ಗುರು ಶನಿ ಗ್ರಹಗಳ ನಡುವೆ 3 ಜನರ ಪ್ರಯಾಣ
Team Udayavani, Sep 13, 2020, 6:08 AM IST
ಸಾಂದರ್ಭಿಕ ಚಿತ್ರ
ಮಣಿಪಾಲ: ಮುಂದಿನ ದಿನಗಳಲ್ಲಿ ಸೂರ್ಯಾಸ್ತದ ಅನಂತರ ಆಕಾಶದಲ್ಲಿ ಅತೀ ಪ್ರಕಾಶಮಾನವಾಗಿರುವ ಗುರು ಗ್ರಹವನ್ನು ಗುರುತಿಸುವುದು ಕಷ್ಟ ಅಲ್ಲ. ದಕ್ಷಿಣ ಕ್ಷಿತಿಜದಿಂದ ಉತ್ತರದ ದಿಕ್ಕಿನಲ್ಲಿ ನೋಡುತ್ತಾ ಬಂದರೆ ಪ್ರಕಾಶಮಾನವಾಗಿ ಕಾಣುವ ಚುಕ್ಕಿ ಗುರು ಗ್ರಹ ಗೋಚರವಾಗುತ್ತದೆ. ಇದರ ಪಶ್ಚಿಮ ದಿಕ್ಕಿನಲ್ಲಿ ಶನಿ ಗ್ರಹವನ್ನು ಗುರುತಿಸಬಹುದು.
ಇದೀಗ ಅತ್ಯಂತ ಪ್ರಕಾಶಮಾನವಾಗಿರುವ ಗುರು ಮತ್ತು ಶನಿ ಗ್ರಹಗಳ ಮಧ್ಯದಿಂದ ಇಂಟರ್ನ್ಯಾಶನಲ್ ಸ್ಪೇಸ್ ಸ್ಟೇಷನ್ (ಐಖಖ) ಸೆ. 13ರಂದು ಸಂಜೆ ಹಾದು ಹೋಗಲಿದ್ದು, ಐಎಸ್ಎಸ್ ಉಪಗ್ರಹದೊಂದಿಗೆ ಗುರು ಗ್ರಹದ ಹೊಳಪು ಮತ್ತಷ್ಟು ವರ್ಧಿಸಲಿದೆ. ಐಎಸ್ಎಸ್ನಲ್ಲಿ ಈಗ ಮೂವರು ಗಗನಯಾತ್ರಿಗಳಿದ್ದಾರೆ.
7.30ಕ್ಕೆ ಉದಯ
ಕೆಲವು ತಿಂಗಳಿಂದ ರಷ್ಯಾ ದೇಶದ ಏನಾಟೊಲಿ ಇವ್ಯಾನಿಶಿನ್ ಮತ್ತು ಇವಾನ್ ವ್ಯಾಗನರ್ ಹಾಗೂ ಅಮೆರಿಕಾದ ಕ್ರಿಸ್ ಕ್ಯಾಸಿಡಿ ಈ ಉಪಗ್ರಹದಲ್ಲಿ ವಾಸಿಸುತ್ತಿದ್ದಾರೆ. ಇವರನ್ನು ಹೊತ್ತ ಐಎಸ್ಎಸ್ ಸೆ.13ರಂದು 7.30ರ ಹೊತ್ತಿಗೆ ನೈಋತ್ಯ ದಿಕ್ಕಿನ ಕ್ಷಿತಿಜ ದಿನ ಉದಯವಾಗಿ ವಾಯುವ್ಯ ದಿಕ್ಕಿನಲ್ಲಿ ಹಾದು ಹೋಗುವುದು ಗೋಚರಿಸಲಿದೆ. ಈ ಪ್ರಯಾಣದಲ್ಲಿ ಐಎಸ್ಎಸ್ ಅನ್ನು ಗುರು ಹಾಗು ಶನಿ ಗ್ರಹಗಳ ನಡುವಿನಲ್ಲಿ 7.32ಕ್ಕೆ ಕಾಣಬಹುದಾಗಿದೆ.
ಎಲ್ಲರೂ ನೋಡಬಹುದು
ಐಎಸ್ಎಸ್ ಸೆ. 13ರಂದು ಸಂಜೆ 7.30ರಿಂದ 7.33ರ ವರೆಗೆ ಆಕಾಶ ದಲ್ಲಿ ಅತಿ ಪ್ರಕಾಶಮಾನವಾಗಿ ಹೊಳೆಯುತ್ತದೆ. 520 ಕಿ.ಮೀ. ಎತ್ತರದಲ್ಲಿ ಈ ಎರಡು ಗ್ರಹಗಳ ಮಧ್ಯದಲ್ಲಿ ಹಾದು ಹೋಗುವ ಈ ದೃಶ್ಯವನ್ನು ಪ್ರತಿಯೋರ್ವರು ಕಣ್ತುಂಬಿಸಿಕೊಳ್ಳಬಹುದು.
ವರ್ಷಗಳ ಕಾಲ ವಾಸಿಸಿದ್ದ ಗಗನಯಾತ್ರಿ
ಹಲವು ದೇಶಗಳು ಒಟ್ಟುಗೂಡಿ ಐಎಸ್ಎಸ್ ಪ್ರಯೋಗಾಲಯವನ್ನು ಸ್ಥಾಪಿಸಿದ್ದು, ಕಳೆದ 21 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಇದು ಸುಮಾರು 410 ಕಿ.ಮೀ. ಎತ್ತರದಲ್ಲಿ ಪ್ರತಿ ಗಂಟೆಗೆ 27,500 ಕಿ.ಮೀ. ವೇಗದಲ್ಲಿ ಭೂಮಿಯ ಸುತ್ತ ದಿನಕ್ಕೆ ಸುಮಾರು 15 ಬಾರಿ ಪರಿಭ್ರಮಿಸುತ್ತಿದೆ. ಇಲ್ಲಿಯವರೆಗೆ ಐಎಸ್ಎಸ್ ಮೂಲಕ ಅಂತರಿಕ್ಷದ ಬಗ್ಗೆ ಹಲವು ಪ್ರಯೋಗಗಳು ಮತ್ತು ಸಂಶೋಧನೆಗಳು ನಡೆದಿದ್ದು, ಈ ಹಿಂದೆ ಒಂದು ವರ್ಷಗಳ ಕಾಲ ಓರ್ವ ಗಗನಯಾತ್ರಿ ಇಲ್ಲಿ ವಾಸಿಸಿದ್ದಾರೆ.
ಈ ದಿನ ಐಎಸ್ಎಸ್ -3.5 ಪ್ರಮಾಣ (magnitude)ದಷ್ಟು ಹೊಳಪು ಹೊಂದಿದೆ ಖಗೋಳಶಾಸ್ತ್ರಜ್ಞರು ಎಂದು ಗುರುತಿಸುತ್ತಾರೆ. ಇದರೊಂದಿಗೆ ಗುರು ಗ್ರಹ 2.48 ಹಾಗೂ ಶನಿ ಗ್ರಹ 0.38ರಷ್ಟು ಪ್ರಮಾಣ ಇರುತ್ತದೆ. ಹಾಗಾಗಿ ಅಂದು ಸಂಜೆ ಸಂಜೆ 7.30ರಿಂದ 7.33ರ ವರೆಗೆ ಆಕಾಶದಲ್ಲಿ ಐಎಸ್ಎಸ್ ಉಪಗ್ರಹ ಅತೀ ಪ್ರಕಾಶಮಾನವಾಗಿ ಹೊಳೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ