ಆಸ್ಪತ್ರೆಯೊಳಗೆ ಗುಂಡಿನ ದಾಳಿ; ಪಾಕ್ ಟೆರರಿಸ್ಟ್ ಅಬು ಎಸ್ಕೇಪ್
Team Udayavani, Feb 6, 2018, 1:21 PM IST
ಜಮ್ಮು-ಕಾಶ್ಮೀರ:ಪೊಲೀಸರ ವಶದಲ್ಲಿದ್ದ ಉಗ್ರ ಪರಾರಿಯಾಗಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಂಗಳವಾರ ಬೆಳಗ್ಗೆ ಕೆಲವು ಉಗ್ರರು ಜಮ್ಮು ಕಾಶ್ಮೀರದ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನ್ ಮೂಲದ ಲಷ್ಕರ್ ಎ ತೊಯ್ಬಾದ ಉಗ್ರ ಅಬು ಹನ್ ಝುಲ್ಲಾ ಹಾಗೂ ಇತರ ಐದು ಮಂದಿ ಬಂಧಿತರನ್ನು ಇಂದು ಬೆಳಗ್ಗೆ ಶ್ರೀನಗರದಲ್ಲಿರುವ ಶ್ರೀ ಮಹಾರಾಜ್ ಹರಿ ಸಿಂಗ್ ಸರಕಾರಿ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ, ಒಬ್ಬ ಕೈದಿ ಪೊಲೀಸ್ ಕೈಯಲ್ಲಿದ್ದ ರೈಫಲ್ ಅನ್ನು ಕಸಿದುಕೊಂಡು ಗುಂಡಿನ ದಾಳಿ ನಡೆಸಿದ್ದ ಎಂದು ಶ್ರೀನಗರ್ ಎಸ್ ಎಸ್ ಪಿ ಇಮ್ತಿಯಾಜ್ ಇಸ್ಮಾಯಿಲ್ ಪಾರೈ ತಿಳಿಸಿದ್ದಾರೆ.
ಅಬು ಅಲಿಯಾಸ್ ನಾವೀದ್ ನನ್ನು ಉದಾಂಪುರ್ ಸಮೀಪ ಬಿಎಸ್ ಎಫ್ ಪಡೆ 2015ರಲ್ಲಿ ಬಂಧಿಸಿತ್ತು. ಈತನನ್ನು ಶ್ರೀನಗರ್ ಸೆಂಟ್ರಲ್ ಜೈಲ್ ನಲ್ಲಿ ಇರಿಸಲಾಗಿತ್ತು. ಪರಾರಿಯಾದ ಉಗ್ರರರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ