ಖಗೋಳ ಯಾತ್ರೆ ಇತಿಹಾಸದಲ್ಲಿ ಸುವರ್ಣ ಅಧ್ಯಾಯ
Team Udayavani, Aug 4, 2020, 6:22 AM IST
ಜಗತ್ತಿನ ಮೊತ್ತಮೊದಲ ಮರುಬಳಕೆ ಮಾಡಬಹುದಾದ, ಸ್ಪೇಸ್ ಎಕ್ಸ್ ಕಂಪೆನಿಯ ‘ಫಾಲ್ಕನ್-9’ ರಾಕೆಟ್ನಲ್ಲಿ ಕುಳಿತು ಮೇ 31ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದ ಅಮೆರಿಕದ ಇಬ್ಬರು ವಿಜ್ಞಾನಿಗಳು ಸೋಮವಾರ, ಭೂಮಿಗೆ ಯಶಸ್ವಿಯಾಗಿ ಹಿಂದಿರುಗಿದ್ದಾರೆ. ಬಾಹ್ಯಾಕಾಶ ಪ್ರಯಾಣದಲ್ಲಿ ಇದೊಂದು ದಾಖಲೆಯಾಗಿದ್ದು, ಹೊಸ ಅಧ್ಯಾಯಕ್ಕೆ ಇದು ನಾಂದಿ ಹಾಡಿದೆ.
ಪ್ರಯಾಣಿಸಿದ್ದು ಯಾವಾಗ?
ಮೇ 31ರ ಮಧ್ಯ ರಾತ್ರಿ ಭಾರತೀಯ ಕಾಲಮಾನ ಸುಮಾರು 12 ಗಂಟೆ ಹೊತ್ತಿಗೆ, ಫ್ಲಾರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾಕ್ಕೆ ‘ಫಾಲ್ಕನ್ 9’ ರಾಕೆಟ್ ನಲ್ಲಿ ರಾಬರ್ಟ್ ಬೆಹ್ನ್ ಕೆನ್ ಹಾಗೂ ಡಗ್ಲಾಸ್ ಹರ್ಲೆ ಎಂಬಿಬ್ಬರು ಖಗೋಳ ಯಾತ್ರಿಕರು ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ. ಆ ರಾಕೆಟ್ ಬಾಹ್ಯಾಕಾಶಕ್ಕೆ ಆ ವಿಜ್ಞಾನಿಗಳನ್ನು ತಲುಪಿಸಿ ಮತ್ತೆ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಹಿಂದಿರುಗಿತ್ತು! ಇಬ್ಬರು ವಿಜ್ಞಾನಿಗಳು ಇದ್ದ ಸ್ಪೇಸ್ ಕ್ಯಾಪ್ಸೂಲ್, ರಾಕೆಟ್ನಿಂದ ಬೇರ್ಪಟ್ಟ ನಂತರ ವಿಜ್ಞಾನಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿತ್ತು.
ಹಿಂದಿರುಗಿದ್ದು ಯಾವಾಗ?
ಭಾರತೀಯ ಕಾಲಮಾನದ ಪ್ರಕಾರ, ಆ. 2ರ ಮಧ್ಯರಾತ್ರಿ 12:18ರ ಸುಮಾರಿಗೆ ಖಗೋಳ ಯಾತ್ರಿಗಳಿದ್ದ ಸ್ಪೇಸ್ ಕ್ಯಾಪ್ಸೂಲ್ ಮೆಕ್ಸಿಕೋ ಕೊಲ್ಲಿಯಲ್ಲಿ ಬಂದಿಳಿದಿದೆ. ಅವರು ಬಂದಿಳಿಯುವ ಜಾಗವನ್ನು ಮೊದಲೇ ಗ್ರಹಿಸಿದ್ದ ಸ್ಪೇಸ್ ಎಕ್ಸ್ ತಂತ್ರಜ್ಞರು, ಈಜುಗಾರರೊಂದಿಗೆ ನೌಕೆಯಲ್ಲಿ ಸಾಗಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.
ಹೆಗ್ಗಳಿಕೆಯೇನು?
ಮರುಬಳಕೆ ಮಾಡಬಹುದಾದ ರಾಕೆಟ್ನಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸಿ, ಆನಂತರ ಅಲ್ಲಿಂದ ಅವರನ್ನು ಭೂಮಿಗೆ ಸುರಕ್ಷಿತವಾಗಿ ವಾಪಸ್ ಕರೆಯಿಸಿಕೊಂಡ ವಿಶ್ವದ ಮೊದಲ ಖಾಸಗಿ ಕಂಪೆನಿ ಎಂಬ ಹೆಗ್ಗಳಿಕೆಗೆ ಸ್ಪೇಸ್ ಎಕ್ಸ್ ಹಾಗೂ ಅದರ ಮಾಲಕ ಎಲಾನ್ ಮಸ್ಕ್ ಪಾತ್ರರಾಗಿದ್ದಾರೆ. ಖಗೋಳ ಯಾತ್ರೆಯ ಇತಿಹಾಸದಲ್ಲಿ ಇದೊಂದು ಅಪೂರ್ವ ಸಾಧನೆ.
– 679 ಕೋಟಿ ರೂ. ಈ ಬೃಹತ್ ಯೋಜನೆಗೆ ಸುರಿದ ಹಣ
– 468 ಕೋಟಿ ರೂ. ಫಾಲ್ಕನ್-9 ಉಡಾವಣೆಗೆ ತಗುಲಿದ ವೆಚ್ಚ
– 28,163 ಕಿ.ಮೀ. ಭೂಮಿಗೆ ಹಿಂದಿರುಗುವಾಗ ಸ್ಪೇಸ್ ಕ್ಯಾಪ್ಸೂಲ್ನ ವೇಗ (ಪ್ರತಿ ಗಂಟೆಗೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
Airstrike; ಅಫ್ಘಾನಿಸ್ಥಾನದಲ್ಲಿ ಪಾಕ್ನಿಂದ ವೈಮಾನಿಕ ದಾಳಿ: 8 ಸಾವು
Russiaದ ಅಧ್ಯಕ್ಷ ಚುನಾವಣೆಯಲ್ಲಿ ಪುಟಿನ್ ಜಯಭೇರಿ: 3ನೇ ವಿಶ್ವ ಯುದ್ಧದ ಎಚ್ಚರಿಕೆ!
America ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಹತ್ಯೆ: 3ನೇ ಕೇಸು
Indian Couple: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ…
MUST WATCH
ಹೊಸ ಸೇರ್ಪಡೆ
Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್ನಲ್ಲಿ ಶೂಟಿಂಗ್!
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Vande Bharat: 1.5 ವರ್ಷದಲ್ಲಿ ವಂದೇ ಭಾರತ್ಗೆ 50 ಬಾರಿ ಕಲ್ಲೆಸೆತ
Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು
Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್ಗೆ ದೂರು