2018ರಿಂದ ತಾಲೀಬಾನ್ ವಶದಲ್ಲಿರುವ ಮೂವರು ಭಾರತೀಯರು ಶೀಘ್ರ ಬಂಧಮುಕ್ತಿ
Team Udayavani, Oct 6, 2019, 8:57 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ/ಇಸ್ಲಾಮಾಬಾದ್: ಕಳೆದ ವರ್ಷ ತಾಲೀಬಾನಿಗಳು ತಮ್ಮ ವಶದಲ್ಲಿರಿಸಿಕೊಂಡಿರುವ ಮೂವರು ಭಾರತೀಯ ಎಂಜಿನಿಯರ್ ಗಳನ್ನು ಬಂಧ ವಿಮುಕ್ತಗೊಳಿಸಲು ತಾಲೀಬಾನಿಗಳು ನಿರ್ಧರಿಸಿದ್ದಾರೆ. ಅಫ್ಘಾನಿಸ್ಥಾನಕ್ಕೆ ಅಮೆರಿಕಾದ ವಿಶೇಷ ರಾಯಭಾರಿಯಾಗಿರುವ ಝಲ್ಮೇ ಖಾಲಿಝಾದ್ ಅವರು ತಾಲೀಬಾನ್ ನಾಯಕರನ್ನು ಇಸ್ಲಾಮಾಬಾದ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಈ ನಿರ್ದಾರ ಹೊರಬಿದ್ದಿದೆ.
ಕಳೆದ ಮೇ 2018ರಲ್ಲಿ ತಾಲೀಬಾನ್ ಉಗ್ರರು ಅಫ್ಘಾನಿಸ್ಥಾನದ ವಿದ್ಯುತ್ ಉತ್ಪಾದಕ ಕೇಂದ್ರ ಒಂದರಲ್ಲಿ ಕೆಲಸ ಮಾಡುತ್ತಿದ್ದ ಏಳು ಜನರನ್ನು ಒತ್ತೆಸೆರೆ ಇರಿಸಿಕೊಂಡಿದ್ದರು. ಅವರಲ್ಲಿ ಒಬ್ಬರನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇವರನ್ನೆಲ್ಲಾ ಅಫ್ಘಾನಿಸ್ಥಾನದ ಉತ್ತರ ಭಾಘ್ಲಾನ್ ಪ್ರಾಂತ್ಯದ ನಗರ ಒಂದರಲ್ಲಿ ಒತ್ತೆಸೆರೆಯಾಗಿರಿಸಲಾಗಿತ್ತು.
ಮೂವರು ಭಾರತೀಯರ ಸಹಿತ ಓರ್ವ ಆಸ್ಟ್ರೇಲಿಯನ್ ಮತ್ತು ಓರ್ವ ಅಮೆರಿಕಾ ಪ್ರಜೆ ಸೇರಿದಂತೆ ತಾಲೀಬಾನ್ ವಶದಲ್ಲಿರುವ ಐವರು ವಿದೇಶಿ ಒತ್ತೆಸೆರೆಯಾಳುಗಳನ್ನು ಬಿಡುಗಡೆಗೊಳಿಸುವಂತೆ ಅಮೆರಿಕಾದ ವಿಶೇಷ ರಾಯಭಾರಿ ತಾಲೀಬಾನ್ ನಾಯಕರ ತಮ್ಮ ಚರ್ಚೆಯ ಸಂದರ್ಭದಲ್ಲಿ ಅಮೆರಿಕಾ ಪರವಾಗಿ ಒತ್ತಡವನ್ನು ಹೇರಿದ್ದರು.
ಅಫ್ಘಾನಿಸ್ಥಾನದಲ್ಲಿ 18 ವರ್ಷಗಳ ಸೇನಾ ಕಾರ್ಯಾಚರಣೆಯನ್ನು ಹಿಂಪಡೆದುಕೊಳ್ಳುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಬಳಿಕ ತಾಲೀಬಾನ್ ಮತ್ತು ಅಮೆರಿಕಾ ನಡುವೆ ಶಾಂತಿ ಮಾತುಕತೆಗಳು ವೇಗ ಪಡೆದುಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ