ಲೆಬನಾನ್ ಆಸ್ಪತ್ರೆಯಲ್ಲಿ ಆಮ್ಲಜನಕವೂ ಇಲ್ಲ, ಅರಿವಳಿಕೆಯೂ ಇಲ್ಲ !
Team Udayavani, Jun 20, 2020, 10:25 AM IST
ಬೀರತ್: ಕೋವಿಡ್ನಿಂದಾಗಿ ಹಲವು ದೇಶಗಳ ವೈದ್ಯಕೀಯ ಪರಿಸ್ಥಿತಿ ಬಿಗಡಾಯಿಸಿದೆ. ಲೆಬನಾನ್ನಲ್ಲಂತೂ ಮತ್ತಷ್ಟು ಬಿಗಡಾಯಿಸಿದ್ದು, ಆಮ್ಲಜನಕವೂ ಇಲ್ಲ, ರೋಗಿಗಳಿಗೆ ಬೇಕಾದ ಅರಿವಳಿಕೆಯೂ ಇಲ್ಲ ಎನ್ನುವಂತಾಗಿದೆ.
ಇಡೀ ಲೆಬನಾನ್ಗೆ ಎರಡು ಕಂಪೆನಿಗಳು ಆಮ್ಲಜನಕವನ್ನು ಪೂರೈಸುತ್ತವೆ. ಅವುಗಳು ಆಮ್ಲಜನಕ ನೀಡಿ, ಅದರ ಬದಲಿಗೆ ಡಾಲರ್ ಲೆಕ್ಕದಲ್ಲಿ ನಗದು ಪಡೆಯುತ್ತವೆ. ಆದರೆ ಅವುಗಳ ಪೂರೈಕೆಯಲ್ಲಿ ಏರುಪೇರಾಗಿದೆ. ಹಾಗೆಯೇ ಲೆಬನಾನ್ ಆಸ್ಪತ್ರೆಗೆ ಅನೆಸ್ತೆಟಿಕ್ ಗ್ಯಾಸ್ ಪೂರೈಸುವ ಕಂಪೆನಿಗೆ ನೈಟ್ರಾಸ್ ಆಕ್ಸೆ„ಡ್ ಸರಿಯಾಗಿ ಪೂರೈಕೆಯಾಗದಿರುವುದರಿಂದ ಅರಿವಳಿಕೆ ಉತ್ಪಾದನೆಗೂ ಸಮಸ್ಯೆಯಾಗಿದೆ.
ಅಲ್ಲಿನ ಕೇಂದ್ರೀಯ ಬ್ಯಾಂಕ್ ಹಣ ನೀಡಿಕೆಗೆ ಒಪ್ಪದ ಕಾರಣ ವೈದ್ಯಕೀಯ ಸಲಕರಣೆಗಳು, ಔಷಧ ಇತ್ಯಾದಿಗಳನ್ನು ಆಮದು ಮಾಡಿಕೊಳ್ಳುವ ಕಂಪೆನಿಗಳಿಗೆ ಸಮಸ್ಯೆಯಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ಲೆಬನಾನ್ನ ಎಲ್ಲ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ದಾಖಲು ಮಾಡುವುದನ್ನೇ ಕೈಬಿಟ್ಟಿವೆ. ಅಲ್ಲಿ 136 ಖಾಸಗಿ ಆಸ್ಪತ್ರೆಗಳಿದ್ದು, ಇದರಿಂದಾಗಿ ರೋಗಿಗಳು ಸಮಸ್ಯೆಗೊಳಗಾಗಿದ್ದಾರೆ. ಇದರೊಂದಿಗೆ ಖಾಸಗಿ ಆಸ್ಪತ್ರೆಗೆ ಸರಕಾರದ ವತಿಯಿಂದ ತಂದು ದಾಖಲಿಸಿದ ರೋಗಿಗಳ ವೆಚ್ಚಗಳನ್ನೂ ಸರಿಯಾಗಿ ನೀಡಲಾಗುತ್ತಿಲ್ಲ.
ಖಾಸಗಿ ಆಸ್ಪತ್ರೆಗಳಿಗೆ ಸರಕಾರ ಸುಮಾರು 9,880 ಕೋಟಿ ರೂ.ಗಳಷ್ಟು ಹಣವನ್ನು ಬಾಕಿ ಇರಿಸಿಕೊಂಡಿವೆ. 2011ರಿಂದ ಬಿಲ್ಗಳು ಬಾಕಿ ಇವೆ. ಸರಕಾರ ಆಮದು ಮಾಡಿದ ಔಷಧದ ಬಿಲ್ಲನ್ನೂ ಪಾವತಿಸಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಮೂಲಗಳು ಹೇಳಿವೆ. ಆದ್ದರಿಂದ ಯುದ್ಧದಿಂದ ತತ್ತರಿಸಿದ ಲೆಬನಾನ್ನಲ್ಲಿ ಇದೀಗ ಕೋವಿಡ್ ತಾಂಡವವಾಡುವ ಭೀತಿಯೂ ಕಾಣಿಸಿಕೊಂಡಿದೆ. ಇದೇ ವೇಳೆ ಸರಕಾರ-ಖಾಸಗಿ ಆಸ್ಪತ್ರೆಗಳ ನಡುವಿನ ಪ್ರಕರಣ ಕಾರಣ ರೋಗಿಗಳು ಉತ್ತಮ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ