ಬಹುಮತ ಪಡೆಯುಲು ತೆರೆಸಾ ಮೇ ವಿಫ‌ಲ; ಬ್ರಿಟನ್‌ ಸಂಸತ್ತು ತ್ರಿಶಂಕು


Team Udayavani, Jun 9, 2017, 11:50 AM IST

Teresa May-700.jpg

ಲಂಡನ್‌ : ಬ್ರಿಟಿಷ್‌ ಪ್ರಧಾನಿ ತೆರೆಸಾ ಮೇ ಅವರ ಕನ್‌ಸರ್ವೇಟಿವ್‌ ಪಕ್ಷ ಬ್ರಿಟನ್‌ ಸಂಸತ್ತಿಗೆ ನಡೆದ ದಿಢೀರ್‌  ಚುನಾವಣೆಯಲ್ಲಿ  ಬಹುಮತ ಪಡೆಯಲು ವಿಫ‌ಲವಾಗಿದೆ. ಪರಿಣಾಮವಾಗಿ ಬ್ರಿಟಿಷ್‌ ಸಂಸತ್ತು ತ್ರಿಶಂಕು ಸ್ಥಿತಿಯನ್ನು ತಲುಪಿದೆ ಎಂದು ಮಾಧ್ಯಮ ವರದಿಗಳು ಇಂದು ಶುಕ್ರವಾರತಿಳಿಸಿವೆ.

650 ಸದಸ್ಯ ಬಲದ ಬ್ರಿಟಿಷ್‌ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 629 ಸ್ಥಾನಗಳ ಫ‌ಲಿತಾಂಶ ಬಹಿರಂಗವಾಗಿದೆ. ಆ ಪ್ರಕಾರ ಕನ್‌ಸರ್ವೇಟಿವ್‌ ಪಕ್ಷಕ್ಕೆ ಶೇ.42(+5 ಸ್ಥಾನ), ಲೇಬರ್‌ ಪಾರ್ಟಿಗೆ ಶೇ.40 (+10), ಲಿಬರಲ್‌ ಡೆಮೊಕ್ರಾಟ್ಸ್‌ಗೆ ಶೇ.7 (-1), ಸ್ಕಾಟಿಷ್‌ ನ್ಯಾಶನಲಿಸ್ಟ್‌ ಪಕ್ಷ (ಎಸ್‌ಎನ್‌ಪಿ)ಗೆ ಶೇ.3 (-2), ಯುಕೆ ಇಂಡಿಪೆಂಡೆಂಟ್‌ ಪಾರ್ಟಿಗೆ ಶೇ.2 (-11) ಮತ್ತು ಗ್ರೀನ್ಸ್‌ ಪಾರ್ಟಿಗೆ ಶೇ.2 (-2) ಪ್ರಾಪ್ತವಾಗಿವೆ ಎಂದು ಗಾರ್ಡಿಯನ್‌ ವರದಿ ಮಾಡಿದೆ. 

ತೆರೇಸಾ ಮೇ ಲೆಕ್ಕಾಚಾರ ಉಲ್ಟಾ

ಬಲವಾದ ಜನಾದೇಶವನ್ನು ಪಡೆಯಬೇಕೆಂಬ ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರ ಲೆಕ್ಕಾಚಾರ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ. ಪರಿಣಾಮವಾಗಿ ಆಕೆ ತನ್ನ ಹುದ್ದೆಯನ್ನು ತ್ಯಜಿಸಬೇಕೆಂಬ ಕರೆ ಈಗ ಬಲವಾಗಿ ಕೇಳಿ ಬರುತ್ತಿದೆ. 

ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿ ಇರುವಂತೆಯೇ ಬ್ರಿಟನ್‌ ಸಂಸತ್ತು ಈಗ  ಅತಂತ್ರ ಸ್ಥಿತಿಯನ್ನು ತಲುಪಿರುವ ಸೂಚನೆಗಳು ಸಿಗುತ್ತಿವೆ. ಪರಿಣಾಮವಾಗಿ ನಿರ್ಣಾಯಕ ಬ್ರೆಕ್ಸಿಟ್‌ ಮಾತುಕತೆ ಆರಂಭವು ವಿಳಂಬಗೊಳ್ಳುವುದು ಅನಿವಾರ್ಯವಾಗಿದೆ. 

ಗುರುವಾರದ ಮತ ಎಣಿಕೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರಕಿಲ್ಲ. ಪ್ರಬಲ ಜನಾದೇಶದ ನಿರೀಕ್ಷೆಯಲ್ಲಿದ್ದ ಬ್ರಿಟಿಷ್‌ ಪ್ರಧಾನಿ ತೆರೇಸಾ ಮೇ ತೀವ್ರ ನಿರಾಶೆಗೆ ಗುರಿಯಾಗಿರುವ ನಡುವೆಯೂ ತಾನು ದೇಶಕ್ಕೆ ಸ್ಥಿರತೆಯನ್ನು ಒದಗಿಸಲು ಶ್ರಮಿಸುವೆ ಎಂದಿದ್ದಾರೆ. ಲೇಬರ್‌ ಪಕ್ಷದ ಆಕೆಯ ಎದುರಾಳಿ ಜೆರೆಮಿ ಕಾರ್ಬಿನ್‌ ಅವರು “ತೆರೇಸಾ ಮೇ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕು’ ಎಂದು ಆಗ್ರಹಿಸಿದ್ದಾರೆ.

ಬಿಬಿಸಿಯ ಪರಿಷ್ಕೃತ ಅಂದಾಜಿನ ಪ್ರಕಾರ ಮೇ ಅವರ ಕನ್‌ಸರ್ವೇಟಿವ್‌ ಪಕ್ಷಕ್ಕೆ 650 ಸದಸ್ಯ ಬಲದ ಹೌಸ್‌ ಆಫ್ ಕಾಮನ್ಸ್‌ನಲ್ಲಿ 318 ಸ್ಥಾನಗಳು ಸಿಗಲಿದೆ. ಎಂದರೆ ಬಹುಮತ ಪ್ರಾಪ್ತಿಗೆ ಎಂಟು ಸ್ಥಾನಗಳ ಕೊರತೆ ಆಗುವುದು. ಎಡಪಂಥೀಯ ವಿರೋಧ ಪಕ್ಷವಾಗಿರುವ ಲೇಬರ್‌ ಪಾರ್ಟಿಗೆ 267 ಸ್ಥಾನಗಳು ದೊರಕಬಹುದು ಎನ್ನಲಾಗಿದೆ. ಪರಿಣಾಮವಾಗಿ ಬ್ರಿಟನ್‌ “ತ್ರಿಶಂಕು ಸಂಸತ್‌’ ಪಡೆಯುವುದು ಬಹುತೇಕ ನಿಶ್ಚಿತವಾದಂತಾಗಿದೆ. 

ಸ್ಕೈ ನ್ಯೂಸ್‌ “ತೆರೇಸಾ ಮೇ ತನ್ನ ಬಹುಮತ ಕಳೆದುಕೊಳ್ಳಲಿದ್ದಾರೆ’ ಎಂದು ಭವಿಷ್ಯ ನುಡಿದಿತ್ತು. ಆಕೆಯ ಪಕ್ಷಕ್ಕೆ 315ರಿಂದ 325ರ ತನಕದ ಸ್ಥಾನಗಳು ಪ್ರಾಪ್ತವಾದೀತು ಎಂದು ಅದು ಹೇಳಿತ್ತು. 

ಇದೇ ವೇಳೆ ಸ್ಕಾಟ್ಲಂಡ್‌ನ‌ಲ್ಲಿ ಸ್ವಾತಂತ್ರ್ಯ ಪರ ಸ್ಕಾಟಿಶ್‌ ನ್ಯಾಶನಲಿಸ್ಟ್‌ ಪಾರ್ಟಿ ಭಾರೀ ಹಿನ್ನಡೆಗೆ ಗುರಿಯಾಗಿದೆ. 2015ರಲ್ಲಿ ಇದು ಸ್ಕಾಟ್ಲಂಡ್‌ನ‌ 59ರಲ್ಲಿ 56 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಅದರ ನಿರ್ವಹಣೆ ಅತ್ಯಂತ ಕಳಪೆಯಾಗಿದೆ. ತನ್ನ ಬಹುತೇಕ ಸ್ಥಾನಗಳನ್ನು ಅದು ಕನ್‌ಸರ್ವೇಟಿವ್‌, ಲೇಬರ್‌ ಮತ್ತು ಲಿಬರಲ್‌ ಡೆಮೊಕ್ರಾಟ್ಸ್‌ಗಳಿಗೆ ಬಿಟ್ಟುಕೊಟ್ಟಿದೆ. 

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.