ದಿನಖರ್ಚಿಗೂ ಹಣವಿಲ್ಲದ ಸ್ಥಿತಿಗೆ ತಲುಪಿದ ವಿಶ್ವಸಂಸ್ಥೆ
Team Udayavani, Oct 12, 2019, 4:10 PM IST
ವಿಶ್ವಸಂಸ್ಥೆ: ನಿಗದಿತ ಸಭೆ ರದ್ದು, ಕಚೇರಿ ಕಟ್ಟದೊಳಗಿನ ಎಸ್ಕಲೇಟರ್ ಸ್ವಿಚ್ ಆಫ್. ಅಧಿಕಾರಿಗಳ ಪ್ರವಾಸಕ್ಕೆ ಕತ್ತರಿ, ಕಚೇರಿ ಎದುರಿನ ಕಾರಂಜಿ ಬಂದ್, ದೈನಂದಿನ ಚಟುವಟಿಕೆಗಳಿಗೇ ಗ್ರಹಣ.
ಇದು ಸದ್ಯ ವಿಶ್ವಸಂಸ್ಥೆಯ ಪರಿಸ್ಥಿತಿ. ಕಾರಣ ನಿತ್ಯದ ಖರ್ಚಿಗೂ ಹಣವಿಲ್ಲದ ಸ್ಥಿತಿ. ಇದರಿಂದಾಗಿ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆ್ಯಂಟೋನಿಯೋ ಗುಟೆರ್ರಸ್ ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದು, ಸೋಮವಾರದಿಂದ ವಿಶ್ವಸಂಸ್ಥೆಯ ಹಲವು ಕಾರ್ಯಚಟುವಟಿಕೆಗಳನ್ನು ಸ್ಥಗಿತೊಳಿಸುವುದಾಗಿ ಹೇಳಿದ್ದಾರೆ.
ಈ ಕುರಿತು ಅಲ್ಲದೇ ವಿಶ್ವಸಂಸ್ಥೆಯ ಎಲ್ಲ ವಿಭಾಗಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಹಣವಿಲ್ಲದ ಪರಿಸ್ಥಿತಿಯಿಂದ ಕಾರ್ಯಚಟವಟಿಕೆಗಳಿಗೆ ಧಕ್ಕೆಯಾಗಲಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ವಿವಿಧ ವಿಭಾಗಗಳಲ್ಲಿ 37 ಸಾವಿರ ಮಂದಿ ಸಿಬಂದಿಯಿದ್ದು, ನವೆಂಬರ್ ತಿಂಗಳ ಸಂಬಳ ಕೊಡಲು ಹಣಕಾಸು ಕೊರತೆ ಕಾಡಿದೆ.
ಏತನ್ಮಧ್ಯೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ 128 ರಾಷ್ಟ್ರಗಳು ಕೊಡಬೇಕಾಗಿರುವ 14,121 ಕೋಟಿ ರೂ.ಗಳನ್ನು ಪಾವತಿಸಿವೆ ಎಂದು ವಿಶ್ವಸಂಸ್ಥೆ ನಿರ್ವಹಣೆ ಮುಖ್ಯಸ್ಥರಾದ ಕ್ಯಾಥರೀನ್ ಪೊಲಾರ್ಡ್ ಬಜೆಟ್ ಸಮಿತಿಗೆ ಹೇಳಿದ್ದಾರೆ. ಇದರಲ್ಲಿ ಭಾರತವೂ ಒಂದಾಗಿದೆ.
ಇದೇ ವೇಳೆ 9498 ಕೋಟಿ ರೂ.ಗಳನ್ನು 65 ದೇಶಗಳಿಂದ ಸಾಲ ಪಡೆಯಲಾಗಿದೆ. ಇದರಲ್ಲಿ 7 ಸಾವಿರ ಕೋಟಿ ರೂ.ಗಳನ್ನು ಅಮೆರಿಕದಿಂದ ಪಡೆಯಾಗಿದೆ ಎಂದು ಹೇಳಿದ್ದಾರೆ.
ಇತ್ತ ಹಣಕಾಸು ಪಾವತಿ ಬಗ್ಗೆ ಭಾರತದ ವಿಶ್ವಸಂಸ್ಥೆ ರಾಯಭಾರಿ ಸಯ್ಯದ್ ಅಕºರುದ್ದೀನ್ ಅವರು ಟ್ವೀಟ್ ಮಾಡಿದ್ದು ಬಾಕಿ ಪಾವತಿಯಲ್ಲಿ ಸಂಪೂರ್ಣ ಪಾವತಿ ಮಾಡಿದ್ದ 193 ರಾಷ್ಟ್ರಗಳಲ್ಲಿ 35 ರಾಷ್ಟ್ರಗಳು ಮಾತ್ರ ಎಂದು ಹೇಳಿದ್ದಾರೆ. ಇನ್ನು ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ವಿಶ್ವಸಂಸ್ಥೆಗೆ ಅಮೆರಿಕ ಮಾತ್ರ ಹಣಕೊಡುತ್ತಿದ್ದು, ಬೇರಾವುದೇ ರಾಷ್ಟ್ರಗಳು ಕೊಡುತ್ತಿಲ್ಲ. ಎಲ್ಲ ರಾಷ್ಟ್ರಗಳೂ ದೇಣಿಗೆ ಕೊಡುವಂತೆ ಮಾಡಿ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ