ಸಾವಿನಂಚಿನಲ್ಲಿದ್ದ ಮನುಷ್ಯನಿಗೆ ರೋಬೋ ರೂಪ!


Team Udayavani, Oct 16, 2019, 5:40 AM IST

robo

ಲಂಡನ್‌: ರೋಬೋಗಳು ಮನುಷ್ಯ  ರಂತೆ ವರ್ತಿಸುವ ಹಾಗೂ ಕೆಲಸ ಮಾಡುವ ಪ್ರಯತ್ನ ಮಾಡುತ್ತಿ ರುವು ದನ್ನು ನಾವು ನೋಡಿದ್ದೇವೆ. ಆದರೆ, ಮನುಷ್ಯರೇ ರೋಬೋ ಆದರೆ! ಇಂಥ ದ್ದೊಂದು ಕಲ್ಪನೆ ಹೊಸ ದೇನಲ್ಲ.

ಇದನ್ನು ಸೈಬೋರ್ಗ್‌ ಎಂದು ಕರೆಯಲಾಗಿದ್ದು, ತಾನೊಬ್ಬ ಸಂಪೂರ್ಣ ಸೈಬೋರ್ಗ್‌ ಆಗುವ ಕೊನೆಯ ಹಂತದಲ್ಲಿದ್ದೇನೆ ಎಂದು ಇಂಗ್ಲೆಂಡ್‌ನ‌ 61 ವರ್ಷದ ವಿಜ್ಞಾನಿ ಪೀಟರ್‌ ಸ್ಕಾರ್ಟ್‌ ಮಾರ್ಗನ್‌ ಹೇಳಿ ಕೊಂಡಿದ್ದಾರೆ.

ಇವರು 2 ವರ್ಷಗಳಿಂದ ಮೋಟಾರ್‌ ನ್ಯೂರಾನ್‌ ರೋಗದಿಂದ ಬಳಲುತ್ತಿ ದ್ದಾರೆ. ಈ ರೋಗ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು ಅವರು ಹೆಚ್ಚು ಕಾಲ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ತನ್ನನ್ನು ಸಂಪೂರ್ಣವಾಗಿ ರೋಬೋ ಆಗಿ ರೂಪಾಂತರಗೊಳಿಸುವ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಾರೆ. ತನ್ನ ಇಡೀ ದೇಹವೇ ಯಾಂತ್ರಿಕವಾಗಿ ಕೆಲಸ ಮಾಡುವಂತೆ ಅವರು ರೂಪಾಂತರಗೊಂಡಿದ್ದಾರೆ. ಎಲೆಕ್ಟ್ರಿಕ್‌ ವೀಲ್‌ಚೇರ್‌ ಅನ್ನು ಅಭಿವೃದ್ಧಿಪಡಿಸಿ, ಇದರಲ್ಲಿ ಪೀಟರ್‌ ಕುಳಿತುಕೊಳ್ಳಬಹುದು, ಮಲಗಬಹುದು ಅಥವಾ ಎದ್ದು ನಿಲ್ಲಲೂ ಬಹುದು. ಇದಕ್ಕೆ ಚಕ್ರಗಳು ಇರುವುದರಿಂದ ಚಲಿಸಬಹುದು. ಅಷ್ಟೇ ಅಲ್ಲ, ಧ್ವನಿ ಪೆಟ್ಟಿಗೆಯನ್ನು ತೆಗೆದು, ತನ್ನ ಧ್ವನಿಯನ್ನು ಕಂಪ್ಯೂಟರಿಗೆ ಅಳವಡಿಸಿದ್ದಾರೆ. ನೈಸರ್ಗಿಕ ಧ್ವನಿಯನ್ನು ಬಳಸಿದರೆ ಎಂಜಲು ಶ್ವಾಸಕೋಶಕ್ಕೆ ಹೋಗಿ ಸಿಕ್ಕಿ ಹಾಕಿಕೊಂಡು ತೊಂದರೆಯಾಗಬಾರದು ಎಂಬ ಕಾರಣಕ್ಕೆ ಧ್ವನಿಪೆಟ್ಟಿಗೆಯನ್ನೇ ತೆಗೆದು ಹಾಕಿದ್ದಾರೆ.

ಜಠರಕ್ಕೇ ನೇರ ನಳಿಕೆ: ಹಾಗಾದರೆ ಆಹಾರ ಸೇವನೆ ಹೇಗೆ ಎಂದು ನೀವು ಪ್ರಶಿ°ಸಬಹುದು. ಅದಕ್ಕೂ ಅವರು ಪರಿಹಾರ ಕಂಡುಕೊಂಡಿದ್ದಾರೆ. ಬಾಯಿಗೆ ಆಹಾರ ಹಾಕುವ ಪ್ರಸಂಗವೇ ಇಲ್ಲ. ನೇರ ಜಠರಕ್ಕೆ ನಳಿಕೆ ಜೋಡಿಸಲಾಗಿದೆ. ಮೂತ್ರ ಹಾಗೂ ಮಲ ವಿಸರ್ಜನೆಗೆ ಪ್ರತ್ಯೇಕ ಪೈಪ್‌ ಅಳವಡಿಸಲಾಗಿದ್ದು, ಅದರಿಂದ ವಿಸರ್ಜನೆಯಾಗುತ್ತದೆ.

ಕಣ್ಣಿನಲ್ಲೇ ಎಲ್ಲ: ಮುಖವನ್ನು ಅವರು ಸರ್ಜರಿ ಮಾಡಿಸಿಕೊಂಡು, ಯುವಕನಾಗಿದ್ದಾಗಿನ ಮುಖವನ್ನು ಹೋಲುವಂತೆ ಮಾಡಿಕೊಂಡಿದ್ದಾರೆ. ಆರ್ಟಿಫಿಶಿ ಯಲ್‌ ಇಂಟಲಿಜೆನ್ಸ್‌ ಸಹಾಯದಿಂದ ಇದು ಸುಲಭವಾಗಿದೆ. ಕಂಪ್ಯೂಟರುಗಳನ್ನು ನಿಯಂತ್ರಿಸಲು ಇವರ ಕಣ್ಣಿನ ಚಲನೆಯೇ ಸಾಕು. ಇದಕ್ಕಾಗಿ ಲೇಸರ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ.

ನಾನು ಸಾಯುತ್ತಿಲ್ಲ, ರೂಪಾಂತರಗೊಳ್ಳುತ್ತಿದ್ದೇನೆ
ತನ್ನ ಒಟ್ಟು ರೂಪಾಂತರದ ಬಗ್ಗೆ ಪೀಟರ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನಾನು ಸಾಯುತ್ತಿಲ್ಲ. ಬದಲಿಗೆ ರೂಪಾಂತರಗೊಳ್ಳುತ್ತಿದ್ದೇನೆ. ಇದೆಲ್ಲವೂ ವಿಜ್ಞಾನದಿಂದ ಸಾಧ್ಯವಾಗಿದೆ’ ಎಂದು ಅವರು ಹೇಳಿದ್ದಾರೆ. ನನ್ನ ಇಡೀ ದೇಹ ಮತ್ತು ಮಿದುಳು ಬದಲಾಗಲಿದೆ. ಈ ಜಗತ್ತಿನೊಂದಿಗೆ ನನ್ನ ಪ್ರತಿ ಸಂವಹನವೂ ಯಾಂತ್ರಿಕವಾಗಲಿದೆ. ಇನ್ನು ನಾನು ಪೀಟರ್‌ 2.0 ಆಗಲಿದ್ದೇನೆ ಎಂದು ಅವರು ಟ್ವೀಟ್‌ ಮಾಡಿ ದ್ದಾರೆ. ವಿಶ್ವದ ಮೊದಲ ಸಂಪೂರ್ಣ ಸೈಬೋರ್ಗ್‌ ಆಗುವ ಕೊನೆಯ ಚರಣದಲ್ಲಿ ನಾನಿದ್ದೇನೆ ಎಂದು ಅ. 10ರಂದು ಕೊನೆಯದಾಗಿ ವೀಡಿಯೋವೊಂದರಲ್ಲಿ ಅವರು ಹೇಳಿದ್ದರು. ಜಠರಕ್ಕೆ ನಳಿಕೆ ಅಳವಡಿಸುವ ಪ್ರಕ್ರಿಯೆ ಅತ್ಯಂತ ಅಪಾಯ ಕಾರಿಯಾಗಿತ್ತು. ಅದರಲ್ಲೂ ಈ ರೋಗ ಹೊಂದಿರುವವರು ಈ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಕಷ್ಟ. ಆದರೆ ಈ ಸ್ಥಿತಿಯಿಂದಲೇ ನಾನು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಲು ಸಾಧ್ಯವಾಯಿತು. ನಾನು ಕೇವಲ ಬದುಕುಳಿಯುವುದರಲ್ಲಿ ನಂಬಿಕೆ ಇಟ್ಟವನಲ್ಲ ಎಂದೂ ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.