ಹತ್ತೇ ದಿನದಲ್ಲಿ ಸೇತುವೆ ನಿರ್ಮಾಣ
Team Udayavani, Jan 15, 2018, 6:10 AM IST
ವಿಶ್ವಸಂಸ್ಥೆ: ಕಳೆದ ವರ್ಷದ ಜೂನ್ ತಿಂಗಳಲ್ಲಿ ನಡೆದ ಮೇಘ ಸ್ಫೋಟದಿಂದಾಗಿ ಈ ಗ್ರಾಮವನ್ನು ನಗರಕ್ಕೆ ಸಂಪರ್ಕಿಸಲು ಇದ್ದ ಏಕೈಕ ಸೇತುವೆ ಕೊಚ್ಚಿ ಹೋಗಿತ್ತು. ಅಂದಿನಿಂದ ಗ್ರಾಮಸ್ಥರ ಜೀವನವೇ ದುರ್ಬರವಾಗಿತ್ತು. ಆವಶ್ಯಕ ವಸ್ತುಗಳನ್ನು ತರಬೇಕಿದ್ದರೂ ಪ್ರಾಣದ ಹಂಗು ತೊರೆದು, ಕುತ್ತಿಗೆಯವರೆಗಿನ ನೀರಲ್ಲಿ ಮುಳುಗಿಕೊಂಡು ನದಿ ದಾಟಿ ಪಟ್ಟಣ ತಲುಪಬೇಕಿತ್ತು. ಇವರ ಈ ಸಮಸ್ಯೆಯನ್ನು ಇದೀಗ ಭಾರ,ತೀಯ ಶಾಂತಿದೂತರು ಪರಿಹರಿಸಿದ್ದಾರೆ.
ಹೌದು. ದಕ್ಷಿಣ ಸುಡಾನ್ನ ಅಕೋಕಾ ಗ್ರಾಮದಲ್ಲಿ ಕೊಚ್ಚಿಹೋಗಿದ್ದ ಸೇತುವೆಯನ್ನು ವಿಶ್ವಸಂಸ್ಥೆಯ ಮಿಷನ್ನಲ್ಲಿರುವ ಭಾರತೀಯ ಶಾಂತಿಸಂದೇಶವಾಹಕರು ಮರು ನಿರ್ಮಾಣ ಮಾಡಿದ್ದಾರೆ. ಅದೂ ಕೇವಲ 10 ದಿನಗಳಲ್ಲಿ. ಭಾರತೀಯರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸರಕಾರದ ನೆರವಿನೊಂದಿಗೆ ಶಾಂತಿದೂತರು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ಸೇತುವೆ ನಿರ್ಮಿಸಿದ್ದಾರೆ. ಹೀಗಾಗಿ ಆ ಪ್ರದೇಶಕ್ಕೆ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದು, ಭದ್ರತಾ ಗಸ್ತು, ಮಾನವೀಯ ನೆರವು, ಆಹಾರ ವಸ್ತುಗಳ ಪೂರೈಕೆ ಎಲ್ಲವೂ ಸುಲಭವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ