ಟ್ರಂಪ್ ನಿರ್ಧಾರ ರದ್ದುಗೊಳಿಸಲು ಆದೇಶ?
Team Udayavani, Nov 12, 2020, 5:55 AM IST
ವಾಷಿಂಗ್ಟನ್: ಪ್ರತಿ ವರ್ಷ ಐದು ಲಕ್ಷ ಭಾರತೀಯರಿಗೆ ಪೌರತ್ವ ನೀಡುವುದಾಗಿ ಅಮೆರಿಕದ ಹೊಸ ಸರಕಾರ ಇರಾದೆ ಹೊಂದಿರುವ ಬಗ್ಗೆ ಈಗಾಗಲೇ ಸೂಚನೆಗಳು ವ್ಯಕ್ತವಾಗಿವೆ. ಜ.20ರಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ಮತ್ತು ಪೌರತ್ವ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶಗಳನ್ನು ರದ್ದು ಮಾಡುವ ಆದೇಶಗಳು ಬೈಡೆನ್ರಿಂದ ಪ್ರಕಟವಾಗುವ ಸಾಧ್ಯತೆಗಳು ಇವೆ ಎಂದು ಅಮೆರಿಕದ ವಿಶ್ಲೇಷಕರು ತಿಳಿಸಿದ್ದಾರೆ.
ಮೆಕ್ಸಿಕೋ ಗಡಿ ಪ್ರದೇಶದಲ್ಲಿ ಟ್ರಂಪ್ ನಿರ್ಮಿಸಲು ಮುಂದಾಗಿರುವ ಗೋಡೆ ಯೋಜನೆಗೆ ಪೆಂಟಗನ್ನ ನಿಧಿ ಬಳಕೆ, ಅಮೆರಿಕಕ್ಕೆ ಅಕ್ರಮವಾಗಿ ಬಂದಿರುವ ಪ್ರಾಪ್ತ ವಯಸ್ಕರಲ್ಲದವರ ರಕ್ಷಣೆ ಸೇರಿದಂತೆ ಹಲವು ಕ್ರಮಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಇದೇ ಉದ್ದೇಶಕ್ಕಾಗಿ ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ವೇಳೆ ವಲಸೆ ವಿಚಾರಗಳ ಬಗ್ಗೆ ಸಲಹೆ ನೀಡುತ್ತಿದ್ದ ಸಿಸಿಲಿಯಾ ಮನೋಜ್ರನ್ನು ತಮ್ಮ ತಂಡಕ್ಕೆ ಬೈಡೆನ್ ಸೇರಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಸೋಲು ಒಪ್ಪಿಕೊಳ್ಳದೇ ಇರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ಮುಜುಗರ ತರುವಂತಿದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಇದು ಅಧ್ಯಕ್ಷೀಯ ಪರಂಪರೆಗೆ ಸಹಕಾರಿಯಾದುದಲ್ಲ ಎಂದಿದ್ದಾರೆ. ಅಧಿಕಾರ ಹಸ್ತಾಂತರ ವಿಳಂಬವಾಗುತ್ತದೆ ಎಂಬುದು ಅನಿಸುವುದಿಲ್ಲ. ಜ.20ರ ವೇಳೆಗೆ ಎಲ್ಲವೂ ಸುಗಮವಾಗಬಹುದು ಎಂದರು. ಹೊಸ ಹುದ್ದೆಯನ್ನು ನಿರ್ವಹಿಸಲು ಬೇಕಾಗಿರುವ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ ಬೈಡೆನ್.
ಇಂಡಿಯನ್-ಅಮೆರಿಕನ್ ಪಟೇಲ್ ನೇಮಕ
ಅಮೆರಿಕದ ಪ್ರಭಾರ ರಕ್ಷಣ ಸಚಿವ ಕ್ರಿಸ್ ಮಿಲ್ಲರ್ ಅವರಿಗೆ ಸಲಹೆ ನೀಡುವ ನಿಟ್ಟಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ- ಅಮೆರಿಕನ್ ಕಶ್ಯಪ್ ಪ್ರಮೋದ್ ಪಟೇಲ್ರನ್ನು ಮುಖ್ಯ ಅಧಿಕಾರಿಯನ್ನಾಗಿ ನೇಮಿಸಿದ್ದಾರೆ. ಮಿಲ್ಲರ್ ಸೋಮವಾರ ಪ್ರಭಾರ ರಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಶ್ ಪಟೇಲ್ ಸದ್ಯ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಅಧಿಕಾರಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ