ವೈರಲ್ ವೀಡಿಯೋ | ಹಿಜಾಬ್ ಇಲ್ಲದ ಮಹಿಳೆ, ಕತ್ತರಿಸಿದ ಕಲ್ಲಂಗಡಿ ಹಣ್ಣಿನಂತೆ : ತಾಲಿಬಾನ್ ಉಗ್ರ
Team Udayavani, Sep 8, 2021, 2:14 PM IST
ಪ್ರಾತಿನಿಧಿಕ ಚಿತ್ರ
ಕಾಬೂಲ್ : ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡು ಕೆಲವೇ ಕೆಲವು ದಿನಗಳಲ್ಲಿ ತನ್ನ ಸರ್ಕಾರ ರಚನೆ ಮಾಡಿರುವ ತಾಲಿಬಾನ್ ಉಗ್ರ ಪಡೆ, ಈಗ ತನ್ನ ಶರಿಯಾ ನಿಯಮಾವಳಿಗಳನ್ನು ದೇಶದಲ್ಲಿ ಹೇರುವುದಕ್ಕೆ ಮುಂದಾಗುತ್ತಿದೆ.
ಇತ್ತೀಚೆಗೆ ಅಲ್ಲಿನ ಒಂದು ಸ್ಥಳಿಯ ಮಾಧ್ಯಮದ ಸಂದರ್ಶನವೋಂದರಲ್ಲಿ ಭಾಗಿಯಾಗಿ ಮಾತನಾಡಿದ ತಾಲಿಬಾನ್ ಉಗ್ರ ಪಡೆಯ ಪ್ರಮುಖ ಮುಖಂಡರು, ಹಿಜಾಬ್ ಇಲ್ಲದ ಮಹಿಳೆಯರನ್ನು ಕತ್ತರಿಸಿದ ಕಲ್ಲಂಗಡಿ ಇದ್ದ ಹಾಗೆ ಎಂದು ಹೇಳಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳ ದೈತ್ಯ ಟ್ವೀಟರ್ ನಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ತಾಲಿಬಾನ್ ಉಗ್ರರ ವಿವಾದಾತ್ಮಕ ಹೇಳಿಕೆಗೆ ಟ್ವೀಟರ್ ಬಳಕೆದಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಸಾರ್ವಜನಿಕ ಗಣೇಶೋತ್ಸವ ಆಚರಣೆ, ಮೆರವಣಿಗೆಗೆ ಅವಕಾಶ ಇಲ್ಲ: ದೆಹಲಿ ಸರ್ಕಾರ
ಸಂದರ್ಶನದಲ್ಲಿ ತಾಲಿಬಾನ್ ಉಗ್ರ ಪಡೆಯ ಮುಖಂಡನೊಬ್ಬ, ಹಿಜಾಬ್ ಇಲ್ಲದ ಮಹಿಳೆಯರು ಕತ್ತರಿಸಿದ ಕಲ್ಲಂಗಡಿ ಹಣ್ಣಿನಂತೆ. ನೀವು ಇಡಿಯ ಕಲ್ಲಂಗಡಿ ಹಣ್ಣನ್ನು ಖರೀದಿಸುವಿರೋ ಅಥವಾ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಖರೀದಿಸುವಿರೋ ಎಂದು ಪ್ರಶ್ನಿಸಿದ್ದು, ವೈರಲ್ ಆದ ವೀಡಿಯೋ ದಲ್ಲಿ ದಾಖಲಾಗಿದೆ.
A Taliban official in an interview in Kabul on the importance of Hijab: “Do you buy a sliced melon or an intact melon? . Of course the intact one. A woman without Hijab is like a sliced melon ?”pic.twitter.com/9lHpQnohyd
— Zia Shahreyar l ضیا شهریار (@ziashahreyar) September 6, 2021
ಇನ್ನು, ನಿನ್ನೆ (ಸಪ್ಟೆಂಬರ್ 7) ತಾಲಿಬಾನ್ ಉಗ್ರ ಪಡೆ ತನ್ನ ಸರ್ಕಾರವನ್ನು ರಚಿಸಿದ್ದು, ಶರಿಯಾ ಕಾನೂನನ್ನು ಅಫ್ಗಾನಿಸ್ತಾನದಲ್ಲಿ ಜಾರಿಗೆ ತಂದಿದೆ. ವಿಶ್ವ ಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿರುವ ತಾಲಿಬಾನ್ ನಾಯಕ ಮೊಹಮ್ಮದ್ ಹಸನ್ ಅಖುಂದ್ ಹೊಸ ಪ್ರಧಾನಿ ಯಾಗಿದ್ದಾನೆ. ಅಬ್ದುಲ್ ಘನಿ ಬರಾದರ್ ಉಪ ಪ್ರಧಾನಿಯಾದರೆ, ಜಾಗತಿಕ ಉಗ್ರ ಸಿರಾಜುದ್ದೀನ್ ಹಖಾನಿಯನ್ನು ಆಂತರಿಕ ಸಚಿವ(ಗೃಹ ಸಚಿವ) ಎಂದು ಘೋಷಿಸಲಾಗಿದೆ.
ದೋಹಾ ಟೀಂ ಮತ್ತು ಹಖಾನಿ ತಂಡದ ಸಮ್ಮಿಶ್ರಣದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಇದು ಮಧ್ಯಂತರ ಸರ್ಕಾರವೆಂದು ತಾಲಿಬಾನ್ ಹೇಳಿಕೊಂಡಿದೆ. ಮುಲ್ಲಾ ಒಮರ್ ನ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್ ರಕ್ಷಣೆ, ಹಿದಾಯಿ ತುಲ್ಲಾ ಬದ್ರಿ ಹಣಕಾಸು, ಆಮೀರ್ ಖಾನ್ ಮುತ್ತಾ ಖೀ ವಿದೇಶಾಂಗ, ಶೇರ್ ಅಬ್ಟಾಸ್ ಸ್ಟಾನಿಕ್ ಝೈ ಉಪ ವಿದೇಶಾಂಗ ಸಚಿವ, ಅಬ್ದುಲ್ ಹಕೀಮ್ ಕಾನೂನು ಸಚಿವ, ಕೈರುಲ್ಲಾಹ್ ಖೈರುಕ್ವಾ ಮಾಹಿತಿ ಸಚಿವ, ಜಬೀಯುಲ್ಲಾಹ್ ಮುಜಾಹಿದ್ ಉಪ ಮಾಹಿತಿ ಸಚಿವನಾಗಿದ್ದಾನೆ.
ಸದ್ಯ ಈ ಹೆಸರುಗಳನ್ನು ಪ್ರಕಟಿಸಲಾಗಿದ್ದು, ಉಳಿದ ಸಚಿವರ ಹೆಸರುಗಳನ್ನು ಮುಂದೆ ಪ್ರಕಟಿಸಲಾಗುತ್ತದೆ ಎಂದು ತಾಲಿಬಾನ್ ಉಗ್ರ ಪಡೆಯ ವಕ್ತಾರ ಜಬೀವುಲ್ಲಾಹ್ ಮುಜಾಹಿದ್ ಹೇಳಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಗಾಂಜಾ ನಶೆಯಲ್ಲಿ ಮಚ್ಚು, ಲಾಂಗು ಝಳಪಿಸಿ ಪೊಲೀಸರ ಅತಿಥಿಗಳಾದ ಯುವಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?