ಗರಿಷ್ಠ ಸದ್ಭಾವನೆ ತೋರಿದ್ದೇವೆ; ಸಹನೆ ತಳಮಟ್ಟ ತಲುಪಿದೆ : ಚೀನ ಖಡಕ್
Team Udayavani, Aug 4, 2017, 12:14 PM IST
ಬೀಜಿಂಗ್ : “ಸಿಕ್ಕಿಂ ನಲ್ಲಿನ ಡೋಕ್ಲಾಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಾವು ಗರಿಷ್ಠ ಸದ್ಭಾವನೆಯನ್ನು ತೋರಿದ್ದೇವೆ; ಹಾಗಿದ್ದರೂ ನಮ್ಮ ಸಹನೆ ತಳ ಮಟ್ಟವನ್ನು ತಲುಪಿದೆ’ ಎಂಬ ಖಡಕ್ ಸಂದೇಶವನ್ನು ಚೀನ ಭಾರತಕ್ಕೆ ರವಾನಿಸಿದೆ.
ಭೂತಾನ್ಗೆ ಸೇರಿದ ವಿವಾದಿತ ಡೋಕ್ಲಾಂ ನಲ್ಲಿ ಭಾರತ – ಚೀನ ಸೇನೆಯ ಮುಖಾಮುಖೀ ಕಳೆದ ಜೂನ್ 16ರಿಂದಲೂ ಸಾಗಿದ್ದು ಇದು ಉಭಯ ದೇಶಗಳ ನಡುವೆ ಸಮರ ಸ್ಫೋಟದ ಭೀತಿಯನ್ನು ಹುಟ್ಟಿಸಿದೆ.
ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ನಿನ್ನೆಯಷ್ಟೇ ಸಂಸತ್ತಿನಲ್ಲಿ “ಭಾರತ – ಚೀನ ನಡುವಿನ ಗಡಿ ವಿವಾದಕ್ಕೆ ಯುದ್ಧವೇ ಪರಿಹಾರವಲ್ಲ; ಪರಸ್ಪರ ಮಾತುಕತೆಯೇ ಪರಿಹಾರ; ಒಂದೊಮ್ಮೆ ಯುದ್ಧ ಸಂಭವಿಸಿದರೂ ಆ ಬಳಿಕದಲ್ಲಿ ಶಾಂತಿ – ಸೌಹಾರ್ದ ಸ್ಥಾಪನೆಗೆ ಮಾತುಕತೆಯೇ ಮುಖ್ಯವಾಗುತ್ತದೆ. ಆದುದರಿಂದ ಉಭಯ ದೇಶಗಳು ಡೋಕ್ಲಾಂ ನಿಂದ ತಮ್ಮ ಸೇನೆಯನ್ನು ಹಿಂದೆಗೆದುಕೊಂಡು ಬಿಕ್ಕಟ್ಟು ಬಗೆ ಹರಿಸುವ ಮಾತುಕತೆಗೆ ತೊಡಗಬೇಕು ಮತ್ತು ಆ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಬೇಕು’ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಚೀನದ ರಕ್ಷಣಾ ಸಚಿವಾಲಯ, “ಚೀನ ಡೋಕ್ಲಾಂ ವಿವಾದದ ವಿಷಯದಲ್ಲಿ ಗರಿಷ್ಠ ಸದ್ಭಾವನೆಯನ್ನು ತೋರಿದೆ; ನಮ್ಮ ಸಹನೆ ತಳ ಮಟ್ಟವನ್ನು ತಲುಪಿದೆ; ಭಾರತ ಇದನ್ನು ತಿಳಿಯಬೇಕು’ ಎಂದು ಹೇಳಿದೆ.
ಭೂತಾನ್ಗೆ ಸೇರಿದ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನ ರಸ್ತೆಯನ್ನು ನಿರ್ಮಿಸಿದರೆ ಅದರಿಂದ ಭಾರತಕ್ಕೆ ತನ್ನ ಈಶಾನ್ಯ ರಾಜ್ಯಗಳ ಸಂಪರ್ಕ ಮಾರ್ಗ ಕಡಿದು ಹೋಗುವುದು ಎಂಬ ಭೀತಿ ಇದೆ. ಆ ಕಾರಣಕ್ಕಾಗಿ ಭಾರತೀಯ ಸೇನೆ ಚೀನ ಡೋಕ್ಲಾಂನಲ್ಲಿ ರಸ್ತೆ ನಿರ್ಮಿಸುವುದನ್ನು ತಡೆದಿತ್ತು. ಪರಿಣಾಮವಾಗಿ ಕಳೆದ ಜೂನ್ 16ರಿಂದ ಡೋಕ್ಲಾಂ ತ್ರಿರಾಷ್ಟ್ರ ಚೌಕದಲ್ಲಿ ಉಭಯ ದೇಶಗಳ ಸೇನಾ ಮುಖಾಮುಖೀ ಗಡಿ ಉದ್ವಿಗ್ನತೆಗೆ ಕಾರಣವಾಗುವ ರೀತಿಯಲ್ಲಿ ಸಮರ ಭೀತಿಯನ್ನು ಸೃಷ್ಟಿಸುತ್ತಾ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ