ಖಾರ್ಕಿವ್ನಿಂದ ಹಿಂದೆ ಸರಿಯುತ್ತಿದೆ ರಷ್ಯಾ ಸೇನೆ
Team Udayavani, May 14, 2022, 8:34 PM IST
ಉಕ್ರೇನ್ನ ಒಡೆಸಾದಲ್ಲಿ ಧ್ವಂಸವಾಗಿರುವ ಮನರಂಜನೆ ಹಾಗೂ ಶಾಂಪಿಂಗ್ ಮಾಲ್.
ಕೀವ್: ಈಗಾಗಲೇ ರಾಜಧಾನಿ ಕೀವ್ ಮೇಲೆ ಮತ್ತೆ ನಿಯಂತ್ರಣ ಸಾಧಿಸಿರುವ ಉಕ್ರೇನ್ಗೆ ಇನ್ನೊಂದು ಜಯ ಸಿಕ್ಕಿದೆ.
ಉಕ್ರೇನ್ ಸೇನೆ ಹೇಳಿಕೊಂಡ ಪ್ರಕಾರ, ಉಕ್ರೇನಿನ 2ನೇ ಬೃಹತ್ ನಗರ ಖಾರ್ಕಿವ್ನಿಂದಲೂ ರಷ್ಯಾ ಸೇನೆ ಕಾಲ್ಕೀಳುತ್ತಿದೆ. ಖಾರ್ಕಿವ್ನಲ್ಲಿ ಎರಡೂ ದೇಶಗಳ ಸೇನೆಯ ನಡುವೆ ಭೀಕರ ಸಮರ ನಡೆಯುತ್ತಿದೆ.
ಸದ್ಯ ರಷ್ಯನ್ನರು ಖಾರ್ಕಿವ್ನಿಂದ ಹೊರ ನಡೆಯುತ್ತಿದ್ದಾರೆ, ಆದರೆ ಡಾನೆಸ್ಕ್ ನಗರದಲ್ಲಿ ಮೋರ್ಟಾರ್ ಶೆಲ್ ದಾಳಿಗಳನ್ನು ನಡೆಸುತ್ತಿದ್ದಾರೆ. ಇದಲ್ಲದೆ, ವಾಯುದಾಳಿ ಮಾಡುವ ಮೂಲಕ ಉಕ್ರೇನ್ ಪಡೆಗಳನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಉಕ್ರೇನ್ ಸೇನೆ ಹೇಳಿಕೊಂಡಿದೆ. ಇದರ ಮಧ್ಯೆ ಈ ಯುದ್ಧ ಯಾವಾಗ ಮುಗಿಯುತ್ತಿದೆ, ಎಂದು ಗೊತ್ತಿಲ್ಲದ ಮಟ್ಟಿಗೆ ದೀರ್ಘವಾಗಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ಹೇಳಿದ್ದಾರೆ.
ರಷ್ಯಾ ಯೋಧರೊಬ್ಬರನ್ನು ಯುದ್ಧಾಪರಾಧಿ ಎಂದು ಉಕ್ರೇನ್ ನ್ಯಾಯಾಲಯ ವಿಚಾರಣೆ ನಡೆಸುತ್ತಿರುವುದು ಇನ್ನೊಂದು ಮಹತ್ವದ ಬೆಳವಣಿಗೆ.
ಜಿ 7 ಬೆಂಬಲ:
ಜರ್ಮನಿಯಲ್ಲಿ ನಡೆಯುತ್ತಿರುವ ಜಿ-7 ರಾಷ್ಟ್ರಗಳ ಶೃಂಗಸಭೆಯಲ್ಲಿ ಉಕ್ರೇನ್ ಯುದ್ಧ ಮುಗಿಯುವವರೆಗೂ ಉಕ್ರೇನ್ ದೇಶಕ್ಕೆ ಬೆಂಬಲ ಮುಂದುವರಿಸುವುದಾಗಿ ಎಲ್ಲಾ ಸದಸ್ಯ ರಾಷ್ಟ್ರಗಳು ಘೋಷಿಸಿವೆ.
ಯುಎನ್ಎಚ್ಆರ್ ಮತದಾನ: ಭಾರತ ವಿಮುಖ
ಮತ್ತೊಂದೆಡೆ, ಉಕ್ರೇನ್ನಲ್ಲಿ ರಷ್ಯಾ ದಾಳಿಯಿಂದಾಗಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ (ಯುಎನ್ಎಚ್ಆರ್) ಆಯೋಜಿಸಿದ್ದ ಮತದಾನದಿಂದ ಭಾರತ ವಿಮುಖವಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಇದೇ ವಿಚಾರವಾಗಿ ನಡೆಸಲಾಗಿರುವ ಮತದಾನದ ಎಲ್ಲಾ ಸಂದರ್ಭಗಳಲ್ಲಿಯೂ ಭಾರತ, ಹೀಗೆಯೇ ನಿರ್ಲಿಪ್ತ ನೀತಿಯನ್ನು ಅನುಸರಿಸಿದೆ.
ಶನಿವಾರ ನಡೆದ ಮತದಾನದಂದು, ಪ್ರಸ್ತಾವನೆ ಪರವಾಗಿ 33 ರಾಷ್ಟ್ರಗಳು ಉಕ್ರೇನ್ ಪರವಾಗಿ ಮತದಾನ ಮಾಡಿದರೆ, ಚೀನಾ ಮತ್ತು ಎರಿಟ್ರಿಯಾ ದೇಶಗಳು ರಷ್ಯಾ ವಿರುದ್ಧವಾಗಿ ಮತ ಚಲಾಯಿಸಿವೆ. ಆದರೆ, ಭಾರತ ಸೇರಿದಂತೆ ಅರ್ಮೇನಿಯಾ, ಬೊಲಿವಿಯಾ, ಕ್ಯಾಮೆರೂನ್, ಕ್ಯೂಬಾ, ಕಜಕಿಸ್ತಾನ, ನಮೀಬಿಯಾ, ಪಾಕಿಸ್ತಾನ, ಸೆನೆಗಲ್, ಸುಡಾನ್, ಉಜ್ಬೇಕಿಸ್ತಾನ ಹಾಗೂ ವೆನೆಜುವೆಲಾ ರಾಷ್ಟ್ರಗಳು ಮತದಾನದಿಂದ ವಿಮುಖವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಾರ್ಜ್ ಡಬ್ಲ್ಯೂ ಬುಷ್ ಹತ್ಯೆಗೆ ಸ್ಕೆಚ್: ಅಮೆರಿಕದಲ್ಲಿ ಇರಾಕಿ ಪ್ರಜೆ ಬಂಧನ
ಬೋಕೋ ಹರಾಂ ಉಗ್ರರಿಂದ ನರಮೇಧ; ನೈಜೀರಿಯಾದಲ್ಲಿ 50 ರೈತರ ಹತ್ಯೆ, ಹಲವರು ಚಿಂತಾಜನಕ
ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಭೀಕರ ಶೂಟೌಟ್: 19 ಮಕ್ಕಳು ಸೇರಿ 21 ಮಂದಿ ಸಾವು
ನಿಯಮ ಗೌರವಿಸಿ, ಉಲ್ಲಂಘನೆ ಮಾಡಲೇಬೇಡಿ; ಚೀನಕ್ಕೆ ಕ್ವಾಡ್ ರಾಷ್ಟ್ರಗಳ ಕಠೋರ ಎಚ್ಚರಿಕೆ
ಸಾಗರದಡಿ ಸಕ್ಕರೆಯ ನಿಕ್ಷೇಪ ಪತ್ತೆ! ಸಮುದ್ರದ ತಳದಲ್ಲಿ “ಸುಕ್ರೋಸ್’ ಮಾದರಿಯಲ್ಲಿ ಸಂಗ್ರಹ
MUST WATCH
ಹೊಸ ಸೇರ್ಪಡೆ
ದ್ವೇಷಪೂರಿತ ಭಾಷಣ: ಮಾಜಿ ಶಾಸಕ ಪಿ.ಸಿ.ಜಾರ್ಜ್ಗೆ ಜಾಮೀನು ರದ್ದು
ಮದ್ಯಪಾನ ಮಾಡಿ ಚಾಲನೆ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ : ಶಾಸಕ ರಂಗನಾಥ್ ಸೂಚನೆ
ದೈವಸ್ಥಾನದ ಹುಂಡಿಯಿಂದ ಹಣ ಕಳವಿಗೆ ಯತ್ನ; ಆರೋಪಿ ಪೊಲೀಸ್ ವಶಕ್ಕೆ
ಜನತಾ ಜಲಧಾರೆ: ಜೆಪಿ ಭವನದಲ್ಲಿ ಬ್ರಹ್ಮಕಲಶ ಪ್ರತಿಷ್ಠಾಪನೆ
ಶಿಕ್ಷಣ ಸಂಸ್ಥೆಗಳ ಉನ್ನತೀಕರಣಕ್ಕೆ ಕೈಜೋಡಿಸಿ: ಆಕ್ಸಿಸ್ ಬ್ಯಾಂಕ್ ಗೆ ಸಿಎಂ ಬೊಮ್ಮಾಯಿ