5.87 ಕೋಟಿ ಅಮೆರಿಕನ್ನರ ಅಂಚೆ ಮತ
2016ಕ್ಕೆ ಹೋಲಿಸಿದರೆ ಈ ಬಾರಿಯೇ ಹೆಚ್ಚು ಮತದಾನ; ಫಲಿತಾಂಶ ವಿಳಂಬ?
Team Udayavani, Oct 27, 2020, 12:42 AM IST
ಅಮೆರಿಕ ಲೆವಾಂತ್ನಲ್ಲಿ ಅಭಿಮಾನಿಯೊಬ್ಬರು ನೀಡಿದ ಕ್ಯಾಪ್ನಲ್ಲಿ ಸಹಿ ಹಾಕಿ ನೀಡಿದ ಟ್ರಂಪ್.
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾ ವಣೆಯಲ್ಲಿ ಈಗಾಗಲೇ 5.87 ಕೋಟಿಗೂ ಅಧಿಕ ಮಂದಿ ಹಕ್ಕು ಚಲಾಯಿಸಿದ್ದಾರೆ. ಅಲ್ಲದೆ, ಮೇಲ್ ಮೂಲಕ ಮತ ಚಲಾಯಿ ಸಿದವರ ಸಂಖ್ಯೆ ನಿರೀಕ್ಷೆಗೂ ಮೀರಿರುವ ಕಾರಣ, ಮತ ಎಣಿಕೆ ಪ್ರಕ್ರಿಯೆಯು ಪೂರ್ಣಗೊಳ್ಳುವಾಗ ನ.3 ದಾಟಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ, ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬೀಳುವಾಗ ವಿಳಂಬವಾಗುವ ಸಾಧ್ಯತೆಯಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಎಡಿಸನ್ ರಿಸರ್ಚ್ ಆ್ಯಂಡ್ ಕ್ಯಾಟ ಲಿಸ್ಟ್ ಎಂಬ ಸಂಸ್ಥೆಯು 50 ಪ್ರಾಂತ್ಯಗಳ ಚುನಾವಣ ಅಧಿಕಾರಿಗಳ ಸಮೀಕ್ಷೆ ನಡೆಸಿದ್ದು, ಈವರೆಗೆ 5.87 ಕೋಟಿ ಅಮೆರಿಕನ್ನರು ಮತ ಚಲಾಯಿಸಿರುವ ಮಾಹಿತಿ ಸಿಕ್ಕಿದೆ. 2016ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. 2016ರಲ್ಲಿ ಈ ಅವಧಿಯಲ್ಲಿ 5.83 ಕೋಟಿ ಮಂದಿ ಹಕ್ಕು ಚಲಾಯಿಸಿದ್ದರು.
ಪ್ರಬಲ ಪೈಪೋಟಿಯಿದೆ ಎಂದ ಶಲಭ್ ಕುಮಾರ್: “ಕೊರೊನಾ ಏನಾದರೂ ಬರದೇ ಇದ್ದಿದ್ದರೆ, ಟ್ರಂಪ್ ಅಭೂತ ಪೂರ್ವ ಜಯ ಗಳಿಸುತ್ತಿದ್ದರು. ಆದರೆ, ಈಗಿನ ಪರಿಸ್ಥಿತಿ ನೋಡಿದರೆ, ಪೈಪೋಟಿ ಪ್ರಬಲವಾದಂತಿದೆ.’ ಹೀಗೆಂದು ಹೇಳಿರು ವುದು ಅಮೆರಿಕದಲ್ಲಿ “ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಉದ್ಘೋಷವನ್ನು ಮೊದಲ ಬಳಸಿದ್ದ ಭಾರತೀಯ ಅಮೆರಿ ಕನ್ ಶಲಭ್ ಕುಮಾರ್. ಟ್ರಂಪ್ ಹಾಗೂ ಪ್ರಧಾನಿ ಮೋದಿ ಅವರ ಅಭಿಮಾನಿ ಯಾಗಿರುವ 75 ವರ್ಷದ ಕುಮಾರ್, ಈ ಬಾರಿಯ ಸ್ಪರ್ಧೆ ಕಠಿಣವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ ಬಂದಿ ರದಿದ್ದರೆ ಆರ್ಥಿಕತೆ, ಷೇರು ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿರುತ್ತಿತ್ತು, ನಿರುದ್ಯೋಗವೂ ಕಡಿಮೆಯಿರುತ್ತಿತ್ತು. ಆಗ ಖಂಡಿತಾ ಟ್ರಂಪ್ ಗೆಲುವು ಸುಲಭ ವಾಗುತ್ತಿತ್ತು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!