ಸ್ಫೋಟಕ್ಕೆ ಬೆದರಿದ ಶ್ರೀಲಂಕಾದಲ್ಲಿ ಈಗ ಕತ್ತಿ, ಚಾಕುಗಳೂ ವಶಕ್ಕೆ!
Team Udayavani, May 6, 2019, 6:00 AM IST
ಕೊಲೊಂಬೋ: ಈಸ್ಟರ್ ಹಬ್ಬದ ದಿನದ ನಡೆದ ಭೀಕರ ಬಾಂಬ್ ದಾಳಿಗೆ ಬೆಚ್ಚಿ ಬಿದ್ದಿರುವ ಶ್ರೀಲಂಕಾ ದೇಶಾದ್ಯಂತ ವಿಪರೀತ ಭದ್ರತೆಗೆ ಮುಂದಾಗಿದೆ. ಆದರೆ ವಿಚಿತ್ರ ಆದೇಶ ವೊಂದನ್ನು ಹೊರಡಿಸುವ ಶ್ರೀಲಂಕಾ ಅಧಿಕಾರಿಗಳು, ಜನಸಾಮಾನ್ಯರ ಬಳಿ ಇರುವ ಖಡ್ಗ, ದೊಡ್ಡ ಚಾಕುಗಳನ್ನೂ ವಶಪಡಿಸಿ ಕೊಳ್ಳಲು ನಿರ್ಧರಿಸಿದ್ದಾರೆ. ಈ ಸಂಬಂಧ ಆದೇಶ ಹೊರಡಿಸಿರುವ ಶ್ರೀಲಂಕಾ ಪೊಲೀಸ್ ಇಲಾಖೆ, ಅವುಗಳನ್ನು ಸಮೀಪದ ಪೊಲೀಸ್ ಸ್ಟೇಷನ್ಗೆ ಒಪ್ಪಿಸುವಂತೆ ಸೂಚಿಸಿದೆ.
ಅಷ್ಟೇ ಅಲ್ಲ, ರವಿವಾರ ಶಾಲೆಯ ಬಳಿ ಯಾವುದೇ ವಾಹನವನ್ನು ನಿಲ್ಲಿಸದಂತೆಯೂ ನಾಗರಿಕರಿಗೆ ಸೂಚಿಸಲಾಗಿದ್ದು, ಈ ಭಾಗದಲ್ಲಿ ರವಿವಾರಶೋಧ ಕಾರ್ಯ ನಡೆಯಲಿದೆ ಎಂದಿದೆ. ದಾಳಿ ನಡೆದ ಅನಂತರದಲ್ಲಿ ದೇಶದ ಹಲವೆಡೆ ಶೋಧ ಕಾರ್ಯ ನಡೆಸಿದಾಗ ಭಾರಿ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಟಿವಿ ಮೂಲಕ ಪ್ರಾರ್ಥನೆ: ಈಸ್ಟರ್ಸ್ಫೋಟದಿಂ ದಾಗಿ ಇನ್ನೂ ಕ್ರೈಸ್ತರು ಚರ್ಚ್ಗೆ ಹೋಗಲು ಹೆದರುತ್ತಿದ್ದು, ರವಿವಾರಮನೆಯಲ್ಲೇ ಕುಳಿತು ಪ್ರಾರ್ಥನೆ ನಡೆಸಿದರು. ಕೊಲಂಬೋದ ಪಾದ್ರಿ ಕಾರ್ಡಿನಲ್ ಮಾಲ್ಕಂ ರಂಜಿತ್ ಪ್ರಾರ್ಥನೆ ಯನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ