ರಷ್ಯಾಕ್ಕೆ ಗೇಟ್‌ಪಾಸ್‌ ಶಿಕ್ಷೆ 


Team Udayavani, Apr 8, 2022, 7:40 AM IST

ರಷ್ಯಾಕ್ಕೆ ಗೇಟ್‌ಪಾಸ್‌ ಶಿಕ್ಷೆ 

ಹೊಸದಿಲ್ಲಿ: ರಷ್ಯಾಕ್ಕೆ ಜಾಗತಿಕವಾಗಿ ಭಾರೀ ಮುಖಭಂಗವಾಗಿದೆ. ವಿಶ್ವಸಂಸ್ಥೆಯ ಟಾಪ್‌-5 ಸ್ಥಾನದಲ್ಲಿದ್ದಂಥ, ವಿಟೋ ಪವರ್‌ ಇದ್ದಂಥ ಬಲಿಷ್ಠ ರಾಷ್ಟ್ರ ರಷ್ಯಾವನ್ನು “ಮಾನವ ಹಕ್ಕು ಮಂಡಳಿ’ಯಿಂದಲೇ ಹೊರದಬ್ಬಿದ ಕ್ಷಿಪ್ರ ಬೆಳವಣಿಗೆ ಗುರುವಾರ ನಡೆದಿದೆ.

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯನ್‌ ಸೇನೆ ಬುಚಾ, ಕೀವ್‌ ಸೇರಿದಂತೆ ಹಲವು ತಾಣಗಳಲ್ಲಿ ನರ ಮೇಧ ಕೈಗೊಂಡ ಸಂಗತಿಯೇ ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿತ್ತು. ವಿಶ್ವಸಂಸ್ಥೆಯ ಅಂಗ ಘಟಕವಾದ “ಮಾನವ ಹಕ್ಕು ಮಂಡಳಿ’ಯಲ್ಲಿದ್ದೂ ರಷ್ಯಾ ತನ್ನ ಹೊಣೆ ಮರೆತ ಕಾರಣ, ಈ ಶಿಕ್ಷೆ ನೀಡಲಾಗಿದೆ.

ರಷ್ಯಾ ಪರ ಅಲ್ಪಮತ: ಮಾನವ ಹಕ್ಕು ಮಂಡಳಿಯಿಂದ ರಷ್ಯಾವನ್ನು ಕೈಬಿಡುವ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಮತಕ್ಕೆ ಹಾಕಲಾಗಿತ್ತು. 197 ಸದಸ್ಯ ರಾಷ್ಟ್ರಗಳ ಪೈಕಿ, 93 ರಾಷ್ಟ್ರಗಳು ಮಂಡಳಿಯ ನಿಲುವನ್ನು ಬೆಂಬಲಿಸಿ, ಮತ ಚಲಾಯಿಸಿದವು. ರಷ್ಯಾದ ಪರವಾಗಿ ಮತ್ತು ಮಂಡಳಿ ನಿಲುವಿನ ವಿರುದ್ಧವಾಗಿ ಕೇವಲ 24 ಮತಗಳಷ್ಟೇ ಬಿದ್ದಿವೆ.

ದೂರವುಳಿದ 58 ದೇಶಗಳು: ಮಾನವ ಹಕ್ಕು ಮಂಡಳಿಯಲ್ಲಿ ಉಳಿದುಕೊಳ್ಳಲು ರಷ್ಯಾಕ್ಕೆ 47 ಮತಗಳ ಆವಶ್ಯಕತೆ ಇತ್ತು. ಆದರೆ ಭಾರತವೂ ಸೇರಿದಂತೆ ಒಟ್ಟು 58 ರಾಷ್ಟ್ರ ಗಳು ಮತದಾನ ಪ್ರಕ್ರಿಯೆಯಿಂದಲೇ ದೂರವುಳಿದು, ತಟಸ್ಥ ಧೋರಣೆ ಅನುಸರಿಸಿದವು.

ಭಾರತ ತಟಸ್ಥವಾಗಿದ್ದೇಕೆ?: ರಷ್ಯಾ- ಉಕ್ರೇನ್‌ ಯುದ್ಧದ ವಿಚಾರದಲ್ಲಿ ತಾನು ಶಾಂತಿ ಪರ ಎಂಬುದನ್ನು ಭಾರತ ಈಗಾಗಲೇ ಘೋಷಿಸಿದೆ. ಗುರುವಾರದ ಮತಪ್ರಕ್ರಿಯೆಯಲ್ಲೂ ಇದೇ ನಿಲುವನ್ನೇ ಎತ್ತಿಹಿಡಿದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಟಿ.ಎಸ್‌. ತಿರುಮೂರ್ತಿ, “ಈ ಯುದ್ಧದ ಆರಂಭದಿಂದಲೂ ಭಾರತ ಶಾಂತಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಪರವಾಗಿ ನಿಂತಿದೆ. ರಕ್ತದ ಪ್ರವಾಹದಿಂದ, ಮುಗ್ಧ ನಾಗರಿಕರ ಸಾವಿನಿಂದ ಯಾವುದೇ ಪರಿಹಾರವಿಲ್ಲ ಎಂಬುದನ್ನು ನಂಬಿದವರು ನಾವು. ಭಾರತ ನಿಲ್ಲುವುದಾದರೆ, ಅದು ಶಾಂತಿಯ ಪರ ಮಾತ್ರ. ತಕ್ಷಣದಿಂದಲೇ ಹಿಂಸೆ ನಿಲ್ಲುವುದಕ್ಕೆ ನಮ್ಮ ಬೆಂಬಲವಿದೆ’ ಎಂದಿದ್ದಾರೆ.

ಪುತಿನ್‌ ಮಕ್ಕಳಿಗೆ ಅಮೆರಿಕ ನಿರ್ಬಂಧ :

ರಷ್ಯಾದ ಮೇಲೆ ಹಲವು ರೀತಿಯ ದಿಗ್ಬಂಧನಗಳನ್ನು ಹೇರಿರುವ ಅಮೆರಿಕ ಸರಕಾರ ಈಗ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರ ಇಬ್ಬರು ಹೆಣ್ಣು ಮಕ್ಕಳಾ ಗಿರುವ ಕ್ಯಾಥರೀನಾ ಟಿಕೋರ್ನೋವಾ  ಮತ್ತು ಮರಿಯಾ ಪುತಿನ್‌ ಮೇಲೆ ನಿರ್ಬಂಧ ಹೇರಿದೆ. ಅಮೆರಿಕ ಸರಕಾರದ ಪ್ರಕಾರ ಪುತಿನ್‌ ಅವರ ಬಹುಕೋಟಿ ಡಾಲರ್‌ ಮೊತ್ತದ ಆಸ್ತಿ ಕುಟುಂಬದ ಸದಸ್ಯರ ಹೆಸರಿನಲ್ಲಿದೆ. ಹೀಗಾಗಿ ಅವರ ಕುಟುಂಬದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ ವಾಗಿದೆ ಎಂದು ಬೈಡೆನ್‌ ಸರಕಾರದ ವಾದ. ಪುತಿನ್‌ ಮಕ್ಕಳ ಹೆಸರಿನಲ್ಲಿ ಅಮೆರಿಕದಲ್ಲಿಯೂ ಭಾರೀ ಪ್ರಮಾ ಣದಲ್ಲಿ ಆಸ್ತಿ ಇರುವ ಸಾಧ್ಯತೆ ಇದೆ. ಗಮನಾರ್ಹ ವೆಂದರೆ ಲೈಡ್ಮಿಲಾ ಪುತಿನ್‌ರ ಜತೆಗಿನ ದಾಂಪತ್ಯದಿಂದ ಜನಿಸಿದ ಈ ಹೆಣ್ಣು ಮಕ್ಕಳನ್ನು ವ್ಲಾದಿಮಿರ್‌ ಪುತಿನ್‌ ಇನ್ನೂ ತನ್ನ ಮಕ್ಕಳೆಂದು ಅಂಗೀಕರಿಸಿಲ್ಲ. ಪುತಿನ್‌ ಮಕ್ಕಳ ಜತೆಗೆ ಅಲ್ಲಿನ ವಿದೇ ಶಾಂಗ ಸಚಿವ ಸರ್ಗೆ ಲಾವ್ರೋ ಪತ್ನಿ ಮತ್ತು ಪುತ್ರಿ ಕೂಡ ಅಮೆರಿಕದಲ್ಲಿ ಹೇರಳವಾಗಿ ಆಸ್ತಿ ಹೊಂದಿದ್ದಾರೆ.

ಭಾರತ ನೆರವಿಗೆ ಬರಲಿ: ಝೆಲೆನ್‌ಸ್ಕಿ :

ರಷ್ಯಾ ಜತೆಗೆ ಸಂಧಾನ ನಡೆಸುವ ವಿಚಾರದಲ್ಲಿ ಭಾರತವನ್ನು ಸಂಪೂರ್ಣ ನಂಬಿದ್ದೇವೆ. ಭಾರತದಂಥ ದೇಶಗಳು ಉಕ್ರೇನ್‌ಗೆ ಭದ್ರತಾ ಖಾತ್ರಿದಾರ ನಾಗುವ ಭರವಸೆ ನೀಡಿದರೆ, ಖಂಡಿತವಾಗಿ ರಷ್ಯಾ ದೊಂದಿಗೆ ಸಂಧಾನದ ಮಾತುಕತೆ ನಡೆಸುತ್ತೇವೆ ಎಂದು ಯುದ್ಧ ಪೀಡಿತ ರಾಷ್ಟ್ರದ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ. “ರಿಪಬ್ಲಿಕ್‌’ ಆಂಗ್ಲ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು,  ರಷ್ಯಾ ಅಧ್ಯಕ್ಷ ಪುತಿನ್‌ ಜತೆಗಿನ ಮಾತುಕತೆಯಲ್ಲಿ ಇದೊಂದು ಸಮಾನಾಂತರ ಪ್ರಕ್ರಿಯೆ.

ಆದರೆ ನಮಗೆ ಭದ್ರತಾ ಖಾತ್ರಿ ನೀಡಲು ಹಲವು ದೇಶಗಳು ವಿಳಂಬ ಮಾಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬುಚಾ ಒಂದೇ ಅಲ್ಲ:  “ಬುಚಾದಲ್ಲಿ ರಷ್ಯಾ ನರಮೇಧ ನಡೆಸಿ, ಈಗ ನಕಲಿ ಎನ್ನುತ್ತಿದೆ. ಆದರೆ, ಸಾಕ್ಷ್ಯಗಳು ಸುಳ್ಳು ಹೇಳುವುದಿಲ್ಲ. ಬುಚಾದಂತೆ ರಷ್ಯಾ ಹಲವೆಡೆ ನರಮೇಧ ನಡೆಸಿದೆ. ಯುದ್ಧ ಕಣದಿಂದ ಕಾಲ್ಕಿàಳುವ ಪ್ರಶ್ನೆಯೇ ಇಲ್ಲ. ರಷ್ಯಾದ ತುಕಡಿಯನ್ನು ಹಿಮ್ಮೆಟ್ಟಿಸಿ, ಒಡೆಸ್ಸಾ ಮೇಲೆ ನಿಯಂತ್ರಣ ಸಾಧಿಸಿದ್ದೇವೆ. ಮರಿಯುಪೋಲ್‌ನ ಸ್ಥಿತಿ ಚಿಂತಾಜನಕವಾಗಿದೆ. ಅದನ್ನೂ ಪಡೆದೇ ತೀರುತ್ತೇವೆ’ ಎಂದಿದ್ದಾರೆ.

ಮಾಸ್ಕೋ ವಿಮಾನ ರದ್ದು  :

ಹೊಸದಿಲ್ಲಿಯಿಂದ ಮಾಸ್ಕೋಗೆ ತೆರಳಬೇಕಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದುಗೊಳಿಸಲಾಗಿದೆ. ವಿಮೆ ನವೀಕರಣ ಸಾಧ್ಯವಾಗದೆ ಇದ್ದುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ವಿಮಾ ಕಂಪೆನಿಗಳು ವಿಮಾನಗಳಿಗೆ ವಿಮೆ ನೀಡುತ್ತವೆ. ಆದರೆ ಆ ರಾಷ್ಟ್ರಗಳು ರಷ್ಯಾ ಜತೆಗಿನ ವಹಿವಾಟು ಕಡಿದುಕೊಂಡಿರುವುದರಿಂದ ನವೀಕರಣ ಸಾಧ್ಯವಾಗಿಲ್ಲ. ದಿಲ್ಲಿಯಿಂದ ಮಾಸ್ಕೋ ನಡುವೆ ವಾರಕ್ಕೆ 2 ಬಾರಿ ವಿಮಾನ ಸಂಚಾರವಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.