ಸುನಾಮಿ ರುದ್ರನರ್ತನಕ್ಕೆ ತತ್ತರಿಸಿದ ಇಂಡೋನೇಷ್ಯಾ
Team Udayavani, Sep 30, 2018, 6:00 AM IST
ಪಾಲು: ಇಂಡೋನೇಷ್ಯಾದ ದ್ವೀಪವಾದ ಸುಲಾವೇಸಿಯಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದ ಪರಿಣಾಮ ಉಂಟಾದ ಸುನಾಮಿಯು ಅಂದಾಜು 400ರಷ್ಟು ಜನರನ್ನು ಬಲಿ ಪಡೆದಿದೆ. ಸರ್ಕಾರ ಪ್ರಕಟಿಸಿರುವ ಅಂಕಿ-ಅಂಶದ ಪ್ರಕಾರ, ಸಾವಿನ ಸಂಖ್ಯೆ 384ರಷ್ಟಿದ್ದು, ಇದು ಜಾಸ್ತಿಯಾಗುವ ಸಂಭವವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುನಾಮಿ ಹೊಡೆತಕ್ಕೆ ಸಿಲುಕಿರುವ ಎರಡು ನಗರಗಳಾದ ಪಾಲು ಮತ್ತು ಡೊಂಗ್ಗಾಲ ನಗರಗಳಲ್ಲಿ 540ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಶುಕ್ರವಾರದ ಭೂಕಂಪ ಹಾಗೂ ಸುನಾಮಿಯ ನಂತರ ಶನಿವಾರ ಕಾಣಿಸಿಕೊಂಡ ಮತ್ತೂಂದು ಸುತ್ತಿನ ಕಂಪನದಿಂದಾಗಿ, ಈ ಪ್ರಾಂತ್ಯದಲ್ಲಿ ಕನಿಷ್ಠ ಒಬ್ಬ ಮೃತಪಟ್ಟಿದ್ದಾನೆ.
ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ: ಪಾಲು ನಗರದ ಸಮುದ್ರ ಕಿನಾರೆಯಲ್ಲಿ ಬೀಚ್ ಫೆಸ್ಟಿವಲ್ಗಾಗಿ ಸಾವಿರಾರು ಜನರು ಸಿದ್ಧತೆಯಲ್ಲಿ ತೊಡಗಿದ್ದಾಗಲೇ ಆರು ಅಡಿಯಷ್ಟು ಎತ್ತರದ ದೈತ್ಯ ಅಲೆಗಳು ಬಂದು ಅಪ್ಪಳಿಸಿದ್ದು, ಸಾವಿನ ಸಂಖ್ಯೆ ಈ ಪರಿ ಏರಲು ಕಾರಣ ಎನ್ನಲಾಗಿದೆ. ಸುನಾಮಿಯ ತೀವ್ರ ಬಾಧೆ ಅನುಭವಿಸಿರುವ ಪಾಲು ನಗರ ಕೆಸರು ಹಾಗೂ ಅವಶೇಷಗಳ ಕೂಪವಾಗಿ ಕಾಣ ತೊಡಗಿದೆ. ಅನೇಕಾನೇಕ ದೈತ್ಯ ಕಟ್ಟಡ ಗಳು, ಮಸೀದಿಗಳು ಧರೆಗುರುಳಿವೆ. ರಕ್ಕಸ ಅಲೆಗಳಿಂದಾಗಿ ತೀವ್ರ ಹಾನಿಗೀಡಾ ಗಿರುವ ಪಾಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಭೂಕಂಪದ ತೀವ್ರತೆಯು 7.5ರಷ್ಟಿ ತ್ತೆಂದು ಹೇಳಿರುವ ತಜ್ಞರು, ಇದೇ ಜುಲೈ, ಆಗಸ್ಟ್ನಲ್ಲಿ ಇಂಡೋನೇಷ್ಯಾದ ಮತ್ತೂಂದು ದ್ವೀಪವಾದ ಲಾಂಬೊಕ್ನಲ್ಲಿ ಹಲವರನ್ನು ಬಲಿ ಪಡೆದಿತ್ತು. ಆದರೆ, ಈಗ ಸಂಭವಿಸಿರುವ ಭೂಕಂಪ ಅದಕ್ಕಿಂತಲೂ ಹೆಚ್ಚು ಪ್ರಬಲವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ನಷ್ಟದ ಅಂದಾಜು ಸಾಧ್ಯವಾಗುತ್ತಿಲ್ಲ
ಈ ನೈಸರ್ಗಿಕ ವಿಕೋಪದ ಬಗ್ಗೆ ಮಾಹಿತಿ ನೀಡಿದ ಇಂಡೋನೇಷ್ಯಾದ ರಾಷ್ಟ್ರೀಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ (ಬಿಎನ್ಪಿಬಿ) ವಕ್ತಾರ ಸುಪೋಟೋ ಪುವೊì ನುಗ್ರಾಹೊ, “”ಕಳೆದೊಂದು ವರ್ಷದಿಂದ ನೆರೆಯ ದೇಶವಾದ ಗಿಲಿಯ ಸಮಾನಾಂತರ ರೇಖೆಯಲ್ಲಿ ಸಂಭವಿಸಿರುವ ಅನೇಕ ಭೂಕಂಪಗಳಿಂದ ಇಂಡೋನೇಷ್ಯಾದಲ್ಲಿ ಸುಮಾರು 555ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಪಾಲು ನಗರದಲ್ಲೇ 540 ಜನರು ಪ್ರಾಣ ತೆತ್ತಿದ್ದಾರೆ. ಇದೀಗ, ಮತ್ತೂಮ್ಮೆ ನಿಸರ್ಗ ತನ್ನ ಕರಾಳ ಹಸ್ತ ಚಾಚಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸುನಾಮಿಯಿಂದ ಕೆಲವಾರು ಪ್ರಾಂತ್ಯಗಳಲ್ಲಿ ಸಂವಹನ ತಂತ್ರಜ್ಞಾನಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಆದ ನಷ್ಟದ ಅಂದಾಜು ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ವಕಾರಾ ಸುಪೋಟೋ ತಿಳಿಸಿದರು.
ಎಲ್ಲೆಲ್ಲೂ ಶೋಕ, ಸೂತಕ
ಅಸಂಖ್ಯ ಗಾಯಾಳುಗಳು ಆಸ್ಪತ್ರೆಗಳಲ್ಲಿ ಭರ್ತಿಯಾಗುತ್ತಿದ್ದು, ಯಾವುದೇ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಜಾಗವಿಲ್ಲ ದಂತಾಗಿದೆ. ಹಾಗಾಗಿ, ನೂರಾರು ಮಂದಿಗೆ ಆಸ್ಪತ್ರೆಯ ಆವರಣದಲ್ಲೇ ನೆಲದ ಮೇಲೆಯೇ ಮಲಗಿಸಿ ಶುಶ್ರೂಷೆ ನೀಡಲಾಗುತ್ತಿದೆ. ಪಾಲು ನಗರದ ಅಲ್ಲಲ್ಲಿ ಅರ್ಧ ಮುಖ ಮುಚ್ಚಿಕೊಂಡಿರುವ ಪಾರ್ಥಿವ ಶರೀರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರ ನಡುವೆಯೇ ವ್ಯಕ್ತಿಯೊಬ್ಬ, ಕೆಸರು ಮೆತ್ತಿದ ತನ್ನ ಮೃತ ಮಗುವಿನ ಶವವನ್ನು ಹೆಗಲ ಮೇಲೆ ಹೊತ್ತು ರೋದಿಸಿಕೊಂಡು ಹೋಗುತ್ತಿದ್ದ ದೃಶ್ಯವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿ ಎಲ್ಲರ ಮನ ಕಲಕಿದೆ. ಶುಕ್ರವಾರ ಸಂಭವಿಸಿದ ಭೂಕಂಪದ ನಂತರವೂ ಪಾಲು ನಗರ ಹಾಗೂ ಸುತ್ತಿನ ಪ್ರಾಂತ್ಯಗಳಲ್ಲಿ 100ಕ್ಕಿಂತಲೂ ಲಘು ಕಂಪನಗಳು ಅನುಭವಕ್ಕೆ ಬಂದಿವೆ ಎಂದು ಆ ಪ್ರಾಂತ್ಯದ ನಾಗರಿಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ