ಅಮೆರಿಕದ ಹಲವೆಡೆ ನಿಷೇಧಾಜ್ಞೆ
Team Udayavani, Jun 1, 2020, 11:49 AM IST
ವಾಷಿಂಗ್ಟನ್ನಲ್ಲಿ ಶ್ವೇತಭವನದ ಸಮೀಪ ಪ್ರತಿಭಟನೆ ನಡೆಸಲಾಯಿತು.
ವಾಷಿಂಗ್ಟನ್/ಮಿನ್ನಿಯಾಪೊಲೀಸ್: ಈಗಾಗಲೇ ಕೋವಿಡ್ ಹೊಡೆತಕ್ಕೆ ತತ್ತರಿಸಿಹೋಗಿರುವ ಅಮೆರಿಕದಲ್ಲೀಗ ಜನಾಂಗೀಯ ದ್ವೇಷದ ಬೆಂಕಿ ಹೊತ್ತಿ ಉರಿಯುತ್ತಿದೆ. ಕಪ್ಪು ವರ್ಣೀಯ ಸಮು ದಾಯದ ವ್ಯಕ್ತಿ ಸಾವಿಗೆ ನ್ಯಾಯ ಕೋರಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆ, ಪೊಲೀಸರ ವರ್ತನೆಯಿಂದಾಗಿ ಅಹಿಂಸೆಯ ರೂಪ ಪಡೆದಿದೆ.
ಪ್ರತಿಭಟನೆಯು ಮಿನ್ನಿಯಾಪೊಲೀಸ್ನಿಂದ ಆಚೆಗಿನ ಇತರ ಪ್ರಮುಖ ನಗರಗಳಿಗೂ ವ್ಯಾಪಿಸಿದೆ. ಪರಿಣಾಮ, ಲಾಸ್ ಏಂಜಲೀಸ್, ಷಿಕಾಗೊ ಮತ್ತು ಅಟ್ಲಾಂಟ ಸೇರಿ ಅಮೆರಿಕದ 24ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ನಾಗರಿಕ ಅಶಾಂತಿಯನ್ನು ನಿಯಂತ್ರಿಲು ರಾಷ್ಟ್ರೀಯ ಕಾವಲು ಪಡೆ (ನ್ಯಾಷನಲ್ ಗಾರ್ಡ್) ಸೈನಿಕರ ನೆರವು ಪಡೆಯಲಾಗಿದೆ.
ಕಳೆದ ಸೋಮವಾರ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸುವಾಗ ಜಾರ್ಜ್ ಫ್ಲಾಯ್ಡ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬ ತನ್ನ ಮೊಣಕಾ ಲಿನಿಂದ ಕುತ್ತಿಗೆಯನ್ನು ಬಲವಾಗಿ ಒತ್ತಿದ್ದರಿಂದ ಫ್ಲಾಯ್ಡ ಮೃತಪಟ್ಟಿದ್ದ. ಬಳಿಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಡೆಟ್ರಾಯಿಟ್ನಲ್ಲಿ ಅಪರಿಚಿತ ಹಾರಿಸಿದ ಗುಂಡಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಲಾಸ್ ಏಂಜಲೀಸ್ನಲ್ಲಿ ಹಿಂಸಾಚಾರ ಹೆಚ್ಚಾಗಿದ್ದರಿಂದ ಪೊಲೀಸರು ರಬ್ಬರ್ ಗುಂಡುಗಳನ್ನು ಹಾರಿಸಿ ಪ್ರತಿಭಟನಾಕಾ ರರನ್ನು ಚದುರಿಸಿದ್ದಾರೆ. ಷಿಕಾಗೊ, ನ್ಯೂಯಾರ್ಕ್ ನಗರಗಳಲ್ಲೂ ಪ್ರತಿಭಟನಾ ಕಾರರು, ಪೊಲೀಸರ ನಡುವೆ ಚಕಮಕಿ ನಡೆದಿದೆ. ಈ ನಡುವೆ ಫ್ಲಾಯ್ಡ ಸಾವಿಗೆ ಕಾರಣನಾದ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಎಂಬಾತನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಲಾಗಿದೆ.
ಎಚ್ಚರಿಕೆ ನೀಡಿದ ಅಧ್ಯಕ್ಷ ಟ್ರಂಪ್
ಪ್ರತಿಭಟನೆ ಮತ್ತು ಹಿಂಸಾಚಾರ ಕುರಿತು ಸರಣಿ ಟ್ವೀಟ್ ಮಾಡಿರುವ ಅಧ್ಯಕ್ಷ ಟ್ರಂಪ್, ಪ್ರತಿಭಟನಾಕಾರರೇನಾದರೂ ವೈಟ್ ಹೌಸ್ ಬಳಿ ಬಂದರೆ, ಅವರನ್ನು ಅತ್ಯಂತ ಕ್ರೂರ ಶ್ವಾನಗಳು ಹಾಗೂ ಶಸ್ತ್ರಾಸ್ತ್ರಗಳ ಮೂಲಕ ಸ್ವಾಗತಿಸಲಾಗುವುದು, ಎಂದು ಎಚ್ಚರಿಕೆ ನೀಡಿದ್ದಾರೆ. ನಗರಗಳಲ್ಲಿ ಶಾಂತಿ ಕಾಯ್ದುಕೊಳ್ಳದಿದ್ದರೆ ಮಿಲಿಟರಿ ನಿಯೋಜಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಗಲಭೆಗೆ ಎಡ ಪಂಥೀಯರು ಕಾರಣ ಎಂದು ದೂರಿರುವ ಟ್ರಂಪ್, ವ್ಯಾಪಕ ಲೂಟಿ ಮತ್ತು ಸಾರ್ವಜನಿಕರ ಆಸ್ತಿಗೆ ಬೆಂಕಿ ಹಚ್ಚುವ ಮೂಲಕ ಗಲಭೆಕೋರರು ಜಾರ್ಜ್ ಫ್ಲಾಯ್ಡ ಬಲಿದಾನವನ್ನು ಅವಮಾನಿ ಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ