ನಮ್ಮ ಜಿರಳೆಗಳನ್ನು ವಾಪಸ್ ಕೊಡಿ! ಹರಾಜು ಸಂಸ್ಥೆಗೆ ನಾಸಾ ಸೂಚನೆ
ಚಂದ್ರನ ಧೂಳಿನ ಕಣವನ್ನೂ ಮರಳಿಸಿ
Team Udayavani, Jun 25, 2022, 7:00 AM IST
ಬೋಸ್ಟನ್: “ನಮ್ಮ ಜಿರಳೆಗಳು ಮತ್ತು ಚಂದ್ರನ ಧೂಳನ್ನು ನಮಗೆ ವಾಪಸ್ ಕೊಡಿ…’
ಹೀಗೆಂದು ಕೇಳಿರುವುದು ಯಾರು ಗೊತ್ತಾ? ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ! ಬೋಸ್ಟನ್ ಮೂಲದ ಆರ್ಆರ್ ಹರಾಜು ಸಂಸ್ಥೆಗೆ ನಾಸಾ ಇಂಥದ್ದೊಂದು ಮನವಿ ಮಾಡಿದೆ. ಅಷ್ಟೇ ಅಲ್ಲ, 1969ರ ಅಪೋಲೋ 11 ಯೋಜನೆಯ ವೇಳೆ ಚಂದ್ರನ ನೆಲದಿಂದ ತರಲಾದ ಧೂಳಿನ ಕಣಗಳ ಮಾರಾಟವನ್ನು ಕೂಡಲೇ ನಿಲ್ಲಿಸುವಂತೆಯೂ ಸಂಸ್ಥೆಗೆ ನಾಸಾ ಸೂಚಿಸಿದೆ.
ವಿಷಯ ಇಷ್ಟೆ: 1969ರ ಚಂದ್ರಯಾನದ ವೇಳೆ ನಾಸಾವು ಚಂದ್ರನ ಮೇಲ್ಮೈನಿಂದ 21.3 ಕೆ.ಜಿ. ಕಲ್ಲು ಹಾಗೂ ಧೂಳನ್ನು ತಂದಿತ್ತು. ನಂತರ ಆ ಧೂಳನ್ನು ಜಿರಳೆಗಳು, ಕೀಟಗಳು, ಮೀನುಗಳಿಗೆ ತಿನ್ನಿಸಲಾಗಿತ್ತು.
ಚಂದ್ರನಲ್ಲಿನ ಕಲ್ಲು ಹಾಗೂ ಧೂಳಿನ ಕಣಗಳಲ್ಲಿ ಜೀವಿಗಳ ಪ್ರಾಣಕ್ಕೆ ಅಪಾಯ ಉಂಟುಮಾಡುವಂಥ ರೋಗಕಾರಕ ಅಂಶಗಳಿವೆಯೇ ಎಂಬುದನ್ನು ಪರೀಕ್ಷಿಸುವುದು ಇದರ ಉದ್ದೇಶವಾಗಿತ್ತು.
ಧೂಳನ್ನು ಸೇವಿಸಿದ್ದ 3 ಜಿರಳೆಗಳನ್ನು ಮಿನ್ನೆಸೋಟಾ ವಿವಿಗೆ ತಂದು ಪ್ರಯೋಗ ನಡೆಸಲಾಗಿತ್ತು. ಅದನ್ನು ಅಧ್ಯಯನ ನಡೆಸಿದ್ದ ವಿಜ್ಞಾನಿ ಮೇರಿಯನ್ ಬ್ರೂಕ್ಸ್, “ಚಂದ್ರನ ಮಣ್ಣಲ್ಲಿ ರೋಗಕಾರಕ ಅಂಶ ಕಂಡುಬಂದಿಲ್ಲ’ ಎಂದಿದ್ದರು. ಅವರು 2007ರಲ್ಲಿ ನಿಧನರಾದ ನಂತರ ಆ ಮಾದರಿಗಳನ್ನು ನಾಸಾಗೆ ಹಿಂದಿರುಗಿಸಿರಲಿಲ್ಲ. ಬದಲಿಗೆ, ಬ್ರೂಕ್ಸ್ ಅವರ ಪುತ್ರಿ ಆ ಜಿರಳೆಗಳು ಮತ್ತು ಧೂಳನ್ನು ಹರಾಜು ಏಜೆನ್ಸಿಗೆ ಮಾರಾಟ ಮಾಡಿದ್ದರು.
ಹರಾಜು ಮಾಡುವಂತಿಲ್ಲ:
40 ಮಿ.ಗ್ರಾಂ. ಧೂಳಿನ ಕಣ ಮತ್ತು 3 ಜಿರಳೆಗಳ ಕಳೇಬರವನ್ನು 4 ಲಕ್ಷ ಡಾಲರ್ ಮೊತ್ತಕ್ಕೆ ಹರಾಜು ಹಾಕಲು ಆರ್ಆರ್ ಏಜೆನ್ಸಿ ಸಿದ್ಧತೆ ನಡೆಸಿದ್ದು, ಇದನ್ನು ತಡೆಯಲು ನಾಸಾ ವಕೀಲರ ಮೂಲಕ ನೋಟಿಸ್ ಕಳುಹಿಸಿದೆ. ಈ ಮಾದರಿಗಳು ನಾಸಾಗೆ ಸೇರಿದ್ದು, ಯಾವುದೇ ವ್ಯಕ್ತಿ, ವಿವಿ ಅಥವಾ ಸಂಸ್ಥೆಗೆ ಅದನ್ನು ಮಾರಲು ಅನುಮತಿಯಿಲ್ಲ.
ಕೂಡಲೇ ಹರಾಜು ಸ್ಥಗಿತಗೊಳಿಸಿ, ಮಾದರಿಗಳನ್ನು ನಮಗೆ ವಾಪಸ್ ಕೊಡಿ ಎಂದು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ