ವಿಕಿರಣಶೀಲ ಜಲ: ಸಮುದ್ರಕ್ಕೆ ಹರಿಸುವುದೇ ಜಪಾನ್?
Team Udayavani, Nov 19, 2020, 5:15 AM IST
ಟೋಕಿಯೋ: ಈ ಹಿಂದೆ ಅವಘಡಕ್ಕೆ ತುತ್ತಾಗಿದ್ದ ತನ್ನ ಫುಕುಶಿಮಾ ಪರಮಾಣು ಸ್ಥಾವರದಲ್ಲಿನ ಬಳಸಿದ ನೀರನ್ನು ಜಪಾನ್ ಸರಕಾರ ಸಮುದ್ರಕ್ಕೆ ಹರಿಯಬಿಡಲು ಸಿದ್ಧವಾಗಿದೆ ಎನ್ನಲಾಗುತ್ತಿದೆ. ಜಪಾನ್ ಹೀಗೇನಾದರೂ ಮಾಡಿಬಿಟ್ಟರೆ ಸಾಗರದ ಜಲಜೀವಗಳಿಗೆ ಹಾಗೂ ಪ್ರಪಂಚದ ವಿವಿಧ ಕರಾವಳಿ ಭಾಗಗಳಲ್ಲಿ ವಾಸಿಸುವ ಜನರಿಗೆ ಮಾರಕವಾಗಲಿದೆ ಎಂದು ಭಾರತೀಯ ಹಾಗೂ ಜಾಗತಿಕ ಪರಿಣತರು ಎಚ್ಚರಿಸಲಾರಂಭಿಸಿದ್ದಾರೆ.
ಜಪಾನ್ ಈ ನಿರ್ಧಾರಕ್ಕೆ ಬಂದರೆ, ಈ ಪ್ರಮಾಣದಲ್ಲಿ ದೇಶವೊಂದು ವಿಕಿರಣಶೀಲ ಜಲವನ್ನು ಸಮುದ್ರಕ್ಕೆ ಹರಿಸಲಿರುವುದು ಇದೇ ಮೊದಲಾಗುತ್ತದೆ. ಇದು ಜಾಗತಿಕವಾಗಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಜಪಾನ್ ಈ ಕಲುಷಿತ ಜಲವನ್ನು ನಿಷ್ಕ್ರಿಯಗೊಳಿಸಲು ಅನ್ಯಮಾರ್ಗ ಹುಡುಕಬೇಕು ಎಂದು ಡಿಆರ್ಡಿಒದ ಆರೋಗ್ಯ ವಿಜ್ಞಾನ ವಿಭಾಗದ ಮಹಾನಿರ್ದೇಶಕ ಎ.ಕೆ.ಸಿಂಗ್ ಹೇಳಿದ್ದಾರೆ.
ಫುಕುಶಿಮಾ ಸ್ಥಾವರಗಳಲ್ಲಿನ ನೀರಿನಲ್ಲಿ ಸೆಸಿಯಂ, ಟ್ರೈಟಿಯಂ, ಕೋಬಾಲ್ಟ್ ಮತ್ತು ಕಾರ್ಬನ್-12ನಂಥ ವಿಕಿರಣಶೀಲ ಅಂಶಗಳಿದ್ದು ಅವು ನಾಶವಾಗಲು 12-30 ವರ್ಷ ಗಳು ಹಿಡಿಯುತ್ತವೆ. ಅಲ್ಲಿಯವರೆಗೂ ಅವು ತಮಗೆದುರಾಗುವ ಜೀವರಾಶಿಯನ್ನೆಲ್ಲ ನಾಶಮಾಡುತ್ತಾ ಹೋಗುತ್ತವೆ.
ಪರಿಣಾಮವಾಗಿ ಜಾಗತಿಕ ಮೀನುಗಾರಿಕೆ ಉದ್ಯಮಕ್ಕೆ ಬಹುದೊಡ್ಡ ಪೆಟ್ಟು ಬೀಳಲಿದ್ದು, ಈ ನೀರಿನ ಸಂಪರ್ಕಕ್ಕೆ ಬರುವವರಿಗೆ ಕ್ಯಾನ್ಸರ್ನಂಥ ರೋಗಗಳೂ ಎದುರಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…