ಪರಿಣಾಮಕಾರಿ ಪ್ರತಿಕಾಯ ಸೃಷ್ಟಿ; ಇಲಿಗಳ ಮೇಲೆ ಪ್ರಯೋಗ ಯಶಸ್ವಿ
ಗುಣ ಮುಖರಾದ ವ್ಯಕ್ತಿಗಳ ದೇಹದಿಂದ ಸುಮಾರು 600 ಬಗೆಯ ಪ್ರತಿಕಾಯಗಳನ್ನು ಪ್ರತ್ಯೇಕಿಸಿದ್ದಾರೆ.
Team Udayavani, Sep 26, 2020, 12:40 PM IST
ಬರ್ಲಿನ್: ಕೋವಿಡ್ ವೈರಸ್ ವಿರುದ್ಧ ವಿಜ್ಞಾನಿಗಳು ಪರಿಣಾಮಕಾರಿಯಾದ ಪ್ರತಿಕಾಯಗಳನ್ನು ಪತ್ತೆ ಹಚ್ಚಿದ್ದು, ಕೋವಿಡ್ ಗೆ ಪರೋಕ್ಷ ಲಸಿಕೆ(ಪ್ಯಾಸಿವ್ ವ್ಯಾಕ್ಸಿನೇಷನ್) ಯನ್ನು ಅಭಿವೃದ್ಧಿಪಡಿಸಲು ಇದು ನೆರವಾಗಲಿದೆ ಎಂಬ ಆಶಾಭಾವ ಮೂಡಿದೆ.
ಪರೋಕ್ಷ ಲಸಿಕೆಯೆಂದರೆ ಸಿದ್ಧ ಪ್ರತಿ ಕಾಯ(ರೆಡಿಮೇಡ್ ಆ್ಯಂಟಿಬಾಡಿ)ಗಳನ್ನು ವ್ಯಕ್ತಿಯ ದೇಹದೊಳಕ್ಕೆ ಸೇರಿಸುವುದು. ಇವುಗಳು ಕೆಲವು ಸಮಯದ ನಂತರ ತಾವಾಗಿಯೇ ನಶಿಸಿಹೋಗುತ್ತವೆ. ಸಕ್ರಿಯ ಲಸಿಕೆ(ಆ್ಯಕ್ಟಿವ್ ವ್ಯಾಕ್ಸಿನೇಷನ್)ಯಲ್ಲಿ ಪ್ರತಿಕಾಯಗಳು ಅಭಿವೃದ್ಧಿಯಾಗುವವರೆಗೂ ಕಾಯಬೇಕಾಗುತ್ತದೆ. ಆದರೆ, ಪರೋಕ್ಷ ಲಸಿಕೆಯಲ್ಲಿ ತತ್ಕ್ಷಣದ ಪರಿಣಾಮ ಕಾಣಬಹುದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಕೃತಕ ಪ್ರತಿಕಾಯ ಸೃಷ್ಟಿ: ಜರ್ಮನ್ ಸೆಂಟರ್ ಫಾರ್ ನ್ಯೂರೋಡೀಜನರೇಟಿವ್ ಡಿಸೀಸಸ್ (ಡಿಝೆಡ್ಎನ್ಇ) ಮತ್ತು ಚಾರೈಟ್-ಯುನಿ ವರ್ಸಿಟಾಟ್ಸ್ ಮೆಡಿಸಿನ್ ಬರ್ಲಿನ್ನ ವಿಜ್ಞಾನಿ ಗಳು ಕೋವಿಡ್-19 ಸೋಂಕಿನಿಂದ ಗುಣ ಮುಖರಾದ ವ್ಯಕ್ತಿಗಳ ದೇಹದಿಂದ ಸುಮಾರು 600 ಬಗೆಯ ಪ್ರತಿಕಾಯಗಳನ್ನು ಪ್ರತ್ಯೇಕಿಸಿದ್ದಾರೆ.
ಇದನ್ನೂ ಓದಿ: ತಂಗಿಯ ಒಂದು ಪ್ರಶ್ನೆಯಿಂದ ಕೃಷಿ ಮಹತ್ವ ಅರಿತು ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು
ನಂತರ, ಈ ಪೈಕಿ ಪರಿಣಾಮಕಾರಿ ಎಂದೆನಿಸಿದ ಪ್ರತಿಕಾಯಗಳನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಬಳಿಕ ಸೆಲ್ ಕಲ್ಚರ್ ಪ್ರಕ್ರಿಯೆ ಮೂಲಕ ಕೃತಕವಾಗಿ ಪ್ರತಿಕಾಯಗಳನ್ನು ಸೃಷ್ಟಿಸಿದ್ದಾರೆ. ರೋಗಕಾರಕಗಳು ಅಥವಾ ವೈರಸ್ ಮನುಷ್ಯನ ಜೀವಕೋಶದೊಳಕ್ಕೆ ಪ್ರವೇಶಿಸದಂತೆ ಮತ್ತು ಸಂತಾನೋತ್ಪತ್ತಿ ಮಾಡ ದಂತೆ ಈ ಪ್ರತಿಕಾಯಗಳು ತಡೆಯುತ್ತವೆ.
ಅಷ್ಟೇ ಅಲ್ಲದೆ, ಇವುಗಳು ರೋಗಕಾರಕಗಳನ್ನು ನಿರ್ಮೂಲನೆ ಮಾಡುವಂಥ ರೋಗನಿರೋಧಕ ಶಕ್ತಿಯನ್ನೂಕೋಶಗಳಿಗೆ ಒದಗಿಸುತ್ತವೆ. ಈಗಾಗಲೇ ಇಲಿಗಳ ಮೇಲೆ ಇದನ್ನು ಪ್ರಯೋಗಿಸಲಾಗಿದೆ. ಸೋಂಕು ದೃಢಪಟ್ಟ ಬಳಿಕ ಈ ಪ್ರತಿಕಾಯಗಳನ್ನು ಇಲಿಗಳ ದೇಹಕ್ಕೆ ಸೇರಿಸಿದಾಗ, ಅವುಗಳಲ್ಲಿ ಅಲ್ಪಪ್ರಮಾಣದ ರೋಗಲಕ್ಷಣಗಳಷ್ಟೇ ಗೋಚರಿಸಿವೆ. ಆದರೆ, ಸೋಂಕು ದೃಢಪಡುವ ಮುನ್ನವೇ ಈ ಪ್ರತಿಕಾಯಗಳನ್ನು ನೀಡಿದಾಗ, ಇಲಿಗಳಲ್ಲಿ ಅನಾರೋಗ್ಯವೇ ಕಾಣಿಸಿಕೊಳ್ಳಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಈಗ ಈ ಪ್ರತಿಕಾಯಗಳನ್ನು ಬಳಸಿ ಪರೋಕ್ಷ ಲಸಿಕೆ ಅಭಿವೃದ್ಧಿಪಡಿಸಲು ನಾವು ಮುಂದಾಗಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಭಾರತದಿಂದ ಬಂದು ಬಾಲಿವುಡ್ ನಲ್ಲಿ ಮಿಂಚು ಹರಿಸಿದ್ದ ಎಸ್ ಪಿಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ