ನಿಸ್ವಾರ್ಥ ಟ್ಯಾಕ್ಸಿ ಚಾಲಕನಿಗೆ ವೈದ್ಯರಿಂದಲೇ ಸನ್ಮಾನ
ಆರೋಗ್ಯ ಯೋಧರು
Team Udayavani, Apr 21, 2020, 7:08 AM IST
ಮುಂಚೂಣಿಯಲ್ಲಿದ್ದುಕೊಂಡು ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿರುವವರ ನಡುವೆಯೇ, ವೈದ್ಯಕೀಯೇತರ ವಲಯಗಳಲ್ಲಿರುವ ಜನಸಾಮಾನ್ಯರೂ ಈ ಸಂಕಷ್ಟದ ಸಂದರ್ಭದಲ್ಲಿ ದೇಶಕ್ಕಾಗಿ ತಮ್ಮಿಂದಾದ ಮಟ್ಟಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ಅಂಥವರ ಪರಿಶ್ರಮಕ್ಕೆ ಬಹುತೇಕ ದೇಶಗಳಲ್ಲಿ ಮೆಚ್ಚುಗೆ ವ್ಯಕ್ತವಾದ ಸುದ್ದಿಗಳು ಬರುತ್ತಲೇ ಇವೆ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, ಸ್ಪೇನ್ನ ಆಸ್ಪತ್ರೆಯೊಂದರ ವೈದ್ಯಕೀಯ ಸಿಬ್ಬಂದಿಯೇ ಎದ್ದು ನಿಂತು ಕಾರು ಚಾಲಕನೊಬ್ಬನಿಗೆ ಕರತಾಡನದ ಮೂಲಕ ಶ್ಲಾಘನೆ ವ್ಯಕ್ತಪಡಿಸಿ, ಸನ್ಮಾನಿಸಿದ ಘಟನೆ ನಡೆದಿದೆ.
ಈ ಟ್ಯಾಕ್ಸಿ ಚಾಲಕ ಆ ದೇಶಕ್ಕೆ ಕೋವಿಡ್ 19 ವೈರಸ್ ಪ್ರವೇಶವಾದಾಗಿನಿಂದ ಸೋಂಕಿತರನ್ನು ತನ್ನದೇ ಕಾರಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುವ, ಅಲ್ಲಿಂದ ಮನೆಗೆ ಕರೆದೊಯ್ಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಹಗಲು ರಾತ್ರಿಯೆನ್ನದೆ ಈ ಕೆಲಸ ಮಾಡುತ್ತಿರುವ ಆ ಚಾಲಕ, ರೋಗಿಗಳಿಂದ ಒಂದು ಪೈಸೆಯನ್ನೂ ಪಡೆಯದೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ.
ಇತ್ತೀಚೆಗೆ ಆ ಚಾಲಕನಿಗೆ ಕರೆ ಮಾಡಿ ಒಬ್ಬ ರೋಗಿಯನ್ನು ಮನೆಗೆ ಬಿಟ್ಟು ಬರುವುದಿದೆ ಎಂದು ಹೇಳಲಾಯಿತು. ಅವರು ಕೂಡಲೇ ಟ್ಯಾಕ್ಸಿ ತಂದು, ಆಸ್ಪತ್ರೆಯ ಆವರಣದೊಳಕ್ಕೆ ಪ್ರವೇಶಿಸುತ್ತಿದ್ದಂತೆ ವೈದ್ಯರು, ದಾದಿಯರು ಸೇರಿದಂತೆ ಅಲ್ಲಿದ್ದವರೆಲ್ಲರೂ ಕರತಾಡನ ಮಾಡುತ್ತಾ ಚಾಲಕನನ್ನು ಸ್ವಾಗತಿಸಿದ್ದಾರೆ.
ಜತೆಗೆ ಆ ಚಾಲಕನ ಬದ್ಧತೆಯನ್ನು ಶ್ಲಾಘಿಸಿ, ಹಣದ ಕವರ್ ಒಂದನ್ನು ಉಡುಗೊರೆಯಾಗಿಯೂ ನೀಡುತ್ತಾರೆ. ಇದೆಲ್ಲವನ್ನೂ ನೋಡುತ್ತಾ ಚಾಲಕ ಕಣ್ಣೀರು ಹಾಕುವ ವೀಡಿಯೋ ಈಗ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ