ಸ್ಪೇಸ್ ಟೂರ್ ಶುರು; ಏನಿದು ಸ್ಪೇಸ್ ಟೂರಿಸಂ?
ನಾಲ್ವರು ಪ್ರಯಾಣಿಕರಿಗೆ ಸ್ಪೇಸ್ ಎಕ್ಸ್ 5 ತಿಂಗಳು ಕಠಿನ ತರಬೇತಿ ನೀಡಿತ್ತು.
Team Udayavani, Sep 17, 2021, 1:30 PM IST
ಸ್ಪೇಸ್ ಎಕ್ಸ್ ದಿಗ್ಗಜ ಎಲನ್ ಮಸ್ಕ್ “ಬಾಹ್ಯಾಕಾಶ ಪ್ರವಾಸೋದ್ಯಮ’ಕ್ಕೆ ಚಾಲನೆ ನೀಡುವ ಮೂಲಕ ಮತ್ತೂಂದು ಮೈಲುಗಲ್ಲು ನೆಟ್ಟಿದ್ದಾರೆ. ನಾಗರಿಕ ಬಾಹ್ಯಾಕಾಶ ನೌಕೆ ಮೂಲಕ ವೃತ್ತಿಪರರಲ್ಲದ ನಾಲ್ವರನ್ನು ಗಗನಯಾತ್ರೆಗೆ ಕಳುಹಿಸಿದ್ದಾರೆ…
ಏನಿದು ಸ್ಪೇಸ್ ಟೂರಿಸಂ? :
ನಾಗರಿಕರನ್ನು ಭೂ ಕಕ್ಷೆಯ ಸುತ್ತಾಟಕ್ಕೆ ಕಳುಹಿಸುವ ಯೋಜನೆ. ಸ್ಪೇಸ್ ಎಕ್ಸ್ ತನ್ನ ಪುನರ್ಬಳಕೆಯ “ಫಾಲ್ಕನ್ 9′ ರಾಕೆಟ್ನ “ಇನ್ಸ್ಪಿರೇಷನ್ 4 ಮಿಷನ್’ ನೌಕೆಯಲ್ಲಿ ನಾಲ್ವರನ್ನು ಕೂರಿಸಿ, ಬುಧವಾರ ರಾತ್ರಿ ಈ ಯಾತ್ರೆಗೆ ಚಾಲನೆ ನೀಡಿದೆ.
ಎಲ್ಲಿಯವರೆಗೆ ಪ್ರಯಾಣ?: ಸ್ಪೇಸ್ ಎಕ್ಸ್ ಹಾರಿಬಿಟ್ಟ ಇನ್ಸ್ಪಿರೇಶನ್ 4 ನೌಕೆಯು ಭೂಮೇಲ್ಮೆ„ನಿಂದ 675 ಕಿ.ಮೀ. ದೂರದಲ್ಲಿ ಹಾರಾಟ ನಡೆಸಲಿದೆ. ಅಂತಾ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತಲೂ ಎತ್ತರದಲ್ಲಿ ಹಾರಾಡಲಿದೆ.
ನಾಲ್ವರು ನಭಕ್ಕೆ!:
ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ವೃತ್ತಿಪರರಲ್ಲದ ನಾಲ್ವರು ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದಾರೆ. ಸ್ಪೇಸ್ ಎಕ್ಸ್ನ ಉದ್ಯಮದ ಜತೆ ಕೈಜೋಡಿಸಿರುವ ಬಿಲಿಯನೇರ್ ಜಾರೆಡ್ ಐಸಾಕ್ಮನ್ ಜತೆಗೆ ಹ್ಯಾಲೆ ಆರ್ಸೆನಿಯಾಕ್ಸ್, ಸಿಯಾನ್ ಪ್ರೊಕ್ಟರ್, ಕ್ರಿಸ್ ಸೆಂಬ್ರೊಸ್ಕಿ ನೌಕೆಯಲ್ಲಿದ್ದಾರೆ.
ಕ್ಯಾನ್ಸರ್ ಗೆದ್ದಾಕೆ ಮೊದಲ ಪ್ಯಾಸೆಂಜರ್ :
ಕ್ಯಾನ್ಸರ್ನಿಂದ ಬದುಕುಳಿದ, 29 ವರ್ಷದ ಹ್ಯಾಲೆ ಆರ್ಸೆನಿಯಾಕ್ಸ್ಗೆ ಸ್ಪೇಸ್ ಎಕ್ಸ್ ತನ್ನ “ಮೊದಲ ನಾಗರಿಕ ಪ್ರಯಾಣಿಕ’ ಗೌರವ ನೀಡಿದೆ. ಮೂಳೆ ಕ್ಯಾನ್ಸರ್ ಚಿಕಿತ್ಸೆ ಕಾರಣ ಈಕೆಯ ಎಡಗಾಲಿಗೆ ರಾಡ್ ಅಳವಡಿಸಲಾಗಿದೆ.
5 ತಿಂಗಳ ತಾಲೀಮು : ನಾಲ್ವರು ಪ್ರಯಾಣಿಕರಿಗೆ ಸ್ಪೇಸ್ ಎಕ್ಸ್ 5 ತಿಂಗಳು ಕಠಿನ ತರಬೇತಿ ನೀಡಿತ್ತು. ಬಾಹ್ಯಾಕಾಶದ ಫಿಟ್ನೆಸ್, ಕೇಂದ್ರಾಪಗಾಮಿ, ಮೈಕ್ರೋ ಗ್ರಾವಿಟಿ ಬ್ಯಾಲೆನ್ಸ್, ಎಮರ್ಜೆನ್ಸಿ ಡ್ರಿಲ್, ನಿರಂತರ ವೈದ್ಯಕೀಯ ಪರೀಕ್ಷೆ ಕೈಗೊಂಡಿತ್ತು.
90 ನಿಮಿಷದಲ್ಲಿ ಭೂಮಿಗೆ ಸುತ್ತು! : ನೌಕೆಯ ವೇಗವು ಶಬ್ದದ ವೇಗಕ್ಕಿಂತ 22 ಪಟ್ಟು ಅಧಿಕ, ಗಂಟೆಗೆ 27,600 ಕಿ.ಮೀ. ಕ್ರಮಿಸಲಿದೆ. ಭೂಮಿಗೆ ಒಂದು ಸುತ್ತು ಬರಲು ಈ ನೌಕೆಗೆ ಕೇವಲ 90 ನಿಮಿಷ ಸಾಕು!
ಟಿಕೆಟ್ ದರವೆಷ್ಟು? : 200 ಮಿಲಿಯನ್ ಡಾಲರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್