ಸಯೀದ್ ಬಿಡುಗಡೆ :ಪಾಕ್ ವಿರುದ್ಧ ಭಾರೀ ಆಕ್ರೋಶ
Team Udayavani, Nov 24, 2017, 6:00 AM IST
ವಾಷಿಂಗ್ಟನ್: ಮುಂಬಯಿ ದಾಳಿಯ ಮಾಸ್ಟರ್ವೆುçಂಡ್, ಜಮಾತ್-ಉದ್-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ಗೆ ಗೃಹಬಂಧನದಿಂದ ಮುಕ್ತಿ ನೀಡುವಂತೆ ಪಾಕಿಸ್ಥಾನದ ಕೋರ್ಟ್ ಆದೇಶಿಸಿರುವುದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪಾಕ್ ಸರಕಾರದ ನಿರ್ಧಾರದ ಕುರಿತು ಭಾರತ ಮಾತ್ರವಲ್ಲದೇ, ಅಮೆರಿಕದ ತಜ್ಞರೂ ಕಿಡಿಕಾರಿದ್ದಾರೆ.
ಸಯೀದ್ ಬಂಧಮುಕ್ತ ಸುದ್ದಿಗೆ ಗುರುವಾರ ಖಾರವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ, “ಬಹಿಷ್ಕಾರಕ್ಕೊಳಗಾ ಗಿರುವ ಭಯೋತ್ಪಾದಕನನ್ನು ಮುಖ್ಯ ವಾಹಿನಿಗೆ ತರುವಂಥ ಪಾಕಿಸ್ಥಾನದ ಯತ್ನವು, ಉಗ್ರರಿಗೆ ಬೆಂಬಲ ನೀಡುವು ದನ್ನು ಮುಂದುವರಿಸಿರುವುದನ್ನು ಮತ್ತೂಮ್ಮೆ ಸಾಬೀತುಪಡಿಸಿದೆ. ವಿಧ್ವಂಸಕ ಕೃತ್ಯ ಎಸಗಿದವರನ್ನು ಶಿಕ್ಷೆಗೊಳಪಡಿಸು ವಲ್ಲಿ ಪಾಕಿಸ್ಥಾನದ ಗಂಭೀರತೆಯ ಕೊರತೆ ಯನ್ನು ಇದು ತೋರಿಸುತ್ತಿದೆ’ ಎಂದು ಹೇಳಿದೆ. ಅಲ್ಲದೆ, ಭಯೋತ್ಪಾದಕರಿಗೆ ರಕ್ಷಣೆ ನೀಡುವ ಪಾಕ್ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುವುದು ಕೂಡ ಸ್ಪಷ್ಟವಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಮಿತ್ರರಾಷ್ಟ್ರ ಸ್ಥಾನಮಾನ ರದ್ದುಗೊಳಿಸಿ: ಇದೇ ವೇಳೆ, ಸಯೀದ್ ಬಿಡುಗಡೆ ಕುರಿತು ಅಮೆರಿಕದಿಂದಲೂ ಆಕ್ರೋಶದ ಧ್ವನಿ ವ್ಯಕ್ತವಾಗಿದೆ. ಉಗ್ರರಿಗೆ ನೆರಳಾಗುವ ಪಾಕಿಸ್ಥಾನದ ಮುಖವಾಡ ಕಳಚಿಬಿದ್ದ ಬೆನ್ನಲ್ಲೇ, ಮಾತನಾಡಿರುವ ಅಮೆರಿಕದ ಪ್ರಮುಖ ಉಗ್ರ ನಿಗ್ರಹ ತಜ್ಞರು, “ಪಾಕಿಸ್ಥಾನಕ್ಕೆ ನೀಡಿರುವ ನ್ಯಾಟೋಯೇತರ ಮಿತ್ರರಾಷ್ಟ್ರ ಸ್ಥಾನಮಾನವನ್ನು ಕೂಡಲೇ ರದ್ದುಮಾಡಬೇಕು’ ಎಂದು ಸರಕಾರವನ್ನು ಆಗ್ರಹಿಸಿದ್ದಾರೆ. 26/11ರ ದಾಳಿ ನಡೆದು 9 ವರ್ಷಗಳಾಗಿದ್ದು, ಇನ್ನೂ ಅದರ ರೂವಾರಿಗೆ ಶಿಕ್ಷೆಯಾಗಿಲ್ಲ. ಒಂದು ಪದದಲ್ಲಿ ಹೇಳುವುದಾದರೆ, ಉಗ್ರ ಸಯೀದ್ನ ಬಿಡುಗಡೆಯು “ಘಾತಕಕೃತ್ಯ’ವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆತ ದೊಡ್ಡ ದೊಡ್ಡ ರ್ಯಾಲಿಗಳ ನೇತೃತ್ವ ವಹಿಸಿ ಮಾತನಾಡುವ ಸುದ್ದಿಯನ್ನೂ ನಾವು ಓದಬಹುದೋ ಏನೋ? ಹೀಗಾಗಿ ಪಾಕಿಸ್ಥಾನಕ್ಕೆ ನೀಡಿರುವ ನ್ಯಾಟೋಯೇತರ ಮಿತ್ರ ಸ್ಥಾನಮಾನವನ್ನು ರದ್ದು ಮಾಡಲು ಇದು ಸೂಕ್ತ ಸಮಯ ಎಂದು ದಕ್ಷಿಣ ಏಷ್ಯಾದ ಭದ್ರತೆ, ಉಗ್ರ ನಿಗ್ರಹದ ತಜ್ಞ ಬ್ರೂಸ್ ರೀಡೆಲ್ ಹೇಳಿದ್ದಾರೆ. ಇತರೆ ತಜ್ಞರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ಥಾನವು ದುರ್ಬಲ ವಾದ ಮಂಡಿಸಿ, ಸೂಕ್ತ ಸಾಕ್ಷ್ಯಗಳನ್ನು ನೀಡದೇ ಇದ್ದ ಕಾರಣ ಬುಧವಾರವಷ್ಟೇ ಹಫೀಜ್ನ ಬಿಡುಗಡೆಗೆ ಕೋರ್ಟ್ ಆದೇಶಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ