ಸಾವಿನಂಚಿನಲ್ಲಿದ್ದ ಮನುಷ್ಯನಿಗೆ ರೋಬೋ ರೂಪ!


Team Udayavani, Oct 16, 2019, 5:40 AM IST

robo

ಲಂಡನ್‌: ರೋಬೋಗಳು ಮನುಷ್ಯ  ರಂತೆ ವರ್ತಿಸುವ ಹಾಗೂ ಕೆಲಸ ಮಾಡುವ ಪ್ರಯತ್ನ ಮಾಡುತ್ತಿ ರುವು ದನ್ನು ನಾವು ನೋಡಿದ್ದೇವೆ. ಆದರೆ, ಮನುಷ್ಯರೇ ರೋಬೋ ಆದರೆ! ಇಂಥ ದ್ದೊಂದು ಕಲ್ಪನೆ ಹೊಸ ದೇನಲ್ಲ.

ಇದನ್ನು ಸೈಬೋರ್ಗ್‌ ಎಂದು ಕರೆಯಲಾಗಿದ್ದು, ತಾನೊಬ್ಬ ಸಂಪೂರ್ಣ ಸೈಬೋರ್ಗ್‌ ಆಗುವ ಕೊನೆಯ ಹಂತದಲ್ಲಿದ್ದೇನೆ ಎಂದು ಇಂಗ್ಲೆಂಡ್‌ನ‌ 61 ವರ್ಷದ ವಿಜ್ಞಾನಿ ಪೀಟರ್‌ ಸ್ಕಾರ್ಟ್‌ ಮಾರ್ಗನ್‌ ಹೇಳಿ ಕೊಂಡಿದ್ದಾರೆ.

ಇವರು 2 ವರ್ಷಗಳಿಂದ ಮೋಟಾರ್‌ ನ್ಯೂರಾನ್‌ ರೋಗದಿಂದ ಬಳಲುತ್ತಿ ದ್ದಾರೆ. ಈ ರೋಗ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು ಅವರು ಹೆಚ್ಚು ಕಾಲ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ತನ್ನನ್ನು ಸಂಪೂರ್ಣವಾಗಿ ರೋಬೋ ಆಗಿ ರೂಪಾಂತರಗೊಳಿಸುವ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಾರೆ. ತನ್ನ ಇಡೀ ದೇಹವೇ ಯಾಂತ್ರಿಕವಾಗಿ ಕೆಲಸ ಮಾಡುವಂತೆ ಅವರು ರೂಪಾಂತರಗೊಂಡಿದ್ದಾರೆ. ಎಲೆಕ್ಟ್ರಿಕ್‌ ವೀಲ್‌ಚೇರ್‌ ಅನ್ನು ಅಭಿವೃದ್ಧಿಪಡಿಸಿ, ಇದರಲ್ಲಿ ಪೀಟರ್‌ ಕುಳಿತುಕೊಳ್ಳಬಹುದು, ಮಲಗಬಹುದು ಅಥವಾ ಎದ್ದು ನಿಲ್ಲಲೂ ಬಹುದು. ಇದಕ್ಕೆ ಚಕ್ರಗಳು ಇರುವುದರಿಂದ ಚಲಿಸಬಹುದು. ಅಷ್ಟೇ ಅಲ್ಲ, ಧ್ವನಿ ಪೆಟ್ಟಿಗೆಯನ್ನು ತೆಗೆದು, ತನ್ನ ಧ್ವನಿಯನ್ನು ಕಂಪ್ಯೂಟರಿಗೆ ಅಳವಡಿಸಿದ್ದಾರೆ. ನೈಸರ್ಗಿಕ ಧ್ವನಿಯನ್ನು ಬಳಸಿದರೆ ಎಂಜಲು ಶ್ವಾಸಕೋಶಕ್ಕೆ ಹೋಗಿ ಸಿಕ್ಕಿ ಹಾಕಿಕೊಂಡು ತೊಂದರೆಯಾಗಬಾರದು ಎಂಬ ಕಾರಣಕ್ಕೆ ಧ್ವನಿಪೆಟ್ಟಿಗೆಯನ್ನೇ ತೆಗೆದು ಹಾಕಿದ್ದಾರೆ.

ಜಠರಕ್ಕೇ ನೇರ ನಳಿಕೆ: ಹಾಗಾದರೆ ಆಹಾರ ಸೇವನೆ ಹೇಗೆ ಎಂದು ನೀವು ಪ್ರಶಿ°ಸಬಹುದು. ಅದಕ್ಕೂ ಅವರು ಪರಿಹಾರ ಕಂಡುಕೊಂಡಿದ್ದಾರೆ. ಬಾಯಿಗೆ ಆಹಾರ ಹಾಕುವ ಪ್ರಸಂಗವೇ ಇಲ್ಲ. ನೇರ ಜಠರಕ್ಕೆ ನಳಿಕೆ ಜೋಡಿಸಲಾಗಿದೆ. ಮೂತ್ರ ಹಾಗೂ ಮಲ ವಿಸರ್ಜನೆಗೆ ಪ್ರತ್ಯೇಕ ಪೈಪ್‌ ಅಳವಡಿಸಲಾಗಿದ್ದು, ಅದರಿಂದ ವಿಸರ್ಜನೆಯಾಗುತ್ತದೆ.

ಕಣ್ಣಿನಲ್ಲೇ ಎಲ್ಲ: ಮುಖವನ್ನು ಅವರು ಸರ್ಜರಿ ಮಾಡಿಸಿಕೊಂಡು, ಯುವಕನಾಗಿದ್ದಾಗಿನ ಮುಖವನ್ನು ಹೋಲುವಂತೆ ಮಾಡಿಕೊಂಡಿದ್ದಾರೆ. ಆರ್ಟಿಫಿಶಿ ಯಲ್‌ ಇಂಟಲಿಜೆನ್ಸ್‌ ಸಹಾಯದಿಂದ ಇದು ಸುಲಭವಾಗಿದೆ. ಕಂಪ್ಯೂಟರುಗಳನ್ನು ನಿಯಂತ್ರಿಸಲು ಇವರ ಕಣ್ಣಿನ ಚಲನೆಯೇ ಸಾಕು. ಇದಕ್ಕಾಗಿ ಲೇಸರ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ.

ನಾನು ಸಾಯುತ್ತಿಲ್ಲ, ರೂಪಾಂತರಗೊಳ್ಳುತ್ತಿದ್ದೇನೆ
ತನ್ನ ಒಟ್ಟು ರೂಪಾಂತರದ ಬಗ್ಗೆ ಪೀಟರ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನಾನು ಸಾಯುತ್ತಿಲ್ಲ. ಬದಲಿಗೆ ರೂಪಾಂತರಗೊಳ್ಳುತ್ತಿದ್ದೇನೆ. ಇದೆಲ್ಲವೂ ವಿಜ್ಞಾನದಿಂದ ಸಾಧ್ಯವಾಗಿದೆ’ ಎಂದು ಅವರು ಹೇಳಿದ್ದಾರೆ. ನನ್ನ ಇಡೀ ದೇಹ ಮತ್ತು ಮಿದುಳು ಬದಲಾಗಲಿದೆ. ಈ ಜಗತ್ತಿನೊಂದಿಗೆ ನನ್ನ ಪ್ರತಿ ಸಂವಹನವೂ ಯಾಂತ್ರಿಕವಾಗಲಿದೆ. ಇನ್ನು ನಾನು ಪೀಟರ್‌ 2.0 ಆಗಲಿದ್ದೇನೆ ಎಂದು ಅವರು ಟ್ವೀಟ್‌ ಮಾಡಿ ದ್ದಾರೆ. ವಿಶ್ವದ ಮೊದಲ ಸಂಪೂರ್ಣ ಸೈಬೋರ್ಗ್‌ ಆಗುವ ಕೊನೆಯ ಚರಣದಲ್ಲಿ ನಾನಿದ್ದೇನೆ ಎಂದು ಅ. 10ರಂದು ಕೊನೆಯದಾಗಿ ವೀಡಿಯೋವೊಂದರಲ್ಲಿ ಅವರು ಹೇಳಿದ್ದರು. ಜಠರಕ್ಕೆ ನಳಿಕೆ ಅಳವಡಿಸುವ ಪ್ರಕ್ರಿಯೆ ಅತ್ಯಂತ ಅಪಾಯ ಕಾರಿಯಾಗಿತ್ತು. ಅದರಲ್ಲೂ ಈ ರೋಗ ಹೊಂದಿರುವವರು ಈ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಕಷ್ಟ. ಆದರೆ ಈ ಸ್ಥಿತಿಯಿಂದಲೇ ನಾನು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಲು ಸಾಧ್ಯವಾಯಿತು. ನಾನು ಕೇವಲ ಬದುಕುಳಿಯುವುದರಲ್ಲಿ ನಂಬಿಕೆ ಇಟ್ಟವನಲ್ಲ ಎಂದೂ ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqwqeewqe

Airstrike; ಅಫ್ಘಾನಿಸ್ಥಾನದಲ್ಲಿ ಪಾಕ್‌ನಿಂದ ವೈಮಾನಿಕ ದಾಳಿ: 8 ಸಾವು

Russiaದ ಅಧ್ಯಕ್ಷ ಚುನಾವಣೆಯಲ್ಲಿ ಪುಟಿನ್‌ ಜಯಭೇರಿ: 3ನೇ ವಿಶ್ವ ಯುದ್ಧದ ಎಚ್ಚರಿಕೆ!

Russiaದ ಅಧ್ಯಕ್ಷ ಚುನಾವಣೆಯಲ್ಲಿ ಪುಟಿನ್‌ ಜಯಭೇರಿ: 3ನೇ ವಿಶ್ವ ಯುದ್ಧದ ಎಚ್ಚರಿಕೆ!

police USA

America ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಹತ್ಯೆ: 3ನೇ ಕೇಸು

Indian Couple: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ…

Indian Couple: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ…

putin (2)

Russia; ಸತತ 6ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುತಿನ್‌ ಆಯ್ಕೆ ಸಾಧ್ಯತೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.