ಉಕ್ರೇನ್ನಲ್ಲಿ ಸೋತರೇ ಪುತಿನ್?
Team Udayavani, Sep 16, 2022, 6:20 AM IST
ಉಕ್ರೇನ್ ವಿರುದ್ಧ ರಷ್ಯಾ ದಾಳಿ ಮಾಡಿ ಗುರುವಾರಕ್ಕೆ 204 ದಿನಗಳು ಪೂರ್ತಿಯಾಗಿವೆ (ಫೆ. 24ರಿಂದ ಆರಂಭವಾಗಿದೆ ದಾಳಿ). ಮೊನ್ನೆ ಮೊನ್ನೆಯ ವರೆಗೆ ರಷ್ಯಾ ಪಡೆಗಳು ಉಕ್ರೇನ್ ಸೇನೆಯ ವಿರುದ್ಧ ಜಯ ಸಾಧಿಸಿದ ಬಗ್ಗೆ ವರ್ತಮಾನಗಳು ಬರುತ್ತಿದ್ದವು. ಆದರೆ ಕೆಲವು ದಿನಗಳಿಂದ ಈಚೆಗೆ ಬರುತ್ತಿರುವ ವರದಿಗಳ ಪ್ರಕಾರ ಉಕ್ರೇನ್ ಸೇನೆ ಕೆಲವು ಭಾಗಗಳಲ್ಲಿ ರಷ್ಯಾ ವಿರುದ್ಧ ಜಯ ಸಾಧಿಸಿದೆ. ಹಾಗಿದ್ದರೆ ರಷ್ಯಾಕ್ಕೆ ಹಿನ್ನಡೆ ಉಂಟಾಯಿತೇ?
ಖಾರ್ಕಿವ್ನಿಂದ ಸೇನೆ ವಾಪಸ್ :
ಒಂದು ಹಂತದಲ್ಲಿ ಉಕ್ರೇನ್ನ ಪ್ರಧಾನ ನಗರ ಖಾರ್ಕಿವನ್ನು ರಷ್ಯಾದ ಸೇನೆಗಳು ವಶಪಡಿಸಿಕೊಂಡಿದ್ದವು. ಆದರೆ ಎರಡು ದಿನಗಳ ಹಿಂದೆ ನಡೆದಿದ್ದ ವಿದ್ಯಮಾನದಲ್ಲಿ ರಷ್ಯಾದ ಸೇನೆ, ವೊಲೊಡಿಮಿರ್ ಝೆಲೆನ್ಸ್ಕಿ ನೇತೃತ್ವದ ಸೇನಾಪಡೆಯ ಹೊಡೆತಕ್ಕೆ ಹಿನ್ನಡೆ ಅನುಭವಿಸಿದೆ. ಅದೇ ಪ್ರದೇಶದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಪುತಿನ್ ಸೇನೆಯ ವಿರುದ್ಧ ಮೇಲುಗೈ ಸಾಧಿಸಲು ಸಿದ್ಧತೆ ನಡೆಸಿದೆ.
ಬೆಳವಣಿಗೆ ಇಲ್ಲವೆಂದ ರಷ್ಯಾ :
ರಷ್ಯಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರಕಾರಿ ವಾಹಿನಿಯ ಪ್ರಕಾರ ಖಾರ್ಕಿವ್ನಿಂದ ಸೇನೆಗಳನ್ನು ವಾಪಸ್ ಪಡೆದಿರುವ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ರಷ್ಯಾದ ರಕ್ಷಣ ಸಚಿವಾಲಯ ಸೇನಾ ಪಡೆಗಳನ್ನು ವಾಪಸ್ ಪಡೆದೇ ಇಲ್ಲ ಎಂದು ಪ್ರತಿಪಾದಿಸುತ್ತಿದೆ.
ಉಕ್ರೇನ್ ಮೇಲುಗೈಗೆ ಕಾರಣ? :
ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಉಕ್ರೇನ್ಗೆ ಧಾರಾಳವಾಗಿ ಸೇನಾ ನೆರವು ನೀಡಿವೆ. ಹೀಗಾಗಿ ರಷ್ಯಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇರುವ ಸೇನೆಯ ವಿರುದ್ಧ ಬಿರುಸಿನ ಪ್ರತಿರೋಧ ನೀಡಲು ಸಾಧ್ಯವಾಗಿದೆ.
ತಾಜಾ ಪರಿಸ್ಥಿತಿ? :
ಉಕ್ರೇನ್ನ ಕೆಲವೆಡೆ ಹಾರಾಡುತ್ತಿದ್ದ ರಷ್ಯಾದ ಧ್ವಜ ತೆರವುಗೊಳಿಸಲಾಗಿದೆ. ಬ್ರಿಟನ್ ನೀಡಿದ ಮಾಹಿತಿ ಪ್ರಕಾರ ಉಕ್ರೇನ್ ಲಂಡನ್ನ ಎರಡರಷ್ಟು ಪ್ರದೇಶವನ್ನು ಪುತಿನ್ ಸೇನೆಯಿಂದ ವಶಪಡಿಸಿಕೊಂಡಿವೆ. ಜತೆಗೆ 24 ಗಂಟೆಗಳ ಅವಧಿಯಲ್ಲಿ 20 ನಿರಾಶ್ರಿತರ ಪ್ರದೇಶವನ್ನು ವಶಪಡಿಸಿಕೊಂಡಿದೆ.
5,767: ರಷ್ಯಾ ಜತೆಗಿನ ಯುದ್ಧದಲ್ಲಿ ಅಸುನೀಗಿರುವ ಉಕ್ರೇನ್ ನಾಗರಿಕರು
12 ದಶಲಕ್ಷ: ನಿರಾಶ್ರಿತಗೊಂಡ ಒಟ್ಟು ಜನರು
5 ದಶಲಕ್ಷ: ಉಕ್ರೇನ್ನ ನೆರೆಯ ದೇಶಗಳಿಗೆ ಪರಾರಿಯಾದವರು
7 ದಶಲಕ್ಷ: ಉಕ್ರೇನ್ನಲ್ಲಿಯೇ ಎಲ್ಲವನ್ನು ಕಳೆದುಕೊಂಡವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ