ನಿಯಮ ಗೌರವಿಸಿ, ಉಲ್ಲಂಘನೆ ಮಾಡಲೇಬೇಡಿ; ಚೀನಕ್ಕೆ ಕ್ವಾಡ್ ರಾಷ್ಟ್ರಗಳ ಕಠೋರ ಎಚ್ಚರಿಕೆ
Team Udayavani, May 25, 2022, 7:10 AM IST
ಟೋಕಿಯೋ: “ಇಂಡೋ-ಪೆಸಿಫಿಕ್ ವಲಯ ದಲ್ಲಿ ಏಕಪಕ್ಷೀಯವಾಗಿ ಯಾವುದೇ ಬದಲಾವಣೆ ಮಾಡ ಬೇಡಿ’ ಹೀಗೆಂದು ಚೀನಕ್ಕೆ ಕ್ವಾಡ್ ರಾಷ್ಟ್ರಗಳ ಒಕ್ಕೂಟ ಮಂಗಳ ವಾರ ಕಠೊರ ಎಚ್ಚರಿಕೆ ನೀಡಿದೆ.
ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಭಾರತ, ಜಪಾನ್, ಅಮೆರಿಕ, ಆಸ್ಟ್ರೇಲಿಯಾಗಳನ್ನು ಒಳಗೊಂಡ ಕ್ವಾಡ್ ರಾಷ್ಟ್ರ ಗಳ ಸಮ್ಮೇಳನದಲ್ಲಿ ಇಂಡೋ-ಪೆಸಿಫಿಕ್ ವಲಯದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳನ್ನು ಸಮಗ್ರವಾಗಿ ಚರ್ಚಿಸಲಾಯಿತು.
ದಕ್ಷಿಣ ಸಮುದ್ರ ಚೀನ ವ್ಯಾಪ್ತಿ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಸೇನಾ ಬಲ ಬಳಸಿ ಅಂತಾ ರಾಷ್ಟ್ರೀಯ ಮಟ್ಟದ ನಿಯಮಗಳನ್ನು ಉಲ್ಲಂಘಿ ಸಿ ಅಲ್ಲಿನ ವ್ಯವಸ್ಥೆಯಲ್ಲಿ ಏಕಪಕ್ಷೀಯ ವಾಗಿ ಬದಲಾವಣೆ ತರಲೇ ಬಾರದು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿದಾ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾದ ನಿಯೋಜಿತ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದ್ದಾರೆ.
“ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ, ಸ್ವಾತಂತ್ರ್ಯಕ್ಕೆ, ಸಾರ್ವ ಭೌಮತೆ, ಪ್ರಾದೇಶಿಕ ಸಮಗ್ರತೆಗೆ ಬೆಂಬಲ ನೀಡು ತ್ತೇವೆ. ವಿವಾದ ಇದ್ದಲ್ಲಿ ಶಾಂತವಾಗಿ ಪರಿ ಹರಿಸ ಬೇಕು’ ಎಂದು ಕ್ವಾಡ್ ನಾಯಕರು ಹೇಳಿದ್ದಾರೆ.
ಪಾಕ್ಗೆ ಖಂಡನೆ
2021ರ ಸೆಪ್ಟಂಬರ್ ಬಳಿಕ ನಡೆದ 2ನೇ ಖುದ್ದು ಕ್ವಾಡ್ ಸಭೆಯಲ್ಲಿ 2008ರಲ್ಲಿ ಮುಂಬಯಿ, 2016ರಲ್ಲಿ ಪಠಾಣ್ಕೋಟ್ನಲ್ಲಿ ಐಎಎಫ್ ನೆಲೆಯ ಮೇಲೆ ಪಾಕ್ ಪ್ರೇರಿತ ಉಗ್ರರ ದಾಳಿಯನ್ನು ಕಠಿನ ಶಬ್ದಗಳಲ್ಲಿ ಖಂಡಿಸಲಾಗಿದೆ. ಉಗ್ರ ಸಂಘಟನೆಗಳಿಗೆ ಮತ್ತು ಅವುಗಳಿಗೆ ಪ್ರೋತ್ಸಾಹ ನೀಡುವ ಸಂಘಟನೆಗಳಿಗೆ ಎಲ್ಲ ರೀತಿಯಲ್ಲಿ ವಿತ್ತೀಯ ನೆರವು ನೀಡುವನ್ನು ನಿಲ್ಲಿಸಬೇಕು ಎಂದೂ ಕ್ವಾಡ್ ನಾಯಕರು ಆಗ್ರಹಿಸಿದ್ದಾರೆ.
ನಂಬಿಕೆಯೇ ಶಕ್ತಿ
ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪರಸ್ಪರ ನಂಬಿಕೆ ಮತ್ತು ನಿರ್ಧಾರಗಳೇ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಹೊಸ ಶಕ್ತಿ ನೀಡುತ್ತವೆ. ಇದರಿಂದಾಗಿ ಇಂಡೋ-ಪೆಸಿಫಿಕ್ ವಲಯದಲ್ಲಿ ಎಲ್ಲರನ್ನೂ ಒಳ ಗೊಂಡಂತೆ ಅಭಿವೃದ್ಧಿ ಸಾಧಿಸಲು ನೆರವಾಗಲಿದೆ. ಒಳ್ಳೆಯತನಕ್ಕಾಗಿ ಬಲ ಎಂಬ ನಿರ್ಣಯದೊಂದಿಗೆ ಒಕ್ಕೂಟ ಮುಂದುವರಿಯಲಿದೆ ಎಂದರು. ಸ್ಥಾಪನೆಗೊಂಡ ಅಲ್ಪಾವಧಿಯಲ್ಲೇ ಜಗತ್ತಿನಲ್ಲಿ ಒಕ್ಕೂಟ ತನ್ನ ಪಭಾವ ಬೀರಿದೆ ಎಂದೂ ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.
ಹಾರಿದ ಚೀನ, ರಷ್ಯಾ ವಿಮಾನಗಳು
ಶೃಂಗ ಸಮ್ಮೇಳನ ನಡೆಯುತ್ತಿರುವಂತೆಯೇ ಚೀನದ 2 ಎಚ್-6ಕೆ ಬಾಂಬರ್ಗಳು ಮತ್ತು ರಷ್ಯಾದ 2 ಟಿಯು-95ಎಂಎಸ್ ಯುದ್ಧ ವಿಮಾನಗಳು ಜಪಾನ್ ಸಮುದ್ರದ ಮೇಲೆ ಹಾರಾಟ ನಡೆಸಿವೆ. ಈ ಬಗ್ಗೆ ಜಪಾನ್ ರಕ್ಷಣಾ ಸಚಿವ ನೊಬೊಕುಶಿ ಮಾಹಿತಿ ನೀಡಿದ್ದಾರೆ. ಈ ಎರಡೂ ರಾಷ್ಟ್ರಗಳ ವಿಮಾನಗಳು ಜಪಾನ್ನ ವಾಯು ಪ್ರದೇಶವನ್ನು ಪ್ರವೇಶ ಮಾಡದೇ ಇದ್ದರೂ ಅದಕ್ಕೆ ಸಮೀಪ ಹಾರಾಟ ನಡೆಸಿವೆ. ಇಂಥ ಬೆಳವಣಿಗೆ 2021ರ ನವೆಂಬರ್ ಬಳಿಕ ಇದು ನಾಲ್ಕನೇಯ ದ್ದಾಗಿದೆ. ವಿಮಾನ ಹಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ರಷ್ಯಾ, ವಿಮಾನಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದವು ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ಪಂಚಾಂಗ ನೋಡಿ ರಾಕೆಟ್ ಉಡಾವಣೆ : ಟೀಕೆಗೆ ಗುರಿಯಾದ ಖ್ಯಾತ ನಟ ಮಾಧವನ್ !
3 ಲೋಕಸಭೆ ಮತ್ತು 7 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಹೀಗಿದೆ
ಸಾಗರ: ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ 14 ಮಕ್ಕಳು ದಿಢೀರ್ ಅಸ್ವಸ್ಥ
ಮುಂದಿನ 25 ವರ್ಷದಲ್ಲಿ ರಾಜ್ಯಕ್ಕೆ ಜಾಗತಿಕ ಪ್ರತಿಷ್ಠೆ: ಸಚಿವ ಅಶ್ವತ್ಥ ನಾರಾಯಣ
ಕಾರವಾರ: ಜಿಲ್ಲೆಯಲ್ಲಿ 15.21 ಲಕ್ಷ ರೂ. ಬೆಲೆಯ 75 ಕೆಜಿ ಗಾಂಜಾ ನಾಶ