ಪನಾಮಾ ಪೇಪರ್ ತನಿಖಾ ತಂಡದೆದುರು ಹಾಜರಾದ ಷರೀಫ್ ಪುತ್ರ
Team Udayavani, Jul 4, 2017, 3:11 PM IST
ಇಸ್ಲಾಮಾಬಾದ್ : ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಹಿರಿಯ ಪುತ್ರ ಹುಸೇನ್ ನವಾಜ್ ಅವರು ಇಂದು ಮಂಗಳವಾರ ಪನಾಮಾ ಗೇಟ್ ಭ್ರಷ್ಟಾಚಾರದ ಹಗರಣಗಳಿಗೆ ಸಂಬಂಧಿಸಿ ಆರನೇ ಬಾರಿ ಜಂಟಿ ತನಿಖಾ ತಂಡದ ಮುಂದೆ ಹಾಜರಾಗಿದ್ದಾರೆ.
ಹುಸೇನ್ ನವಾಜ್ ಅವರು ಇಲ್ಲಿನ ಫೆಡರಲ್ ಜ್ಯುಡೀಶಿಯಲ್ ಅಕಾಡೆಮಿಗೆ ಆಗಮಿಸಿ ಸುಪ್ರೀಂ ಕೋರ್ಟ್ನಿಂದ ನೇಮಕಗೊಂಡಿರುವ ಆರು ಸದಸ್ಯರ ಜೆಐಟಿ ಎದುರು ತನಿಖೆಗೆ ಆರನೇ ಬಾರಿ ಹಾಜರಾದರು.
ಕಳೆದ ಎಪ್ರಿಲ್ 20ರಂದು ಸುಪ್ರೀಂ ಕೋರ್ಟ್ ಪನಾಮಾ ಪೇಪರ್ ಕೇಸ್ನಲ್ಲಿ ತೀರ್ಪು ನೀಡುವಾಗ ಜಂಟಿ ತನಿಖಾ ತಂಡವೊಂದನ್ನು ರೂಪಿಸಿ ಪ್ರಧಾನಿ, ಅವರ ಪುತ್ರರು ಮತ್ತು ಅಗತ್ಯವಿರುವ ಇತರ ಯಾವುದೇ ವ್ಯಕ್ತಿಗೆ ಸಮನ್ಸ್ ನೀಡಿ ತನಿಖೆಗೆ ಒಳಪಡಿಸುವ ಅಧಿಕಾರವನ್ನು ನೀಡಿತ್ತು.
ಪನಾಮಾ ಪೇಪರ್ ಲೀಕ್ ಮೂಲಕ ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಕುಟುಂಬ ಸದಸ್ಯರು ವಿದೇಶಗಳಲ್ಲಿ ಹಲವಾರು ಖೊಟ್ಟಿ ಕಂಪೆನಿಗಳನ್ನು ಸ್ಥಾಪಿಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪಾಸ್ತಿ ಮಾಡಿಟ್ಟಿರುವುದು ಬೆಳಕಿಗೆ ಬಂದಿತ್ತು. ಈ ಹಗರಣದಿಂದಾಗಿ ನವಾಜ್ ಷರೀಫ್ ಅವರ ರಾಜಕೀಯ ಭವಿಷ್ಯಕ್ಕೇ ಗ್ರಹಣ ಉಂಟಾಗುವುದೆಂದು ತಿಳಿಯಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್