ಬಡತನವನ್ನು ಕೊನೆಗಾಣಿ ಸುತ್ತೇನೆ ಎಂದು ಬಡವನೊಬ್ಬ ಹೇಳಿಕೊಂಡರೆ ಅದಕ್ಕಿಂತ ತೃಪ್ತಿಯ ವಿಚಾರ ಬೇರೊಂದಿಲ್ಲ. ನಾವೆಲ್ಲರೂ ಆತನಿಗೆ ಘನತೆಯನ್ನು ಒದಗಿಸಿ, ಸಬಲೀಕರಣಕ್ಕೆ ಸಹಾಯ ಮಾಡಬೇಕು ಎಂದು ಮೋದಿ ಹೇಳಿದ್ದಾರೆ.
ಸ್ವದೇಶಕ್ಕೆ ವಾಪಸ್: ತಮ್ಮ ಒಂದು ದಿನದ ಸೌದಿ ಅರೇಬಿಯಾ ಭೇಟಿ ಮುಗಿಸಿ ಪ್ರಧಾನಿ ಮೋದಿ ಬುಧವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ. ಸೌದಿ ದೊರೆ ಸೇರಿದಂತೆ ಅಲ್ಲಿನ ಪ್ರಮುಖ ನಾಯಕತ್ವದೊಂದಿಗೆ ಮಾತುಕತೆ ನಡೆಸಿರುವ ಮೋದಿ ಪ್ರಮುಖ ಆರ್ಥಿಕ ವೇದಿಕೆಯಲ್ಲೂ ಮಾತನಾಡುವ ಮೂಲಕ ರಿಯಾದ್ ಭೇಟಿಯನ್ನು ಯಶಸ್ವಿಯಾಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ