
ಮಗುವಾಗಿದ್ದಾಗ ಕಿಡ್ನಾಪ್ ಆಗಿದ್ದಾಕೆ 51 ವರ್ಷಗಳ ಬಳಿಕ ಕುಟುಂಬ ಸೇರಿದರು..
Team Udayavani, Nov 29, 2022, 12:40 PM IST

ಟೆಕ್ಸಾಸ್: 1971ರಲ್ಲಿ ಯುನೈಟೆಡ್ ಸ್ಟೇಟ್ಸ್ ನ ಫೋರ್ಟ್ ವರ್ತ್ ಪಟ್ಟಣದಲ್ಲಿ ಸಣ್ಣ ಮಗುವೊಂದು ಕಳೆದುಹೋಗಿತ್ತು. ಆ ಮಗುವನ್ನು ಕಿಡ್ನಾಪ್ ಮಾಡಲಾಗಿತ್ತು. ಇದೀಗ ಸುಮಾರು 51 ವರ್ಷಗಳ ಬಳಿಕ ಪತ್ತೆ ಮಾಡಲಾಗಿದೆ. ಮಗುವಾಗಿದ್ದ ದೂರವಾಗಿದ್ದ ಆ ಮಹಿಳೆ ಇದೀಗ ಕುಟುಂಬದೊಂದಿಗೆ ಒಂದಾಗಿದ್ದಾರೆ.
ಟೆಕ್ಸಾಸ್ ನ ಫೋರ್ಟ್ ವರ್ತ್ ನಗರದ ಈ ಘಟನೆಯನ್ನು ದಿ ಗಾರ್ಡಿಯನ್ ವರದಿ ಮಾಡಿದೆ.
ಅಲ್ಟಾ ಅಪಾಂಟೆನ್ಕೊ ಎಂಬ ಮಹಿಳೆ 1971ರಲ್ಲಿ ತನ್ನ ಮಗು ಮೆಲಿಸ್ಸಾಳನ್ನು ನೋಡಿಕೊಳ್ಳಲು ಜನ ಬೇಕೆಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಆಕೆ ಕೆಲಸಕ್ಕೆ ಹೋಗುತ್ತಿದ್ದರಿಂದ ತುರ್ತಾಗಿ ಬೇಬಿ ಸಿಟ್ಟರ್ ನ ಅಗತ್ಯವಿತ್ತು. ಆಕೆ ಪೂರ್ವಾಪರ ವಿಚಾರಿಸಿದೆ ಓರ್ವ ಮಹಿಳೆಯನ್ನು ಬೇಬಿ ಸಿಟ್ಟರ್ ಆಗಿ ನೇಮಿಸಿದ್ದರು. ಆ ಮಹಿಳೆ ಮಗುವನ್ನು ಅಪಹರಣ ಮಾಡಿದ್ದರು. ಬಳಿಕ ಮಗುವಿಗಾಗಿ ಹುಡುಕಾಟ ನಡೆಸಿದ್ದರೂ ಅದು ಫಲ ನೀಡಿರಲಿಲ್ಲ.
ಈ ವರ್ಷದ ಸೆಪ್ಟೆಂಬರ್ನಲ್ಲಿ, ಅಂದು ನಾಪತ್ತೆಯಾಗಿದ್ದ ಬಾಲಕಿ ಇಂದು ಫೋರ್ಟ್ ವರ್ತ್ನಿಂದ 1,100 ಮೈಲುಗಳಿಗಿಂತ ಹೆಚ್ಚು ದೂರದಲ್ಲಿರುವ ಚಾರ್ಲ್ಸ್ಟನ್ ಬಳಿ ಇದ್ದಾಳೆ ಎಂಬ ಸುಳಿವು ಸಿಕ್ಕಿತು. ಡಿಎನ್ಎ ಪರೀಕ್ಷೆಯ ಫಲಿತಾಂಶಗಳು, ಮೆಲಿಸ್ಸಾಳ ದೇಹದ ಮೇಲಿದ್ದ ಮಚ್ಚೆ ಮತ್ತು ಅವಳ ಜನ್ಮದಿನದ ಸಹಾಯದಿಂದ 51 ವರ್ಷಗಳ ಹಿಂದೆ ಅವರಿಂದ ಅಪಹರಿಸಲ್ಪಟ್ಟ ಮಗು ಮೆಲಿಸ್ಸಾ ಎಂದು ಸಾಬೀತುಪಡಿಸಲು ಕುಟುಂಬಕ್ಕೆ ಸಹಾಯ ಮಾಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ರಿಷಬ್ ಶೆಟ್ಟಿ ನಿರ್ಮಾಣದ ʼಶಿವಮ್ಮʼ ಚಿತ್ರಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ
ಕಳೆದ ಶನಿವಾರ ಮೆಲಿಸ್ಸಾ ಆಕೆಯ ತಾಯಿ, ತಂದೆ ಮತ್ತು ನಾಲ್ವರು ಒಡಹುಟ್ಟಿದವರನ್ನು ಫೋರ್ಟ್ ವರ್ತ್ ನ ಚರ್ಚ್ ನಲ್ಲಿ ಭೇಟಿಯಾದರು. ಕುಟುಂಬವು 51 ವರ್ಷಗಳ ಬಳಿಕ ಮನೆ ಮಗಳನ್ನು ಸಂತಸದಿಂದ ಸ್ವಾಗತಿಸಿತು.
ಐದು ದಶಕದ ಹಿಂದೆ ತಾಯಿಯೇ ಮಗಳನ್ನು ಕೊಂದು ಹಾಕಿದ್ದಾಳೆ ಎಂಬ ಆರೋಪಗಳನ್ನೂ ಮೆಲಿಸ್ಸಾ ತಾಯಿ ಅಲ್ಟಾ ಅಪಾಂಟೆನ್ಕೊ ಎದುರಿಸಿದ್ದರು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ತೆಕ್ಕಟ್ಟೆ: ಕಾರಿಗೆ ಟ್ಯಾಂಕರ್ ಲಾರಿ ಢಿಕ್ಕಿ ; ನಾಲ್ವರು ವಿದ್ಯಾರ್ಥಿಗಳು ಪಾರು !

ಪತ್ರಕರ್ತನನ್ನು ಮರಕ್ಕೆ ಕಟ್ಟಿ ಥಳಿಸಿದ ಕಿಡಿಗೇಡಿಗಳು: ಆರು ಮಂದಿಯ ಬಂಧನ

ಜ. 29ರಂದು ಕಟಪಾಡಿ ಏಣಗುಡ್ಡೆಯಲ್ಲಿ ‘ಕೌಸ್ತುಭ ರೆಸಿಡೆನ್ಸಿ’ ಹೊಟೇಲ್, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಅಂಬೇಡ್ಕರ್ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್