ಪಾಕಿಸ್ತಾನ ಸೇನಾಪಡೆಗಳಲ್ಲಿ ಬಿಗುವಿನ ಪರಿಸ್ಥಿತಿ?
ಪಾಕ್ ಸೇನಾಪಡೆಗಳ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅಸಹಜ ಸಭೆ ನಡೆಸುತ್ತಿರುವುದಕ್ಕೆ ಕಾರಣ?
Team Udayavani, Jun 10, 2022, 9:00 PM IST
Pak Army,ಖಮರ್ ಜಾವೇದ್ ಬಾಜ್ವಾ,Qamar Javed Bajwa,Pakistan,Army,
ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾಪಡೆಗಳ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಇಕ್ಕಟ್ಟಿಗೆ ಸಿಲುಕಿದ್ದಾರೆಯೇ? ಅವರು ಅಭದ್ರತೆಯನ್ನೆದುರಿಸುತ್ತಿದ್ದಾರೆಯೇ? ಹೀಗೊಂದು ಸಂದೇಹಗಳು ಪಾಕ್ ಸೇನಾಪಡೆಗಳೊಳಗೆಯೇ ಶುರುವಾಗಿದೆ. ಅವರು ಕೇವಲ 7 ವಾರಗಳ ಅವಧಿಯಲ್ಲಿ ಅಸಹಜವಾಗಿ ಎರಡು ಎಫ್ಸಿಸಿ (ಫಾರ್ಮೇಶನ್ ಕಮ್ಯಾಂಡರ್ಸ್ ಕಾನ್ಫರೆನ್ಸ್) ಸಭೆಗಳನ್ನು ಕರೆದಿರುವುದೇ ಇದಕ್ಕೆ ಕಾರಣ. ಇದಕ್ಕೆ ಕಾರಣವೇನೆಂದು ಗೊತ್ತಾಗಿಲ್ಲ.
ವಾಸ್ತವವಾಗಿ ಪಾಕ್ ರಚನೆಯಾಗಿ 1947ರಿಂದ 2022 ಮಾರ್ಚ್ ನಡುವೆ ಸೇನೆ 78 ಎಫ್ ಸಿಸಿ ಗಳನ್ನು ಕರೆದಿದೆ. ಇದು ವರ್ಷಕ್ಕೊಮ್ಮೆ ನಡೆಯುವ ಸೇನಾಸಭೆ, ಆದ್ದರಿಂದ 75 ಸಭೆಗಳು ಮಾಮೂಲಿ. ಈ ಹಿಂದೊಮ್ಮೆ ಯುದ್ಧದ ಸಮಯದಲ್ಲಿ ವಿಶೇಷವಾಗಿ ಎರಡು ಎಫ್ ಸಿಸಿ ಗಳನ್ನು ಕರೆಯಲಾಗಿದೆ.
ಒಟ್ಟಾರೆ ಸಭೆಗಳ ಸಂಖ್ಯೆ 78 ಆಗಬೇಕಿತ್ತು. ಆದರೆ ಅದು 80ಕ್ಕೇರಿದೆ! ಇದಕ್ಕೆ ಕಾರಣ ಏಪ್ರಿಲ್ 12 ಮತ್ತು ಜೂ.8ಕ್ಕೆ ದಿಢೀರನೆ ಇನ್ನೆರಡು ಎಫ್ ಸಿಸಿ ಗಳನ್ನು ಕರೆದಿರುವುದು.
ಕಾರಣವೇನಿರಬಹುದು?: ಜೂ.6ರಂದು ಮಾಜಿ ಸೇನಾಧಿಕಾರಿಗಳ ಸಭೆ ನಡೆದಿದೆ. ಈ ಸಭೆಯಲ್ಲಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪದಚ್ಯುತಿಯಲ್ಲಿ ಬಾಜ್ವಾ ಕೈಯಾಡಿಸಿದ್ದಾರೆ, ಅವರು ದುರಹಂಕಾರ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ. ಪಾಕ್ನ ನಿವೃತ್ತ ಸೇನಾಧಿಕಾರಿಯೊಬ್ಬರ ಪ್ರಕಾರ ಇದೊಂದು ಅಸಹಜ ಬೆಳವಣಿಗೆ, ಇಲ್ಲಿ ಬೇರೇನೋ ನಡೆಯುತ್ತಿದೆ ಎಂದಿದ್ದಾರೆ.
#CCC was held @ GHQ. General Qamar Javed Bajwa, COAS presided. Forum was given comprehensive briefing on important global / regional developments, internal security situation in the country & progress on Western Border Management Regime. (1/5) pic.twitter.com/e2005ItjMf
— DG ISPR (@OfficialDGISPR) March 15, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ